ಬಿಗ್ ಬ್ರೇಕಿಂಗ್ ನ್ಯೂಸ್; ಸತೀಶ್ ಜಾರಕಿಹೊಳಿಗೆ ಭಾರೀ ಮುನ್ನಡೆ - Mahanayaka

ಬಿಗ್ ಬ್ರೇಕಿಂಗ್ ನ್ಯೂಸ್; ಸತೀಶ್ ಜಾರಕಿಹೊಳಿಗೆ ಭಾರೀ ಮುನ್ನಡೆ

satish jarkiholi
02/05/2021


Provided by

ಬೆಳಗಾವಿ: ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣಾ ಫಲಿತಾಂಶ ಕ್ಷಣಕ್ಷಣಕ್ಕೂ ಕುತೂಹಲ ಕೆರಳಿದ್ದು, ಬಿಜೆಪಿ ಅಭ್ಯರ್ಥಿ ಮಂಗಳ ಅಂಗಡಿ ನಿರಂತರ ಮುನ್ನಡೆಯ ಬಳಿ ಇದೀಗ ಹಿನ್ನಡೆ ಅನುಭವಿಸಿದ್ದು, ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಭರ್ಜರಿ ಮುನ್ನಡೆ ಸಾಧಿಸಿದ್ದಾರೆ.

 

ಬಿಜೆಪಿ ಶಾಸಕ ಬಾಲಚಂದ್ರ ಜಾರಕಿಹೊಳಿ ಕ್ಷೇತ್ರ ಅರಭಾವಿ ಮತದಾರರು ಸತೀಶ್ ಜಾರಕಿಹೊಳಿ ಕೈ ಹಿಡಿದಿದ್ದು,10105 ಮತಗಳ ಮುನ್ನಡೆ ನೀಡಿದ್ದಾರೆ. ಈ ಮೂಲಕ ಸತತ ಹಿನ್ನಡೆ ಸಾಧಿಸಿದ್ದ ಸತೀಶ್ ಜಾರಕಿಹೊಳಿ ಮುನ್ನಡೆ ಸಾಧಿಸಿದ್ದಾರೆ.

 

ಬಿಜೆಪಿ ಅಭ್ಯರ್ಥಿ ಮಂಗಳಾ ಅಂಗಡಿ 24,2927 ಮತಗಳನ್ನು ಪಡೆದುಕೊಂಡಿದ್ದರೆ. ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ 25,3032 ಮತಗಳನ್ನು ಪಡೆದುಕೊಳ್ಳುವ ಮೂಲಕ ಮುನ್ನಡೆ ಸಾಧಿಸಿದ್ದಾರೆ.

ಇತ್ತೀಚಿನ ಸುದ್ದಿ