ಬಾಲಕನ ಮೇಲೆ ದಾಳಿ ನಡೆಸಿದ 8 ಬೀದಿನಾಯಿಗಳು | ಗಂಭೀರ ಗಾಯಗೊಂಡ ಬಾಲಕ ಸಾವು - Mahanayaka
12:48 PM Wednesday 9 - September 2026

ಬಾಲಕನ ಮೇಲೆ ದಾಳಿ ನಡೆಸಿದ 8 ಬೀದಿನಾಯಿಗಳು | ಗಂಭೀರ ಗಾಯಗೊಂಡ ಬಾಲಕ ಸಾವು

street dog
08/07/2021

ಧಾರವಾಡ: ಬೀದಿನಾಯಿಗಳ ದಾಳಿಯ ಪರಿಣಾಮ 6 ವರ್ಷದ ಬಾಲಕನೋರ್ವ ದಾರುಣವಾಗಿ ಸಾವನ್ನಪ್ಪಿರುವ ಘಟನೆ  ಧಾರವಾಡ ಹೊರವಲಯದ ನವಲೂರ ಗ್ರಾಮದ ರೈಲು ನಿಲ್ದಾಣದ ಬಳಿ ನಡೆದಿದೆ.

ರಾಯಚೂರು ಜಿಲ್ಲೆಯ ಲಿಂಗಸೂರು ಮೂಲದ ಗೋಪಾಲ್ ಮತ್ತು ಚನ್ನಮ್ಮ ದಂಪತಿಯ 6 ವರ್ಷ ವಯಸ್ಸಿನ ಮಗ  ಬಾಬೂಲ್ ರಾಠೋಡ ಮೃತ ಬಾಲಕನಾಗಿದ್ದು, ಗುರುವಾರ ಧಾರವಾಡ ಹೊರವಲಯದ ನವಲೂರ ಗ್ರಾಮದ ರೈಲು ನಿಲ್ದಾಣದ ಬಳಿ ಕಟ್ಟಡವೊಂದರ ನಿರ್ಮಾಣ ಕೆಲಸಕ್ಕೆ ಆಗಮಿಸಿದ್ದರು ಎನ್ನಲಾಗಿದೆ.

ಬೆಳಗ್ಗೆ ತಿಂಡಿ ತಿನ್ನಲೆಂದು ಕೆಲಸದ ಜಾಗದಲ್ಲಿ ಬಾಲಕನ್ನು ಬಿಟ್ಟು ಪಾಲಕರು ಹೋಗಿದ್ದರು. ಈ ವೇಳೆ ಅಲ್ಲೇ ಆಟವಾಡಿಕೊಂಡಿದ್ದ ಬಾಲಕನ ಮೇಲೆ 8 ನಾಯಿಗಳು ಏಕಾಏಕಿ ದಾಳಿ ಮಾಡಿದ್ದು, ಪರಿಣಾಮವಾಗಿ ಗಂಭೀರವಾಗಿ ಗಾಯಗೊಂಡ ಬಾಲಕ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ.

ಘಟನೆ ಸಂಬಂಧ ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇತ್ತೀಚಿನ ಸುದ್ದಿ

mobil chat sitesi Ucuz Uçak Bileti