ಕರ್ನಾಟದ ಅತ್ಯಂತ ಎತ್ತರದ ಪ್ರದೇಶದಲ್ಲಿ ಧ್ವಜಾರೋಹಣ ಮಾಡಿದ ಯೋಧರು

27/08/2023
ಚಿಕ್ಕಮಗಳೂರು: ಕರ್ನಾಟದ ಅತ್ಯಂತ ಎತ್ತರದ ಪ್ರದೇಶದಲ್ಲಿ ಯೋಧರು ಧ್ವಜಾರೋಹಣ ಮಾಡಿದ್ದು, ರಾಷ್ಟ್ರೀಯ ಪರ್ವತಾರೋಹಣ–ಸಾಹಸ ಕ್ರೀಡೆಗಳ ಸಂಸ್ಥೆಯಿಂದ ಈ ಕಾರ್ಯಕ್ರಮ ನಡೆಯಿತು.
ಚಿಕ್ಕಮಗಳೂರು ತಾಲೂಕಿನ ಮುಳ್ಳಯ್ಯನಗಿರಿ ತುದಿಗೆ ಚಾರಣ ತೆರಳಿದ ಕರ್ನಲ್ ರಣವೀರ್ ಸಿಂಗ್ ನೇತೃತ್ವದ 14 ಜನ ಯೋಧರ ತಂಡ ಮುಳ್ಳಯ್ಯನಗಿರಿಯಲ್ಲಿ ಧ್ವಜಾರೋಹಣ ನೆರವೇರಿಸಿದರು.
28 ರಾಜ್ಯಗಳ ಪೈಕಿ 17 ರಾಜ್ಯಗಳ ಶಿಖರದಲ್ಲಿ ಸೈನಿಕರ ತಂಡ ರಾಷ್ಟ್ರಧ್ವಜ ಹಾರಿಸಿದ್ದಾರೆ. 14 ಜನರೂ ಕೈಯಲ್ಲಿ ಭಾವುಟ ಹಿಡಿದು ಮುಳ್ಳಯ್ಯನಗಿರಿಯಲ್ಲಿ ಧ್ವಜಾರೋಹಣ ಮಾಡಿದ್ರು.