ಲೋಕಸಭಾ ಚುನಾವಣೆಯಲ್ಲಿ ಅಭ್ಯರ್ಥಿ ಸೋಲಿನ ಹಿನ್ನೆಲೆ: ತ್ರಿಶೂರ್ ನಲ್ಲಿ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಘರ್ಷಣೆ; ವೀಡಿಯೋ ವೈರಲ್ - Mahanayaka

ಲೋಕಸಭಾ ಚುನಾವಣೆಯಲ್ಲಿ ಅಭ್ಯರ್ಥಿ ಸೋಲಿನ ಹಿನ್ನೆಲೆ: ತ್ರಿಶೂರ್ ನಲ್ಲಿ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಘರ್ಷಣೆ; ವೀಡಿಯೋ ವೈರಲ್

08/06/2024


Provided by

ಇತ್ತೀಚೆಗೆ ಮುಕ್ತಾಯಗೊಂಡ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಕೆ.ಮುರಳೀಧರನ್ ಅವರ ಸೋಲಿನ ನಂತರ ಕೇರಳದ ತ್ರಿಶೂರ್ ನಲ್ಲಿ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಘರ್ಷಣೆ ನಡೆದ ಘಟನೆ ‌ನಡೆದಿದೆ. ಜೂನ್ 4 ರಂದು ಫಲಿತಾಂಶ ಬಂದಾಗಿನಿಂದ ತ್ರಿಶೂರ್ ಜಿಲ್ಲಾ ಕಾಂಗ್ರೆಸ್ ಸಮಿತಿಯಲ್ಲಿ (ಡಿಸಿಸಿ) ಉದ್ವಿಗ್ನತೆ ಉಂಟಾಗಿತ್ತು ಮತ್ತು ಡಿಸಿಸಿ ಮುಖ್ಯಸ್ಥ ಜೋಸ್ ವಲ್ಲೂರ್ ಮತ್ತು ತ್ರಿಶೂರ್ ಮಾಜಿ ಸಂಸದ ಟಿ ಎನ್ ಪ್ರತಾಪನ್ ಅವರನ್ನು ಸೋಲಿಗೆ ದೂಷಿಸುವ ಅನಾಮಧೇಯ ಪೋಸ್ಟರ್ ಗಳು ಕಾಣಿಸಿಕೊಂಡಿದ್ದವು.

“ಒಂದು ವಾರ್ಡ್ ನಲ್ಲಿಯೂ ಪ್ರತಾಪನ್‌ಗೆ ಸ್ಥಾನವಿಲ್ಲ” ಮತ್ತು “ಜೋಸ್ ವಲ್ಲೂರ್ ರಾಜೀನಾಮೆ ನೀಡಬೇಕು” ಎಂಬ ಪೋಸ್ಟರ್ ಗಳಲ್ಲಿ ಬರೆಯಲಾಗಿದೆ.
ಶುಕ್ರವಾರ, ಡಿಸಿಸಿ ಕಾರ್ಯದರ್ಶಿ ಸಜೀವನ್ ಕುಟ್ಟಿಯಾಚಿರಾ ಅವರೊಂದಿಗೆ ಗುರುತಿಸಿಕೊಂಡಿರುವ ಕಾರ್ಯಕರ್ತ ಸುರೇಶ್ ಅವರನ್ನು ಪೋಸ್ಟರ್ ಗಳನ್ನು ಹಾಕುವ ಬಗ್ಗೆ ವಲ್ಲೂರ್ ಪ್ರಶ್ನಿಸಿದಾಗ ಪರಿಸ್ಥಿತಿ ಉಲ್ಬಣಗೊಂಡಿದೆ.

ಮುರಳೀಧರನ್ ಅವರ ಬೆಂಬಲಿಗರಾದ ಕುಟ್ಟಿಯಾಚಿರ ಮತ್ತು ಸುರೇಶ್ ಅವರ ಮೇಲೂ ಡಿಸಿಸಿ ಮುಖ್ಯಸ್ಥ ವಲ್ಲೂರ್ ಮತ್ತು ಅವರ ಬೆಂಬಲಿಗರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ