ಗಡಿ ದಾಟಿದ ಆರೋಪ: ತಮಿಳುನಾಡಿನ 8 ಮೀನುಗಾರರನ್ನು ಬಂಧಿಸಿದ ಶ್ರೀಲಂಕಾ ನೌಕಾಪಡೆ - Mahanayaka
12:25 AM Thursday 21 - August 2025

ಗಡಿ ದಾಟಿದ ಆರೋಪ: ತಮಿಳುನಾಡಿನ 8 ಮೀನುಗಾರರನ್ನು ಬಂಧಿಸಿದ ಶ್ರೀಲಂಕಾ ನೌಕಾಪಡೆ

27/08/2024


Provided by

ತಮಿಳುನಾಡಿನ ಮೀನುಗಾರಿಕೆ ಬಂದರನ್ನು ತೊರೆದು ಶ್ರೀಲಂಕಾದ ಜಲಪ್ರದೇಶದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಎಂಟು ಮೀನುಗಾರರನ್ನು ಅಂತಾರಾಷ್ಟ್ರೀಯ ಕಡಲ ಗಡಿಯನ್ನು ದಾಟಿದ್ದಕ್ಕಾಗಿ ಶ್ರೀಲಂಕಾದ ನೌಕಾಪಡೆಯು ಬಂಧಿಸಿದೆ.

ಮೀನುಗಾರರು ಮುಂಜಾನೆ ಹೊರಟು ಧನುಷ್ಕೋಡಿ ಮತ್ತು ತಲೈಮನ್ನಾರ್ ಬಳಿ ಮೀನು ಹಿಡಿಯುತ್ತಿದ್ದಾಗ ಶ್ರೀಲಂಕಾದ ನೌಕಾಪಡೆಯ ಗಸ್ತು ದೋಣಿಗಳು ಅವರನ್ನು ಸುತ್ತುವರೆದವು, ಎಂಟು ಮೀನುಗಾರರನ್ನು ಬಂಧಿಸಿ ಅವರ ದೋಣಿಯನ್ನು ವಶಪಡಿಸಿಕೊಂಡವು.

ಬಂಧಿತ ಮೀನುಗಾರರನ್ನು ಮನ್ನಾರ್ ಮೀನುಗಾರಿಕೆ ಇಲಾಖೆಯ ಅಧಿಕಾರಿಗಳಿಗೆ ಹಸ್ತಾಂತರಿಸಲಾಗುತ್ತದೆ.

“ನಿನ್ನೆ, ರಾಮೇಶ್ವರಂನಿಂದ 430 ಯಾಂತ್ರೀಕೃತ ದೋಣಿಗಳು ಮೀನುಗಾರಿಕೆಗಾಗಿ ಸಮುದ್ರಕ್ಕೆ ಹೋಗಿದ್ದವು. ಅದರಲ್ಲಿ, ಎಂಟು ಸಿಬ್ಬಂದಿಗಳೊಂದಿಗೆ ಒಂದು ದೋಣಿಯನ್ನು ಶ್ರೀಲಂಕಾದ ನೌಕಾಪಡೆಯು ಬಂಧಿಸಿದೆ “ಎಂದು ರಾಮೇಶ್ವರಂನ ಮೀನುಗಾರಿಕೆ ಸಹಾಯಕ ನಿರ್ದೇಶಕರು ಘೋಷಿಸಿದರು.

ಅಂತಾರಾಷ್ಟ್ರೀಯ ಕಡಲ ಗಡಿ ದಾಟುವ ನೆಪದಲ್ಲಿ 72 ದಿನಗಳಲ್ಲಿ ಕನಿಷ್ಠ 163 ಮೀನುಗಾರರನ್ನು ಶ್ರೀಲಂಕಾ ನೌಕಾಪಡೆ ಬಂಧಿಸಿದೆ. ಬಂಧಿತ ಎಲ್ಲ ಮೀನುಗಾರರನ್ನು ಉಭಯ ರಾಷ್ಟ್ರಗಳ ನಡುವಿನ ರಾಜತಾಂತ್ರಿಕ ಮಾತುಕತೆಯ ನಂತರ ಗುಂಪುಗಳಾಗಿ ಬಿಡುಗಡೆ ಮಾಡಲಾಗುತ್ತಿದೆ.

ಇಂತಹ ಬಂಧನಗಳಿಂದಾಗಿ ತಮಿಳುನಾಡಿನ ರಾಮನಾಥಪುರಂ, ನಾಗಪಟ್ಟಣಂ ಮತ್ತು ಪುದುಕೊಟ್ಟೈನಲ್ಲಿನ ಮೀನುಗಾರಿಕೆ ಉದ್ಯಮವು ತೀವ್ರವಾಗಿ ಹಾನಿಗೊಳಗಾಗಿದೆ ಮತ್ತು ಮೀನುಗಾರರು ಶ್ರೀಲಂಕಾ ಮತ್ತು ಭಾರತದ ನಡುವಿನ ರಾಜತಾಂತ್ರಿಕ ಮಾತುಕತೆಯ ಮೂಲಕ ಶಾಶ್ವತ ಪರಿಹಾರವನ್ನು ಕೋರಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ