ಬಿಜೆಪಿ ಎಂಎಲ್‌ಸಿ ಸಂಬಂಧಿಯ ಬರ್ಬರ ಹತ್ಯೆ: ಪತ್ನಿಯಿಂದಲೇ ಕೊಲೆ ಮಾಡೋಕೇ ಸುಫಾರಿ! - Mahanayaka
11:32 PM Wednesday 28 - January 2026

ಬಿಜೆಪಿ ಎಂಎಲ್‌ಸಿ ಸಂಬಂಧಿಯ ಬರ್ಬರ ಹತ್ಯೆ: ಪತ್ನಿಯಿಂದಲೇ ಕೊಲೆ ಮಾಡೋಕೇ ಸುಫಾರಿ!

26/12/2024

ಬಿಜೆಪಿ ಎಂಎಲ್ಸಿ ಯೋಗೇಶ್ ತಿಲೇಕರ್ ಅವರ ಸಂಬಂಧಿ ಸತೀಶ್ ವಾಘ್ ಅವರನ್ನು ಅಪಹರಿಸಿ ಬರ್ಬರವಾಗಿ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪುಣೆ ಪೊಲೀಸ್ ಅಪರಾಧ ವಿಭಾಗ ಮತ್ತೊಬ್ಬ ಶಂಕಿತನನ್ನು ಬಂಧಿಸಿದೆ.

ಅಂದಹಾಗೇ ಈ ತನಿಖೆಯು ಆಘಾತಕಾರಿ ವಿವರಗಳನ್ನು ಬಹಿರಂಗಪಡಿಸಿದೆ. ಪೊಲೀಸರು ವಾಘ್ ಅವರ ಪತ್ನಿಯನ್ನು ಅಪರಾಧದ ಹಿಂದಿನ ಮಾಸ್ಟರ್ ಮೈಂಡ್ ಎಂದು ಹೆಸರಿಸಿದ್ದಾರೆ.

ಪುಣೆ ಪೊಲೀಸ್ ಕಮಿಷನರ್ ಅಮಿತೇಶ್ ಕುಮಾರ್ ಅವರ ಪ್ರಕಾರ, ಪ್ರಮುಖ ಆರೋಪಿ ಆತಿಶ್ ಜಾಧವ್, ವಾಘ್ ಅವರ ಪತ್ನಿ ಕೊಲೆಗೆ 5 ಲಕ್ಷ ರೂ.ಗಳನ್ನು ಸುಪಾರಿಯಾಗಿ (ಗುತ್ತಿಗೆ) ಪಾವತಿಸಿದ್ದಾಗಿ ಒಪ್ಪಿಕೊಂಡಿದ್ದಾರೆ. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಬುಧವಾರ ಸಂಜೆ ಆಕೆಯನ್ನು ಬಂಧಿಸಿದ್ದಾರೆ.

“ಕೊಲೆ ಮಾಡಲು ವಾಘ್ ಅವರ ಪತ್ನಿಯಿಂದ 5 ಲಕ್ಷ ರೂ.ಗಳನ್ನು ಪಡೆದಿರುವುದಾಗಿ ಜಾಧವ್ ಒಪ್ಪಿಕೊಂಡಿದ್ದಾರೆ. ಅಪಹರಣ ಮತ್ತು ಹತ್ಯೆಯ ಹಿಂದಿನ ಮಾಸ್ಟರ್ ಮೈಂಡ್ ಆಕೆಯ ಪಾತ್ರವನ್ನು ತನಿಖೆಯಿಂದ ಸಾಬೀತುಪಡಿಸಲಾಗಿದೆ” ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

ಡಿಸೆಂಬರ್ 9 ರಂದು ಬೆಳಿಗ್ಗೆ 5: 30 ರ ಸುಮಾರಿಗೆ ಪುಣೆಯ ಯವತ್ ಪ್ರದೇಶದಲ್ಲಿ ಬೆಳಿಗ್ಗೆ ವಾಕಿಂಗ್ ಮಾಡುತ್ತಿದ್ದಾಗ ವಾಘ್ ಅವರನ್ನು ಅಪಹರಿಸಲಾಗಿತ್ತು.
ಸಿಸಿಟಿವಿ ದೃಶ್ಯಾವಳಿಗಳು ಈ ಘಟನೆಯನ್ನು ಸೆರೆಹಿಡಿದಿದ್ದು, ಪೊಲೀಸರು 48 ಗಂಟೆಗಳಲ್ಲಿ ಮೊದಲ ಶಂಕಿತನನ್ನು ಬಂಧಿಸಿದ್ದಾರೆ. ಸುಮಾರು 70 ಬಾರಿ ಇರಿತಕ್ಕೊಳಗಾಗಿದ್ದ ವಾಘ್ ಅವರ ಶವ ನಂತರ ಪುಣೆ ಬಳಿಯ ಶಿಂಧೆವಾನೆ ಘಾಟ್‌ನಲ್ಲಿ ಪತ್ತೆಯಾಗಿದೆ.

ಧುಲೆಯ ಪವನ್ ಶರ್ಮಾ, ಫುರ್ಸುಂಗಿಯ ನವನಾಥ್ ಗುರಾಲ್ ಮತ್ತು ಧಾರಾಶಿವ್ ನಲ್ಲಿ ಬಂಧಿಸಲ್ಪಟ್ಟ ಜಾಧವ್ ಸೇರಿದಂತೆ ನಾಲ್ವರು ಶಂಕಿತರಲ್ಲಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಉಳಿದ ಆರೋಪಿಗಳಿಗಾಗಿ ಶೋಧ ಮುಂದುವರೆದಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ