ನೀರಿಲ್ಲದೇ ಪರದಾಡಿದ 300 ವಿದ್ಯಾರ್ಥಿಗಳು: ಕೊಡ ಹಿಡಿದು ನೀರು ಸಂಗ್ರಹಿಸಲು ಅಲೆದಾಡಿದ ಸ್ಟೂಡೆಂಟ್ಸ್..! - Mahanayaka
5:34 PM Saturday 7 - February 2026

ನೀರಿಲ್ಲದೇ ಪರದಾಡಿದ 300 ವಿದ್ಯಾರ್ಥಿಗಳು: ಕೊಡ ಹಿಡಿದು ನೀರು ಸಂಗ್ರಹಿಸಲು ಅಲೆದಾಡಿದ ಸ್ಟೂಡೆಂಟ್ಸ್..!

17/03/2024

ತೆಲಂಗಾಣದ ಸಿರ್ಸಿಲ್ಲಾ ಜಿಲ್ಲೆಯ ಬಾಲಕಿಯರ ವಸತಿ ಶಾಲೆಯ ಸುಮಾರು 300 ವಿದ್ಯಾರ್ಥಿಗಳು ನೀರಿನ ಕೊರತೆಯಿಂದ ಬಳಲುತ್ತಿರುವ ಘಟನೆ ‌ಬೆಳಕಿಗೆ ಬಂದಿದೆ. ಪದ್ಮನಗರದ ಕಸ್ತೂರ್ಬಾ ಗಾಂಧಿ ಬಾಲಕಿಯರ ಶಾಲೆಯಲ್ಲಿ ಎರಡು ದಿನಗಳ ಹಿಂದೆ ಪಂಪ್ ಮೋಟರ್ ಸರಿಯಾಗಿ ಕಾರ್ಯನಿರ್ವಹಿಸದ ಕಾರಣ ನೀರಿನ ಸಮಸ್ಯೆ ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರಿದೆ.

ಹತ್ತನೇ ತರಗತಿ ಬೋರ್ಡ್ ಪರೀಕ್ಷೆಗಳು ಸೋಮವಾರ ಪ್ರಾರಂಭವಾಗುವುದರಿಂದ ಈ ಬಿಕ್ಕಟ್ಟು ನಿರ್ಣಾಯಕ ಸಮಯದಲ್ಲಿ ಬಂದಿದೆ.
ಪದೇ ಪದೇ ವಿನಂತಿಸಿದರೂ ಶಾಲಾ ಅಧಿಕಾರಿಗಳು ಈ ಸಮಸ್ಯೆಯನ್ನು ಇನ್ನೂ ಪರಿಹರಿಸಿಲ್ಲ ಎಂದು ಆರೋಪಿಸಲಾಗಿದೆ.

ಅನಿವಾರ್ಯವಾಗಿ ವಿದ್ಯಾರ್ಥಿಗಳು ಬಕೆಟ್ ಗಳನ್ನು ಬಳಸಿ ಶಾಲೆಯ ಟ್ಯಾಂಕ್ ನಿಂದ ನೀರನ್ನು ಸಂಗ್ರಹಿಸಲು ಹೋದ ಘಟನೆ ‌ನಡೆಯಿತು. ಆದರೆ ಶಾಲಾ ಅಧಿಕಾರಿಗಳು ಈ ವಿಷಯದ ಬಗ್ಗೆ ತಮಗೆ ತಿಳಿದಿಲ್ಲ ಎಂದು ಉಡಾಫೆಯ ಉತ್ತರ ನೀಡಿದ್ದಾರೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ