ಕೊರೊನಾದಿಂದ ಪುತ್ರ ಸಾವು | ಸುದ್ದಿ ತಿಳಿದು ಆಘಾತಗೊಂಡ ತಂದೆ-ತಾಯಿಯೂ ಸಾವು - Mahanayaka
1:01 AM Thursday 16 - October 2025

ಕೊರೊನಾದಿಂದ ಪುತ್ರ ಸಾವು | ಸುದ್ದಿ ತಿಳಿದು ಆಘಾತಗೊಂಡ ತಂದೆ-ತಾಯಿಯೂ ಸಾವು

kemachari and wife
04/05/2021

ಮಂಡ್ಯ:  ಕೊವಿಡ್ ಗೆ ಮಗ ಬಲಿಯಾದ ಸುದ್ದಿ ಕೇಳಿ ಆಘಾತದಿಂದ ತಂದೆ ಹಾಗೂ ತಾಯಿ ಕೂಡ ಮೃತಪಟ್ಟಿರುವ ದಾರುಣ ಘಟನೆ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಹೆಮ್ಮನಹಳ್ಳಿಯಲ್ಲಿ ನಡೆದಿದೆ.


Provided by

ಮೂರು ದಿನಗಳ ಹಿಂದೆ ಮಗ ತಮ್ಮಯ್ಯಾಚಾರಿಯ ಕೊವಿಡ್ ಗೆ ಬಲಿಯಾಗಿದ್ದರು. ಆದರೆ ಈ ವಿಚಾರವನ್ನು ಕುಟುಂಬಸ್ಥರು ತಂದೆ-ತಾಯಿಯಿಂದ ಮುಚ್ಚಿಟ್ಟಿದ್ದರು. ಆದರೆ ನಿನ್ನೆ ಯಾರೋ ಸಂಬಂಧಿಕರು ಈ ವಿಚಾರವನ್ನು ತಂದೆ-ತಾಯಿಗೆ ತಿಳಿಸಿದ್ದಾರೆ.

ಮಗನ ಸಾವಿನ ಸುದ್ದಿ ಕೇಳಿದ  74 ವರ್ಷ ವಯಸ್ಸಿನ ತಾಯಿ ಜಯಮ್ಮ ಮೊದಲು ಆಘಾತದಿಂದ ಮರಣ ಹೊಂದಿದ್ದು, ಕೆಲವೇ ನಿಮಿಷಗಳಲ್ಲಿ ಇವರ ಪತಿ 84 ವರ್ಷ ವಯಸ್ಸಿನ ಕೆಂಪಚಾರಿ ಕೂಡ ಸಾವನ್ನಪ್ಪಿದ್ದಾರೆ.

ಇತ್ತೀಚಿನ ಸುದ್ದಿ