ಆರ್ಜಿ ಕಾರ್ ಮಾಜಿ ಪ್ರಾಂಶುಪಾಲರ ಆಪ್ತ ಸದಸ್ಯನನ್ನು ಅಮಾನತುಗೊಳಿಸಿದ ತೃಣಮೂಲ ವಿದ್ಯಾರ್ಥಿ ಘಟಕ - Mahanayaka
11:35 PM Wednesday 11 - March 2026

ಆರ್ಜಿ ಕಾರ್ ಮಾಜಿ ಪ್ರಾಂಶುಪಾಲರ ಆಪ್ತ ಸದಸ್ಯನನ್ನು ಅಮಾನತುಗೊಳಿಸಿದ ತೃಣಮೂಲ ವಿದ್ಯಾರ್ಥಿ ಘಟಕ

03/09/2024

ಕೋಲ್ಕತ್ತಾದ ಆರ್ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಮಾಜಿ ಪ್ರಾಂಶುಪಾಲ ಸಂದೀಪ್ ಘೋಷ್ ಅವರ ಸಹಾಯಕರೂ ಆಗಿರುವ ತನ್ನ ಸದಸ್ಯರನ್ನು ತೃಣಮೂಲ ಕಾಂಗ್ರೆಸ್ ವಿದ್ಯಾರ್ಥಿ ವಿಭಾಗವು ಅಮಾನತುಗೊಳಿಸಿದೆ. ಕಳೆದ ತಿಂಗಳು ತರಬೇತಿ ವೈದ್ಯರ ಮೇಲೆ ಅತ್ಯಾಚಾರ ಮತ್ತು ಕೊಲೆ ನಡೆದ ಆಸ್ಪತ್ರೆಯ ಕೋಣೆಯಲ್ಲಿ ಅವರು ಕಾಣಿಸಿಕೊಂಡಿದ್ದಾರೆ ಎಂಬ ಆರೋಪದ ನಂತರ ಈ ಕ್ರಮ ತೆಗೆದುಕೊಳ್ಳಲಾಗಿದೆ.

ಎಸ್ಎಸ್ಕೆಎಂ ಆಸ್ಪತ್ರೆಯ ತರಬೇತಿ ವೈದ್ಯ ಅವಿಕ್ ಡೇ ಅವರನ್ನು ಅರ್ಜಿ ಕಾರ್ ನಲ್ಲಿ ನಡೆದ ದುರದೃಷ್ಟಕರ ಘಟನೆಯ ನಂತರ ಅಪರಾಧದ ದೃಶ್ಯಕ್ಕೆ ಸಂಬಂಧಿಸಿದಂತೆ ಅವರ ವಿರುದ್ಧದ ಕೆಲವು ಆರೋಪಗಳು ಬಂದ ಹಿನ್ನೆಲೆಯಲ್ಲಿ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ ಎಂದು ತೃಣಮೂಲ ಛಾತ್ರ ಪರಿಷತ್ ರಾಜ್ಯ ಮುಖ್ಯಸ್ಥ ತ್ರಿನಂಕೂರ್ ಭಟ್ಟಾಚಾರ್ಯ ಹೇಳಿದ್ದಾರೆ.

“ತನಿಖೆ ಮುಗಿಯುವವರೆಗೆ ಟಿಎಂಸಿಪಿ ಅವರನ್ನು ಸಂಘಟನೆಯಿಂದ ಅಮಾನತುಗೊಳಿಸಿದೆ” ಎಂದು ಭಟ್ಟಾಚಾರ್ಯ ಹೇಳಿಕೆಯಲ್ಲಿ ತಿಳಿಸಿದ್ದಾರೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ