ದಟ್ಟ ಮಂಜು ಆವರಿಸಿದ್ದರಿಂದ ಏನೂ ಕಾಣುತ್ತಿರಲಿಲ್ಲ:  ಟ್ಯಾಂಕರ್ ಗಳೆರಡರ ನಡುವೆ ನಡೆಯಿತು ಭೀಕರ ಅಪಘಾತ - Mahanayaka

ದಟ್ಟ ಮಂಜು ಆವರಿಸಿದ್ದರಿಂದ ಏನೂ ಕಾಣುತ್ತಿರಲಿಲ್ಲ:  ಟ್ಯಾಂಕರ್ ಗಳೆರಡರ ನಡುವೆ ನಡೆಯಿತು ಭೀಕರ ಅಪಘಾತ

27/02/2021

ಕಡಬ: ಟ್ಯಾಂಕರ್ ಗಳೆರಡು ಮುಖಾಮುಖಿ ಡಿಕ್ಕಿಯಾದ ಘಟನೆ ನಡೆದಿದ್ದು,  ಪರಿಣಾಮ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಸಂಚಾರ ಸ್ಥಗಿತಗೊಂಡ ಘಟನೆ ನಡೆದಿದೆ. ಘಟನೆ ಇಲ್ಲಿನ ನೆಲ್ಯಾಡಿ ಅಶ್ವಿನಿ ಆಸ್ಪತ್ರೆಯ ಎದುರು ನಡೆದಿದೆ.

ಮಂಗಳೂರಿನಿಂದ ಬೆಂಗಳೂರಿಗೆ ಚಲಿಸುತ್ತಿದ್ದ ಗ್ಯಾಸ್ ಟ್ಯಾಂಕರ್ ಕೋಲಾರದಿಂದ ಮಂಗಳೂರಿಗೆ ಹೋಗುತ್ತಿದ್ದು, ಈ ವೇಳೆ ಎರಡು ವಾಹನಗಳ ನಡುವೆ ಡಿಕ್ಕಿ ಸಂಭವಿಸಿದೆ. ಘಟನೆಯಲ್ಲಿ ಎರಡೂ ಟ್ಯಾಂಕರ್ ನ ಚಾಲಕರಿಗೂ ಗಾಯವಾಗಿದೆ. ಆದರೆ ಅವರು ಅಪಾಯದಿಂದ ಪಾರಾಗಿದ್ದಾರೆ.

ಮುಂಜಾನೆಯ ವೇಳೆ ದಟ್ಟ ಮಂಜು ಆವರಿಸಿದ್ದು, ಇದರಿಂದಾಗಿ ಒಂದು ವಾಹನಕ್ಕೆ ಇನ್ನೊಂದು ವಾಹನ ಕಾಣದೇ ಅಪಘಾತ ಸಂಭವಿಸಿದೆ ಎಂದು ಹೇಳಲಾಗಿದೆ. ಘಟನೆ ಸಂಬಂಧ ನೆಲ್ಯಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಇತ್ತೀಚಿನ ಸುದ್ದಿ