ಮೂಡಿಗೆರೆ: ಮತದಾನ ಬಹಿಷ್ಕರಿಸಿದ ನಾಲ್ಕು ಗ್ರಾಮಗಳು: ಅಸಹಾಯಕತೆಯ ಕೊನೆಯ ಅಸ್ತ್ರ - Mahanayaka
7:29 PM Saturday 24 - January 2026

ಮೂಡಿಗೆರೆ: ಮತದಾನ ಬಹಿಷ್ಕರಿಸಿದ ನಾಲ್ಕು ಗ್ರಾಮಗಳು: ಅಸಹಾಯಕತೆಯ ಕೊನೆಯ ಅಸ್ತ್ರ

mudigere
01/02/2023

ಕೊಟ್ಟಿಗೆಹಾರ: ಮೂಡಿಗೆರೆ ವಿಧಾನ ಸಭಾ ಕ್ಷೇತ್ರದಲ್ಲಿ ಸರಣಿ ಮತದಾನ ಬಹಿಷ್ಕಾರದ ಕೂಗು ಕೇಳಿ ಬಂದಿದ್ದು, ಈಗಾಗಲೇ ಮೂಲಭೂತ ಸೌಕರ್ಯ ಮೂರು ಗ್ರಾಮದ ಗ್ರಾಮಸ್ಥರು ಚುನಾವಣೆ ಬಹಿಷ್ಕಾರ ಘೋಷಿಸಿದ್ದು, ಇದೀಗ ನಾಲ್ಕನೇ ಗ್ರಾಮ ಕೂಡ ಚುನಾವಣೆ ಬಹಿಷ್ಕಾರ ಘೋಷಿಸಿದೆ.

ಬಿದರುತಳ, ಮಧುಗುಂಡಿ, ದುರ್ಗದಹಳ್ಳಿ ಗ್ರಾಮದ ನಿರಾಶ್ರಿತರು ಚುನಾವಣೆ ಬಹಿಷ್ಕಾರ ಮಾಡಿದ್ದಾರೆ. ಧಾರಾಕಾರ ಮಳೆಗೆ ಮಧುಗುಂಡಿ, ದುರ್ಗದಹಳ್ಳಿ, ಬಿದರುತಳ ಗ್ರಾಮದಲ್ಲಿ ಭೂ ಕುಸಿತವಾಗಿತ್ತು ಗ್ರಾಮಕ್ಕೆ ಗ್ರಾಮಗಳೇ ಗುರುತು ಸಿಗದಂತೆ ಕೊಚ್ಚಿ ಹೋಗಿದ್ವು, ಜನರು 2019ರಿಂದ ಜನರು ಹೊಸ ಬದುಕಿಗಾಗಿ ಹೋರಾಡುತ್ತಿದ್ದಾರೆ.

ಮಳೆಯಿಂದ ನಿರಾಶ್ರಿತರದವರಿಗೆ ಜಿಲ್ಲಾಡಳಿತ ಬಣಕಲ್ ಬಳಿ ಜಾಗದ ವ್ಯವಸ್ಥೆ ಮಾಡಿತ್ತು. ಆದರೆ, ಯಾವುದೇ ಮೂಲಭೂತ ಸೌಲಭ್ಯ ಒದಗಿಸದೇ ನಿರ್ಲಕ್ಷಿಸಲಾಗಿದೆ. ಇದರ ವಿರುದ್ಧ ಹೋರಾಡಿ ದನಿದಿರುವ ಸಾರ್ವಜನಿಕರು ಇದೀಗ ಚುನಾವಣೆ ಬಹಿಷ್ಕಾರದ ಮೂಲಕ ತಮ್ಮ ಅಸಹಾಯಕತೆಯನ್ನು ತೋಡಿಕೊಂಡಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

 

ಇತ್ತೀಚಿನ ಸುದ್ದಿ