"ಬಹಳ ದುರ್ಬಲವಾಗಿರುವ ಬಿಜೆಪಿ ನನ್ನನ್ನು ಸ್ವಾಗತಿಸಲು ಸಿದ್ಧವಾಗಿದೆ": ಪ್ರಭಾವಿ ದಲಿತ ನಾಯಕಿ ಕುಮಾರಿ ಸೆಲ್ಜಾ ಉವಾಚ - Mahanayaka
3:47 PM Saturday 18 - October 2025

“ಬಹಳ ದುರ್ಬಲವಾಗಿರುವ ಬಿಜೆಪಿ ನನ್ನನ್ನು ಸ್ವಾಗತಿಸಲು ಸಿದ್ಧವಾಗಿದೆ”: ಪ್ರಭಾವಿ ದಲಿತ ನಾಯಕಿ ಕುಮಾರಿ ಸೆಲ್ಜಾ ಉವಾಚ

05/10/2024

“ಈಗಾಗಲೇ ಬಹಳ ದುರ್ಬಲವಾಗಿರುವ ಬಿಜೆಪಿ ನನ್ನನ್ನು ಸ್ವಾಗತಿಸಲು ಸಿದ್ಧವಾಗಿದೆ” ಎಂದು ಹರಿಯಾಣದ ಪ್ರಭಾವಿ ದಲಿತ ನಾಯಕಿ ಕುಮಾರಿ ಸೆಲ್ಜಾ ಹೇಳಿದ್ದಾರೆ.


Provided by

ಹರಿಯಾಣ ವಿಧಾನಸಭಾ ಚುನಾವಣೆಯ ಕಾಂಗ್ರೆಸ್ ಪ್ರಚಾರಕ್ಕೆ ಗೈರುಹಾಜರಾಗಿದ್ದ ಸಿರ್ಸಾ ಸಂಸದೆ ಕುಮಾರಿ ಸೆಲ್ಜಾ ರಿಗೆ ಕೇಂದ್ರ ಸಚಿವ ಮನೋಹರ್ ಲಾಲ್ ಖಟ್ಟರ್ ಬಿಜೆಪಿ ಸೇರುವಂತೆ ಆಹ್ವಾನ ನೀಡಿದ್ದರು.
ಹರಿಯಾಣದ 90 ವಿಧಾನಸಭಾ ಕ್ಷೇತ್ರಗಳಿಗೆ ಇಂದು ಮತದಾನ ಆರಂಭವಾಗುತ್ತಿದ್ದಂತೆ ಕಾಂಗ್ರೆಸ್ ಸಂಸದೆ, ಹರಿಯಾಣ ರಾಜ್ಯದ ಪ್ರಮುಖ ದಲಿತ ಸಮುದಾಯದ ಕುಮಾರಿ ಪ್ರಭಾವಿ ರಾಜಕಾರಣಿ ಸೆಲ್ಜಾ ಈ ಹೇಳಿಕೆ ನೀಡಿದ್ದಾರೆ.

ಕಾಂಗ್ರೆಸ್‌ನ ಅತ್ಯಂತ ಹಿರಿಯ ದಲಿತ ಮುಖಗಳಲ್ಲಿ ಒಬ್ಬರಾದ ಸೆಲ್ಜಾ ಹಲವಾರು ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಭಾವ ಹೊಂದಿದ್ದಾರೆ.

ಹಿಸಾರ್‌ನ ಮತಗಟ್ಟೆಯಲ್ಲಿ ಮತ ಚಲಾಯಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸೆಲ್ಜಾ, “ಇಂದಿನ ಹೋರಾಟ ಹರಿಯಾಣದ ಹಣೆಬರಹವನ್ನೇ ಬದಲಿಸಲಿದೆ. ಇದು ಏಕಪಕ್ಷೀಯ ಸ್ಪರ್ಧೆಯಾದರೂ. ಬಿಜೆಪಿ ನನ್ನನ್ನು ಸ್ವಾಗತಿಸಲು ಸಿದ್ಧವಾಗಿದೆ. ಅವರು ತಮ್ಮೊಂದಿಗೆ ಪ್ರಬಲ ನಾಯಕರನ್ನು ಹೊಂದಲು ಏನು ಬೇಕಾದರೂ ಮಾಡಬಲ್ಲವರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮತದಾನಕ್ಕೆ ಮುನ್ನಾದಿನ ಮಾತನಾಡಿದ್ದ ಅವರು, “ಉನ್ನತ ಹುದ್ದೆಗೆ (ಸಿಎಂ) ಮುಂಚೂಣಿಯಲ್ಲಿರುವವರು ಎಂದು ಪರಿಗಣಿಸಲು ಸಾಕಷ್ಟು ತೂಕವನ್ನು ಹೊಂದಿರುವ ಹಿರಿಯ ನಾಯಕಿ” ಎಂದು ತಮ್ಮ ಬಗ್ಗೆ ಹೇಳಿಕೊಂಡಿದ್ದರು.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ