ಕ್ಷುಲ್ಲಕ ಕಾರಣಕ್ಕೆ ನಡೀತು ಹಲ್ಲೆ: ವಿದ್ಯಾರ್ಥಿಯನ್ನು ವಿವಸ್ತ್ರಗೊಳಿಸಿ ಗುಂಪಿನಿಂದ ಹಲ್ಲೆ - Mahanayaka
1:25 AM Wednesday 17 - September 2025

ಕ್ಷುಲ್ಲಕ ಕಾರಣಕ್ಕೆ ನಡೀತು ಹಲ್ಲೆ: ವಿದ್ಯಾರ್ಥಿಯನ್ನು ವಿವಸ್ತ್ರಗೊಳಿಸಿ ಗುಂಪಿನಿಂದ ಹಲ್ಲೆ

14/01/2025

ವಿದ್ಯಾರ್ಥಿಯೊಬ್ಬನನ್ನು 10-15 ಮಂದಿಯ ಗುಂಪೊಂದು ವಿವಸ್ತ್ರಗೊಳಿಸಿ ಥಳಿಸಿದ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ. ರೈಲ್ವೆ ಹಳಿಯ ಬಳಿ ನಡೆದ ಈ ದಾಳಿಯಲ್ಲಿ ವಿದ್ಯಾರ್ಥಿಗೆ ಗಂಭೀರ ಗಾಯಗಳಾಗಿವೆ.


Provided by

ವಿರಾಜ್ ತ್ರಿಪಾಠಿ ಮೂಲತಃ ಔರೈಯಾ ಮೂಲದವರಾಗಿದ್ದು, ಭಾನುವಾರ ಸಂಜೆ ಸ್ನೇಹಿತನ ಫ್ಲಾಟ್ ಗೆ ಭೇಟಿ ನೀಡಿ ಮನೆಗೆ ಹಿಂದಿರುಗುತ್ತಿದ್ದಾಗ ಕಲ್ಯಾಣಪುರ ಪ್ರದೇಶದ ಬಳಿ ಗುಂಪೊಂದು ಅವರನ್ನು ತಡೆದಿದೆ.

ವಿರಾಜ್ ಪ್ರಕಾರ, ಪುರುಷರು ಅವನನ್ನು ರೈಲ್ವೆ ಹಳಿಗಳಿಗೆ ಎಳೆದೊಯ್ದು ವಿವಸ್ತ್ರಗೊಳಿಸಿ ಕಲ್ಲುಗಳಿಂದ ಥಳಿಸಿದ್ದಾರೆ. ಅವರ ತಲೆಗೆ ಗಾಯ ಮತ್ತು ಇತರ ಗಾಯಗಳಾಗಿದ್ದು, ಹಲ್ಲೆ ನಿಲ್ಲಿಸುವಂತೆ ದಾಳಿಕೋರರಿಗೆ ಪದೇ ಪದೇ ಮನವಿ ಮಾಡಿದ್ದಾರೆ. ಸ್ಥಳೀಯರು ಮತ್ತು ದಾರಿಹೋಕರು ಮಧ್ಯಪ್ರವೇಶಿಸಿ ಅವನನ್ನು ರಕ್ಷಿಸುವವರೆಗೂ ಹಲ್ಲೆ ಮುಂದುವರಿಯಿತು.

ದಾಳಿಕೋರರಲ್ಲಿ ಓರ್ವನನ್ನು ಮಿಲನ್ ಶುಕ್ಲಾ ಎಂದು ಗುರುತಿಸಿರುವ ವಿರಾಜ್, ಹಿಂದಿನ ದಿನದ ವಾಗ್ವಾದದಿಂದ ಈ ದಾಳಿ ನಡೆದಿದೆ ಎಂದು ಆರೋಪಿಸಿದ್ದಾರೆ. ವಾಗ್ವಾದದ ಸಮಯದಲ್ಲಿ, ಮಿಲನ್ ತನಗೆ ಬೆದರಿಕೆ ಹಾಕಿದ್ದಾನೆ ಎಂದು ವರದಿಯಾಗಿದೆ. ಅಲ್ಲದೇ ಪ್ರತೀಕಾರವಾಗಿ ದಾಳಿಯನ್ನು ಯೋಜಿಸಲಾಗಿದೆ ಎಂದು ವಿರಾಜ್ ಹೇಳಿದ್ದಾರೆ.

ದಾಳಿಕೋರರು ವಿರಾಜ್ ಅವರ ಪಾದಗಳನ್ನು ಮುಟ್ಟುವಂತೆ ಬಲವಂತ ಮಾಡಿ ಹಲ್ಲೆ‌ ಮಾಡುವುದನ್ನು ಚಿತ್ರೀಕರಿಸಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಸಹಾಯಕ ಪೊಲೀಸ್ ಆಯುಕ್ತ ಅಭಿಷೇಕ್ ಪಾಂಡೆ ತಿಳಿಸಿದ್ದಾರೆ. ಔಪಚಾರಿಕ ದೂರು ದಾಖಲಿಸಲಾಗುತ್ತಿದ್ದು, ಇದರಲ್ಲಿ ಭಾಗಿಯಾಗಿರುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ