ಆಟೋ ಮೇಲೆ ಬಿದ್ದ ಮರ: ಆಟೋ ಚಾಲಕನ ದಾರುಣ ಸಾವು - Mahanayaka

ಆಟೋ ಮೇಲೆ ಬಿದ್ದ ಮರ: ಆಟೋ ಚಾಲಕನ ದಾರುಣ ಸಾವು

koppa
25/05/2025

ಚಿಕ್ಕಮಗಳೂರು:   ಮಹಾಮಳೆಗೆ ಮಲೆನಾಡಲ್ಲಿ ಮೂರನೇ ಬಲಿಯಾಗಿದೆ.  ಗಾಳಿ–ಮಳೆ ಅಬ್ಬರಕ್ಕೆ ಮಲೆನಾಡಿಗರು ನಲುಗಿದ್ದಾರೆ.

ಈ ನಡುವೆ  ಆಟೋ ಮೇಲೆ ಮರ ಬಿದ್ದು ಚಾಲಕ ಸಾವನ್ನಪ್ಪಿದ್ದು, ಮೃತ ಆಟೋ ಚಾಲಕನನ್ನು ರತ್ನಾಕರ್ ಎಂದು ಗುರುತಿಸಲಾಗಿದೆ. ಕೊಪ್ಪ ತಾಲೂಕಿನ ಭೈರೇದೇವರು ಗ್ರಾಮದ ಬಳಿ ಈ ದುರ್ಘಟನೆ  ನಡೆದಿದೆ.

ಆಟೋ ಚಲಿಸುತ್ತಿದ್ದ ವೇಳೆ ಈ ಘಟನೆ ನಡೆದಿದ್ದು, ಮರ ಬಿದ್ದ ರಭಸಕ್ಕೆ ಆಟೋ ಸಂಪೂರ್ಣ ಜಖಂ ಆಗಿದೆ. ಘಟನೆ ಸಂಬಂಧ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ