ವಿದ್ಯಾರ್ಥಿ ಮೇಲೆ ಕಾಡು ಹಂದಿ ದಾಳಿ - Mahanayaka
10:17 PM Thursday 15 - January 2026

ವಿದ್ಯಾರ್ಥಿ ಮೇಲೆ ಕಾಡು ಹಂದಿ ದಾಳಿ

kerala
28/05/2022

ವಿದ್ಯಾರ್ಥಿಯೊರ್ವನ ಮೇಲೆ ಕಾಡುಹಂದಿಯ ದಾಳಿ ನಡೆಸಿದ ಘಟನೆ ಕೋಯಿಕ್ಕೋಡ್‌ ನ ತಿರುವಂಬಾಡಿಯಲ್ಲಿ ಎಂಬಲ್ಲಿ ನಡೆದಿದೆ.ಕಾಡು ಹಂದಿಯ ದಾಳಿಗೆ ಒಳಾಗದ ಬಾಲಕನನ್ನು ಶನೂಪ್ ಅವರ ಪುತ್ರ ಅಧೀನನ್ (12) ಎಂದು ಗುರುತಿಸಲಾಗಿದೆ.

ಬೆಳಗ್ಗೆ ಬಾಲಕನು  ಮನೆಯಿಂದ ಸೈಕಲ್ ನಲ್ಲಿ ಹೋಗುತಿರುವ ಸಂದರ್ಭದಲ್ಲಿ ಕಾಡುಹಂದಿ ದಾಳಿ ಮಾಡಿದ್ದು,ಬಾಲಕನ ಎರಡು ಕಾಲುಗಳಿಗೂ ಕಾಡುಹಂದಿ ಇರಿದಿದೆ.ದಾಳಿಯಲ್ಲಿ ಗಾಯಗೊಂಡ  ವಿದ್ಯಾರ್ಥಿಯನ್ನು ಕೋಯಿಕ್ಕೋಡ್‌ ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬಾಲಕನಿಗೆ ದಾಳಿ ನಡೆಸಿದ ನಂತರ ತಪ್ಪಿಸಿಕೊಂಡ  ಕಾಡು ಹಂದಿಯು ಪಕ್ಕದ ಮನೆಯೊಂದಕ್ಕೆ ನುಗ್ಗಿ ಭಯ ಹುಟ್ಟಿಸಿದ್ದು,  ಸ್ಥಳೀಯರು ಹಂದಿಯನ್ನು ಮನೆಯೊಳಗೆ ಕೂಡಿಹಾಕಿ ಬೀಗ ಜಡಿದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.    ಸ್ಥಳಕ್ಕಾಗಮಿಸಿದ ಅರಣ್ಯಾಧಿಕಾರಿಗಳು  ಕಾಡು ಹಂದಿಯನ್ನು ಹೊಡೆದುರುಳಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ https://chat.whatsapp.com/FZkISFWKknBDvdYkMVFArW

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಒಂದೆಲಗ ಸೇವನೆಯಿಂದ ಪಡೆಯಿರಿ ಈ ಅದ್ಭುತ ಪ್ರಯೋಜನಗಳು

ಬಾವಿ ಕಾಣೆಯಾಗಿದೆ ಹುಡುಕಿಕೊಡಿ ಎಂದು ಪೊಲೀಸರಿಗೆ ದೂರು!

ಮುಸ್ಲಿಂ ಯುವತಿಯನ್ನು ಪ್ರೀತಿಸಿದ್ದಕ್ಕೆ ದಲಿತ ಯುವಕನ ಕೊಲೆ: ಕಠಿಣ ಶಿಕ್ಷೆ ಕೊಡಿಸುತ್ತೇವೆ: ಸಚಿವ ಮುರುಗೇಶ್ ನಿರಾಣಿ

ಬಡ ಎಸ್ಸಿ-ಎಸ್ ಟಿ ಕುಟುಂಬಗಳಿಗೆ ಉಚಿತ ವಿದ್ಯುತ್: ಬಿಜೆಪಿ ಸರ್ಕಾರ ಆದೇಶ

ದಲಿತ ಯುವಕನನ್ನು ಸರಪಳಿಯಿಂದ ಬಂಧಿಸಿ ಅಮಾನುಷ ಹಲ್ಲೆ

 

 

ಇತ್ತೀಚಿನ ಸುದ್ದಿ