ಆಗಸ್ಟ್ 17ರವರೆಗೆ ಈ 17 ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ!

ಬೆಂಗಳೂರು: ಕರ್ನಾಟಕದ 17 ಜಿಲ್ಲೆಗಳಲ್ಲಿ ಆಗಸ್ಟ್ 17ರವರೆಗೆ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬಾಗಲಕೋಟೆ, ಬೆಳಗಾವಿ, ಬೀದರ್, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಹಾಸನ, ಕೋಲಾರ, ಮಂಡ್ಯ, ಮೈಸೂರು, ತುಮಕೂರಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಬೆಂಗಳೂರು ನಗರ, ಚಾಮರಾಜನಗರ, ಗದಗ, ಧಾರವಾಡ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ರಾಮನಗರ, ಕೊಡಗು, ಚಿಕ್ಕಮಗಳೂರು, ವಿಜಯನಗರದಲ್ಲಿ ಮಳೆಯಾಗಲಿದೆ.
ಗೌರಿಬಿದನೂರು, ಅಫ್ಝಲ್ ಪುರ, ತಾವರಗೇರಾ, ಬರಗೂರು, ಕೆರೂರು, ಕೆಂಭಾವಿ, ಬಿಳಗಿ, ಹುನಗುಂದ, ಚಿಂಚೋಳಿ, ಬೆಳ್ಳಟ್ಟಿ, ಮಂಠಾಳ, ಹೊಸಕೋಟೆ, ಗಂಗಾವತಿ, ಬೆಂಗಳೂರು ನಗರ, ಗಂಗಾಪುರ, ಸಿಂದಗಿ, ಕೂಡಲಸಂಗಮ, ಹರಪನಹಳ್ಳಿ, ದೇವರಹಿಪ್ಪರಗಿ, ತಾಳಿಕೋಟೆ, ನಾಯಕನಹಟ್ಟಿ, ನಾರಾಯಣಪುರ, ಮದ್ದೂರು, ಕಮಲಾಪುರ, ಕಲಬುರಗಿ, ಜಗಳೂರಿನಲ್ಲಿ ಮಳೆಯಾಗಿದೆ.
ತಿಪಟೂರು, ಸಿದ್ದಾಪುರ, ಶೋರಾಪುರ, ಮಹಾಲಿಂಗಪುರ, ಲೋಕಾಪುರ, ಮುದಗಲ್, ಕೃಷ್ಣರಾಜಪೇಟೆ, ಕಮ್ಮರಡಿ, ಕೆಆರ್ ನಗರ, ಹಿರಿಯೂರು, ಗುಳೇಗೋಡು, ಅಜ್ಜಂಪುರ, ಬಸವನಬಾಗೇವಾಡಿ, ಅಥಣಿ, ಆಲಮಟ್ಟಿ, ವಿಜಯಪುರ, ತರೀಕೆರೆ, ಟಿಜಿ ಹಳ್ಳಿ, ಶಿರಹಟ್ಟಿ, ರಬಕವಿ, ನಾಗಮಂಗಲ, ಮಿಡಿಗೇಶಿ, ಮೈಸೂರು, ಕೋಲಾರ, ಜೇವರ್ಗಿ, ಜಯಪುರ, ಹುಕ್ಕೇರಿ, ಗುಬ್ಬಿ, ಧರ್ಮಸ್ಥಳ, ಚಿತ್ತಾಪುರ, ಚಿಕ್ಕೋಡಿ, ಚನ್ನರಾಯಪಟ್ಟಣ, ಚಾಮರಾಜನಗರ, ಭದ್ರಾವತಿ, ಬನವಾಸಿ, ಔರಾದ್ನಲ್ಲಿ ಮಳೆಯಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD