ಸರ್ಕಾರಿ ಯೋಜನೆಗಳಲ್ಲಿ 2 ಕೋಟಿ ವಂಚನೆ: ತೆಲಂಗಾಣ ಕೃಷಿ ಅಧಿಕಾರಿ ಅರೆಸ್ಟ್ - Mahanayaka

ಸರ್ಕಾರಿ ಯೋಜನೆಗಳಲ್ಲಿ 2 ಕೋಟಿ ವಂಚನೆ: ತೆಲಂಗಾಣ ಕೃಷಿ ಅಧಿಕಾರಿ ಅರೆಸ್ಟ್

28/02/2024


Provided by

ತೆಲಂಗಾಣ ಸರ್ಕಾರದ ರೈತ ಬಿಮಾ ಮತ್ತು ರೈತ ಬಂಧು ಯೋಜನೆಗಳಿಗೆ ನಿಗದಿಪಡಿಸಿದ ಹಣವನ್ನು ಬೇರೆಡೆಗೆ ತಿರುಗಿಸಿದ ಇಬ್ಬರು ವ್ಯಕ್ತಿಗಳನ್ನು ಸೈಬರಾಬಾದ್‌ನ ಆರ್ಥಿಕ ಅಪರಾಧಗಳ ವಿಭಾಗ (ಇಒಡಬ್ಲ್ಯೂ) ಬಂಧಿಸಿದೆ. ಆರೋಪಿಗಳಾದ ಗೋರೆಟಿ ಶ್ರೀಶೈಲಂ ಮತ್ತು ಅವರ ಸಹಾಯಕ ಒಡೆಲಾ ವೀರ ಸ್ವಾಮಿ ಅವರು ಸುಮಾರು 2 ಕೋಟಿ ವಂಚನೆ ಮಾಡಿರುವುದು ತನಿಖೆಯಲ್ಲಿ ಬಯಲಾಗಿದೆ.

ಆರ್ ಆರ್ ಜಿಲ್ಲೆಯ ಕೊಂಡೂರ್ಗ್ ಮಂಡಲದ ಅಗಿರಿಯಾಲ್ ಕ್ಲಸ್ಟರ್ ನಲ್ಲಿ ಕೃಷಿ ವಿಸ್ತರಣಾ ಅಧಿಕಾರಿಯಾಗಿ (ಎಇಒ) ಕೆಲಸ ಮಾಡುತ್ತಿದ್ದ ಗೋರೆಟಿ ಶ್ರೀಶೈಲಂ ಅವರು ವ್ಯವಸ್ಥೆಯನ್ನು ತಿರುಚಲು ತಮ್ಮ ಸ್ಥಾನವನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ಇವರು ರೈತ ಬಿಮಾ ಯೋಜನೆಯಡಿ ನಕಲಿ ಅಕೌಂಟ್ ಗಳನ್ನು ಮಾಡಿ ಅನರ್ಹ ವ್ಯಕ್ತಿಗಳನ್ನು ನೋಂದಾಯಿಸಿ ನಕಲಿ ದಾಖಲೆಗಳನ್ನು ಸೃಷ್ಟಿಸಿ 1 ಕೋಟಿ ರೂ.ಗಳನ್ನು ದುರುಪಯೋಗಪಡಿಸಿಕೊಂಡಿದ್ದಾರೆ.

ಶ್ರೀಶೈಲಂ ಅವರು 130 ಹಕ್ಕುದಾರರಲ್ಲದವರು ಮತ್ತು ಪಟ್ಟಾದಾರರಿಗೆ ರೈತ ಬಂಧು ಯೋಜನೆಯಡಿ ಪ್ರಯೋಜನಗಳ ಬಗ್ಗೆ ಸುಳ್ಳು ಹೇಳಿ ಹೆಚ್ಚುವರಿಯಾಗಿ 1 ಕೋಟಿ ರೂ.ಗಳನ್ನು ವಂಚನೆ ‌ಮಾಡಿದ್ದಾರೆ.

ಪೊಲೀಸರ ಪ್ರಕಾರ, ಆರೋಪಿಗಳು ಯೋಜನೆಗಳಿಗೆ ವ್ಯಕ್ತಿಗಳನ್ನು ನೋಂದಾಯಿಸಲು ನಕಲಿ ಹೆಸರುಗಳು ಮತ್ತು ಆಧಾರ್ ಸಂಖ್ಯೆಗಳನ್ನು ಬಳಸಿದ್ದಾರೆ. ನಂತರ, ಅವರು ವಿಮಾ ಮೊತ್ತವನ್ನು ಪಡೆಯಲು ನಕಲಿ ಮರಣ ಪ್ರಮಾಣಪತ್ರಗಳು ಮತ್ತು ನಕಲಿ ದಾಖಲೆಗಳನ್ನು ಸಲ್ಲಿಸಿದ್ದರು. ನಂತರ ಅವುಗಳನ್ನು ಅವರು ಮತ್ತು ಅವರ ಸಹಚರರ ನಿಯಂತ್ರಣದಲ್ಲಿರುವ ಅನೇಕ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಯಿತು.

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ