'ಅವತ್ತು ಅವಶೇಷಗಳು ಬಿದ್ದಾಗ...': ಸುರಂಗ ಕುಸಿತದ ಕರಾಳ ಕ್ಷಣವನ್ನು ನೆನಪಿಸಿಕೊಂಡ ಉತ್ತರಕಾಶಿ ಕಾರ್ಮಿಕ ಹೇಳಿದ್ದೇನು ಗೊತ್ತಾ..? - Mahanayaka

‘ಅವತ್ತು ಅವಶೇಷಗಳು ಬಿದ್ದಾಗ…’: ಸುರಂಗ ಕುಸಿತದ ಕರಾಳ ಕ್ಷಣವನ್ನು ನೆನಪಿಸಿಕೊಂಡ ಉತ್ತರಕಾಶಿ ಕಾರ್ಮಿಕ ಹೇಳಿದ್ದೇನು ಗೊತ್ತಾ..?

29/11/2023


Provided by

ಉತ್ತರಕಾಶಿಯಲ್ಲಿ ಕುಸಿದ ಸಿಲ್ಕ್ಯಾರಾ ಸುರಂಗದಿಂದ ರಕ್ಷಿಸಲ್ಪಟ್ಟ 41ಮಂದಿ‌ ಕಾರ್ಮಿಕರಲ್ಲಿ ಒಬ್ಬರಾದ ವಿಶ್ವಜೀತ್ ಕುಮಾರ್ ವರ್ಮಾ ಬುಧವಾರ ತಾವು ಎದುರಿಸಿದ ಅಗ್ನಿಪರೀಕ್ಷೆಯ ಕುರಿತು ವಿವರ ನೀಡಿದರು. ಸುದ್ದಿ ಸಂಸ್ಥೆ ಎಎನ್ಐ ಜೊತೆ ಮಾತನಾಡಿದ ಕಾರ್ಮಿಕ, ಸಿಕ್ಕಿಬಿದ್ದ ಇತರರೊಂದಿಗೆ ಸುರಂಗದೊಳಗೆ ಆಹಾರವನ್ನು ಒದಗಿಸಲಾಗಿತ್ತು ಎಂದು ಹೇಳಿದರು.

“ಅವಶೇಷಗಳು ಬಿದ್ದಾಗ ನಾವು ಅದರೊಳಗಡೆ ಸಿಲುಕಿಕೊಂಡಿದ್ದೇವೆ ಎಂದು ನಮಗೆ ತಿಳಿದಿತ್ತು” ಎಂದು ವರ್ಮಾ ಹೇಳಿದರು.
“ಮೊದಲ 10-15 ಗಂಟೆಗಳ ಕಾಲ ನಾವು ಕಷ್ಟವನ್ನು ಎದುರಿಸಿದ್ದೇವು. ಆದರೆ ನಂತರ ನಮಗೆ ಅಕ್ಕಿ, ಬೇಳೆ ಮತ್ತು ಒಣ ಹಣ್ಣುಗಳನ್ನು ಒದಗಿಸಲು ಪೈಪ್ ಹಾಕಲಾಯಿತು. ನಂತರ ಮೈಕ್ ಅನ್ನು ಸ್ಥಾಪಿಸಲಾಯಿತು ಮತ್ತು ನಾನು ನನ್ನ ಕುಟುಂಬ ಸದಸ್ಯರೊಂದಿಗೆ ಮಾತನಾಡಲು ಸಾಧ್ಯವಾಯಿತು” ಎಂದಿದ್ದಾರೆ.

“ನಾನು ಈಗ ಸಂತೋಷವಾಗಿದ್ದೇನೆ, ಈಗ ದೀಪಾವಳಿಯನ್ನು ಆಚರಿಸುತ್ತೇನೆ” ಎಂದು ಖುಷಿಯಿಂದ ಹೇಳಿದರು.
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಚಾರ್ ಧಾಮ್ ಯೋಜನೆಯ ಭಾಗವಾದ ಸಿಲ್ಕ್ಯಾರಾ ಸುರಂಗದ ಒಂದು ಭಾಗವು ನವೆಂಬರ್ 12 ರಂದು ಭೂಕುಸಿತದಿಂದಾಗಿ ಕುಸಿದ ನಂತರ ಸಿಕ್ಕಿಬಿದ್ದ ಎಲ್ಲಾ 41 ಕಾರ್ಮಿಕರನ್ನು ರಕ್ಷಣಾ ತಂಡವು ರಕ್ಷಣಾ ಕಾರ್ಯಾಚರಣೆಗಳು ಮಂಗಳವಾರ ರಕ್ಷಣೆ ಮಾಡಿತ್ತು.

ಕಾರ್ಮಿಕರನ್ನು ಹೊರತೆಗೆದ ಕೂಡಲೇ, ಅವರನ್ನು ಆಸ್ಪತ್ರೆಗೆ ಸೇರಿಸಲಾಯಿತು. ಇಲ್ಲಿ ಅವರನ್ನು ಮನೆಗೆ ಕಳುಹಿಸುವ ಮೊದಲು ಆರೋಗ್ಯ ವೀಕ್ಷಣೆಯಲ್ಲಿ ಇರಿಸಲಾಗಿದೆ.
ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ರಕ್ಷಿಸಲಾದ 41 ಕಾರ್ಮಿಕರಲ್ಲಿ ಯಾರೂ ಗಂಭೀರ ಸ್ಥಿತಿಯಲ್ಲಿಲ್ಲ ಎಂದು ಹೇಳಿದರು.

ಇತ್ತೀಚಿನ ಸುದ್ದಿ