ವಿಡಿಯೋ: ವಿರಾಟ್ ಕೊಹ್ಲಿಯನ್ನೂ ತಳ್ಳಾಟ ನಡೆಸಿದ್ದ ಅಭಿಮಾನಿಗಳು: ಜನಸಂದಣಿ ನಡುವೆ ಪೊಲೀಸರ ಹರಸಾಹಸ - Mahanayaka

ವಿಡಿಯೋ: ವಿರಾಟ್ ಕೊಹ್ಲಿಯನ್ನೂ ತಳ್ಳಾಟ ನಡೆಸಿದ್ದ ಅಭಿಮಾನಿಗಳು: ಜನಸಂದಣಿ ನಡುವೆ ಪೊಲೀಸರ ಹರಸಾಹಸ

virat kohli
06/06/2025

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ  IPL–2025 ಪ್ರಶಸ್ತಿ ವಿಜೇತ ಸಂಭ್ರಮಾಚರಣೆ ವೇಳೆ 11 ಮಂದಿ ಸಾವನ್ನಪ್ಪಿದ ಪ್ರಕರಣ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುತ್ತಿದೆ. ಇದೇ ವೇಳೆ, ಸಾರ್ವಜನಿಕರಿಗೆ ಮಾತ್ರವಲ್ಲ ಆಟಗಾರರಿಗೂ ಕಷ್ಟಕರ ಸ್ಥಿತಿ ಏರ್ಪಟ್ಟಿತ್ತು. ಅದರಲ್ಲೂ ವಿರಾಟ್ ಕೊಹ್ಲಿ ಅವರು ಕೂಡ ವಿಧಾನ ಸೌಧ ಬಳಿಯಿಂದ ತಮ್ಮ ಬಸ್ ಬಳಿಗೆ ಹೋಗಲು ಪರದಾಡಿರುವ ದೃಶ್ಯ ಇದೀಗ ವೈರಲ್ ಆಗಿವೆ.


Provided by

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭ್ರಮಾಚರಣೆಗೂ ಮುನ್ನ ಸಿಎಂ ಸಿದ್ದರಾಮಯ್ಯ ವಿಧಾನ ಸೌಧ ಬಳಿಯಲ್ಲಿ ಆರ್ ಸಿಬಿ ಆಟಗಾರರನ್ನು ಸನ್ಮಾನ ಮಾಡಿದ್ದರು. ಬಳಿಕ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಆಟಗಾರರು ತೆರಳಬೇಕಾಯಿತು. ಈ ವೇಳೆ ಬಸ್ ಏರಲು ವಿರಾಟ್ ಕೊಹ್ಲಿ ಸಹಿತ  ಎಲ್ಲ ಆಟಗಾರರು ಹೊರಡುತ್ತಿದ್ದಂತೆಯೇ ಪೊಲೀಸರಿಗೆ ಸಾರ್ವಜನಿಕರನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ. ನೂಕುನುಗ್ಗಲಿನಲ್ಲಿಯೇ ಕ್ರಿಕೆಟಿಗರು ಬಸ್ ಏರಬೇಕಾಯಿತು.  ಸ್ಥಳದಲ್ಲಿ ಹತ್ತಾರು ಪೊಲೀಸರಿದ್ದರೂ, ದೊಡ್ಡ ಸಂಖ್ಯೆಯಲ್ಲಿದ್ದ ಅಭಿಮಾನಿಗಳ ಗುಂಪು ನೂಕಾಟ ತಳ್ಳಾಟ ನಡೆಸಿದವು.

ವಿರಾಟ್ ಕೊಹ್ಲಿ ಬಸ್ ನತ್ತ ಹೋಗುವ ವೇಳೆ ಜನರು ಹಾಗೂ ಮಳೆಯಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ತಮ್ಮ ಕೈಯಲ್ಲಿದ್ದ ವಸ್ತುವನ್ನು ಮುಖಕ್ಕೆ ಅಡ್ಡ ಇಟ್ಟುಕೊಂಡು ಹೋಗುತ್ತಿರುವುದು ವಿಡಿಯೋದಲ್ಲಿ ಕಾಣಬಹುದಾಗಿದೆ.

ಅಂದ ಹಾಗೆ ಆರ್ ಸಿಬಿ ವಿಜಯೋತ್ಸವದಲ್ಲಿ ಬರೋಬ್ಬರಿ 8 ಲಕ್ಷ ಜನರು ಏಕಾಏಕಿ ಬೆಂಗಳೂರಿಗೆ ಆಗಮಿಸಿದ್ದರು ಎನ್ನಲಾಗಿದೆ. ಕ್ರೀಡಾಂಗಣಕ್ಕೆ ಪಾಸ್ ನೀಡುವ ವಿಚಾರ ಸೇರಿದಂತೆ ಹಲವು  ಅವ್ಯವಸ್ಥೆಗಳು ದುರಂತಕ್ಕೆ ಕಾರಣವಾಗಿದೆ ಎನ್ನಲಾಗಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

<

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ