ಬಿಡುಗಡೆ: 5 ತಿಂಗಳ ಜೈಲುವಾಸದ ಬಳಿಕ ಬಿಆರ್ ಎಸ್ ನಾಯಕಿ ಕೆ.ಕವಿತಾ‌ ರಿಲೀಸ್: ಏರ್ ಪೋರ್ಟ್ ನಲ್ಲಿ 'ಹೀರೋ' ಸ್ವಾಗತ - Mahanayaka
12:30 AM Saturday 23 - August 2025

ಬಿಡುಗಡೆ: 5 ತಿಂಗಳ ಜೈಲುವಾಸದ ಬಳಿಕ ಬಿಆರ್ ಎಸ್ ನಾಯಕಿ ಕೆ.ಕವಿತಾ‌ ರಿಲೀಸ್: ಏರ್ ಪೋರ್ಟ್ ನಲ್ಲಿ ‘ಹೀರೋ’ ಸ್ವಾಗತ

28/08/2024


Provided by

ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಜಾಮೀನು ನೀಡಿದ ಒಂದು ದಿನದ ನಂತರ‌ ಭಾರತ ರಾಷ್ಟ್ರ ಸಮಿತಿ (ಬಿಆರ್ ಎಸ್) ಎಂಎಲ್ಸಿ ಕೆ.ಕವಿತಾ ಬುಧವಾರ ಹೈದರಾಬಾದ್ ಗೆ ಆಗಮಿಸಿದರು. ಮಂಗಳವಾರ ರಾತ್ರಿ ದೆಹಲಿಯ ತಿಹಾರ್ ಜೈಲಿನಿಂದ ಬಿಡುಗಡೆಯಾದ ಕವಿತಾ ರಾಜೀವ್ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಅವರೊಂದಿಗೆ ಅವರ ಸಹೋದರ ಮತ್ತು ಬಿಆರ್ ಎಸ್ ಕಾರ್ಯಕಾರಿ ಅಧ್ಯಕ್ಷ ಕೆ.ಟಿ.ರಾಮರಾವ್, ಅವರ ಪತಿ ಡಿ.ಅನಿಲ್ ಕುಮಾರ್ ಮತ್ತು ಮಗ ಆದಿತ್ಯ ಹಾಜರಿದ್ದರು.

ಕವಿತಾ ಅವರನ್ನು ಸ್ವಾಗತಿಸಲು ಹೆಚ್ಚಿನ ಸಂಖ್ಯೆಯಲ್ಲಿ ಬಿಆರ್ ಎಸ್ ಮುಖಂಡರು ಮತ್ತು ಕಾರ್ಯಕರ್ತರು ವಿಮಾನ ನಿಲ್ದಾಣದಲ್ಲಿ ಜಮಾಯಿಸಿದ್ದರು. ಡೋಲು ಕುಣಿತದ ನಡುವೆ, ಅಭಿಮಾನಿಗಳು ತಮ್ಮ ನೆಚ್ಚಿನ ನಾಯಲಿಯನ್ನು ಬೆಂಬಲಿಸಿ ಘೋಷಣೆಗಳನ್ನು ಕೂಗಿದರು.

ಜೊತೆಗೆ ಹೂವಿನ ದಳಗಳನ್ನು ಸುರಿಸಿ ಕವಿತಾ ‘ಜೈ ತೆಲಂಗಾಣ’ ಎಂಬ ಘೋಷಣೆ ಕೂಗಿದರು. ದೆಹಲಿ ಮದ್ಯ ನೀತಿ ಹಗರಣಕ್ಕೆ ಸಂಬಂಧಿಸಿದ ಭ್ರಷ್ಟಾಚಾರ ಮತ್ತು ಮನಿ ಲಾಂಡರಿಂಗ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಕವಿತಾ ಅವರನ್ನು ಮಾರ್ಚ್ 15 ರಂದು ಹೈದರಾಬಾದ್ ನಿಂದ ಜಾರಿ ನಿರ್ದೇಶನಾಲಯ ಬಂಧಿಸಿ ದೆಹಲಿಗೆ ಕರೆದುಕೊಂಡು ಹೋಗಿತ್ತು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ