ಸರ್ವರನ್ನೂ ಪ್ರೀತಿಸುವ ಜಮೀರ್ ಸಿಎಂ ಆಗಲಿ: ಶ್ರೀ ಕುಮಾರೇಶ್ವರ ಸ್ವಾಮೀಜಿ ಆಶೀರ್ವಾದ

ಬೆಳಗಾವಿ: ಜಮೀರ್ ಖಾನ್ ಅವರು ಜಾತಿ, ಧರ್ಮ ನೋಡದೇ ಸರ್ವ ಧರ್ಮಿಯರನ್ನೂ ಪ್ರೀತಿ, ವಿಶ್ವಾಸದಿಂದ ಕಾಣುತ್ತಾ ಸಮಾಜ ಸೇವೆ ಮಾಡುತ್ತಾ ಬಂದಿದ್ದಾರೆ ಅವರು ಮುಂದೆ ಸಿಎಂ ಆಗಲಿ ಎಂದು ಯಕ್ಕುಂಡಿ ವಿರಕ್ತಮಠದ ಶ್ರೀ ಕುಮಾರೇಶ್ವರ ಸ್ವಾಮೀಜಿ ಹೇಳಿದರು.
ಬೆಳಗಾವಿ ಪ್ರವಾಸದಲ್ಲಿದ್ದ ಜಮೀರ್ ಖಾನ್ ವಿರಕ್ತ ಮಠಕ್ಕೆ ಭೇಟಿ ನೀಡಿದ್ದರು. ಈ ವೇಳೆ ನಡೆದ ಕಾರ್ಯಕ್ರಮದಲ್ಲಿಮಾತನಾಡಿದ ಸ್ವಾಮೀಜಿ, ಜಮೀರ್ ಸಿಎಂ ಆಗಲಿ ಎಂದು ಆಶೀರ್ವಾದಿಸಿದರು.
ಕಾರ್ಯಕ್ರಮಕ್ಕೂ ಮೊದಲು ಯಕ್ಕುಂಡಿ ದರ್ಗಾಕ್ಕೆ ಭೇಟಿ ನೀಡಿದ್ದ ಜಮೀರ್ ಅವರು ತಮ್ಮ ಭೇಟಿಯ ಕುರಿತು ಮಾತನಾಡಿ, ಹಿಂದೂ ಮುಸ್ಲಿಮ್ ಭಾವೈಕ್ಯದ ಪ್ರತೀಕವಾದ ಯಕ್ಕುಂಡ ದರ್ಗಾ ಭೇಟಿ ನನಗೆ ಖುಷಿ ನೀಡಿತು ಎಂದ ಹೇಳಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka