ಎಸಿಯಿಂದ ಬೀಳುತ್ತಿದ್ದ ನೀರನ್ನು ತೀರ್ಥವೆಂದು ಕುಡಿದ ಭಕ್ತರು: ವೀಡಿಯೋ ವೈರಲ್ - Mahanayaka

ಎಸಿಯಿಂದ ಬೀಳುತ್ತಿದ್ದ ನೀರನ್ನು ತೀರ್ಥವೆಂದು ಕುಡಿದ ಭಕ್ತರು: ವೀಡಿಯೋ ವೈರಲ್

04/11/2024

ಎಸಿಯಿಂದ ಬೀಳುತ್ತಿದ್ದ ನೀರನ್ನು ತೀರ್ಥವೆಂದು ಭಕ್ತರು ಕುಡಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದ್ದು ವಿಡಿಯೋ ವೈರಲ್ ಆಗಿದೆ. ಮಥುರಾ ಬೃಂದಾವನದ ಬಂಕೆ ಬಿಹಾರಿ ಮಂದಿರದಲ್ಲಿ ಈ ಘಟನೆ ನಡೆದಿದೆ. ಮಂದಿರದ ಆನೆಯ ಪ್ರತಿಮೆಯಿಂದ ಬರುತ್ತಿರುವ ನೀರನ್ನೇ ಅಲ್ಲಿನ ಭಕ್ತರು ಚರಣಾಮೃತ ಎಂದು ಭಾವಿಸಿ ತೀರ್ಥವಾಗಿ ಕುಡಿಯುತ್ತಾರೆ. ಕೆಲವರು ಗ್ಲಾಸಿನಲ್ಲಿ ಮನೆಗೆ ಕೊಂಡೊಯ್ಯುತ್ತಾರೆ. ದೇಹದ ಮೇಲೆಯೂ ಸಿಂಪಡಿಸಿಕೊಳ್ಳುತ್ತಾರೆ.

ಆದರೆ ಈ ಚರಣಾಮೃತದ ಹಿಂದೆ ಏನಿದೆ ಎಂಬುದನ್ನು ಓರ್ವ ವ್ಲಾಗರ್ ಪತ್ತೆ ಹಚ್ಚುವ ಮೂಲಕ ಇಡೀ ಘಟನೆ ಬೆಳಕಿಗೆ ಬಂದಿದೆ.
ಈ ದೃಶ್ಯವನ್ನು ಸೆರೆಹಿಡಿದಿರುವ ವ್ಲಾಗರ್ ಅವರು ಆ ನೀರಿನ ಬಗ್ಗೆ ನಿಜ ಮಾಹಿತಿಯನ್ನು ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ. ಇದು ಎಸಿಯ ನೀರು ಎಂದು ಮಂದಿರದ ಅರ್ಚಕ ತನ್ನಲ್ಲಿ ಹೇಳಿರುವುದಾಗಿ ವ್ಲಾಗರ್ ವಿಡಿಯೋದಲ್ಲಿ ಹೇಳಿದ್ದಾರೆ. ಮಾತ್ರ ಅಲ್ಲ ಆ ನೀರನ್ನು ಕುಡಿಯುತ್ತಿದ್ದ ಮತ್ತು ದೇಹದ ಮೇಲೆ ಸಿಂಪಡಿಸಿಕೊಳ್ಳುತ್ತಿದ್ದ ಭಕ್ತರಲ್ಲೂ ಅವರು ಈ ಸಂಗತಿಯನ್ನು ಹೇಳಿದ್ದು ವಿಡಿಯೋದಲ್ಲಿ ಸೆರೆಯಾಗಿದೆ.

ಆದರೆ ಹೆಚ್ಚಿನವರು ಅವರನ್ನು ನಿರ್ಲಕ್ಷಿಸಿ ಮುಂದೆ ಹೋಗಿರುವುದು ವಿಡಿಯೋದಲ್ಲಿ ಕಾಣಿಸುತ್ತದೆ. ಮಥುರಾದ ಈ ದೇವಸ್ಥಾನಕ್ಕೆ ಪ್ರತಿದಿನ 15000 ಕ್ಕಿಂತಲೂ ಅಧಿಕ ಭಕ್ತರು ಆಗಮಿಸುತ್ತಿದ್ದಾರೆ. ಇಷ್ಟೊಂದು ಜನನಿಬಿಡ ಪ್ರದೇಶದಲ್ಲಿ ಜನರು ಹೀಗೆ ನೀರು ಕುಡಿಯುವುದು ಅವರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಬಹುದು ಎಂದು ಹೇಳಲಾಗುತ್ತಿದೆ. ಈ ವಿಷಯದಲ್ಲಿ ಈವರೆಗೆ ಮಂದಿರದಿಂದ ಯಾವುದೇ ಸ್ಪಷ್ಟೀಕರಣ ಹೊರ ಬಂದಿಲ್ಲ.


Provided by

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ