ನಾಪತ್ತೆಯಾಗಿದ್ದ ಮಾಡೆಲ್ ಶವವಾಗಿ ಪತ್ತೆ: ಗೆಳೆಯನ ಜೊತೆ ಕಾರಿನಲ್ಲಿ ಹೋದವಳು ಕಾಲುವೆಯಲ್ಲಿ ಪತ್ತೆ! - Mahanayaka

ನಾಪತ್ತೆಯಾಗಿದ್ದ ಮಾಡೆಲ್ ಶವವಾಗಿ ಪತ್ತೆ: ಗೆಳೆಯನ ಜೊತೆ ಕಾರಿನಲ್ಲಿ ಹೋದವಳು ಕಾಲುವೆಯಲ್ಲಿ ಪತ್ತೆ!

sheetal
17/06/2025

ರೋಹ್ಟಕ್: ಹರ್ಯಾಣದ ರೂಪದರ್ಶಿಯೊಬ್ಬರ ನಾಪತ್ತೆ ಪ್ರಕರಣಕ್ಕೆ ಹೊಸ ತಿರುವು ದೊರಕಿದ್ದು, ಅವರ ಮೃತದೇಹ ಕಾಲುವೆಯೊಂದರಲ್ಲಿ ಪತ್ತೆಯಾಗಿದೆ.

ಹರ್ಯಾಣದ ರೂಪದರ್ಶಿ ಶೀತಲ್ ಮೃತಪಟ್ಟವರಾಗಿದ್ದಾರೆ. ಇವರು ಕಳೆದೆರಡು ದಿನಗಳಿಂದ ನಾಪತ್ತೆಯಾಗಿದ್ದರು. ಇದೀಗ ಅವರ ಮೃತದೇಹ ಸೋನಿಪತ್ನ ಖಾರ್ಖೋಡಾ ಬಳಿಯ ರಿಲಯನ್ಸ್ ಕಾಲುವೆಯಲ್ಲಿ ಪತ್ತೆಯಾಗಿದೆ. ಶೀತಲ್ ಅವರ ಗೆಳೆಯನೇ ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಶಂಕೆ ಮೂಡಿದೆ.

ರೂಪದರ್ಶಿಯಾಗಿ ವೃತ್ತಿ ಜೀವನ ನಡೆಸುತ್ತಿದ್ದ ಶೀತಲ್ ಸಂಗೀತ ವಿಡಿಯೋಗಳ ಮೂಲಕ ಜನಪ್ರಿಯತೆ ಪಡೆದಿದ್ದರು. ಪಾಣಿಪತ್ನಲ್ಲಿ ತನ್ನ ಸಹೋದರಿಯೊಂದಿಗೆ ವಾಸಿಸುತ್ತಿದ್ದ ಶೀತಲ್, ಜೂನ್ 14 ರಂದು ಚಿತ್ರೀಕರಣಕ್ಕಾಗಿ ಮನೆಯಿಂದ ಹೊರಟವರು ನಾಪತ್ತೆ ಆಗಿದ್ದರು.

ಬಳಿಕ ಆಕೆಯ ಕುಟುಂಬವು ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿತ್ತು. ಈ ಬಗ್ಗೆ ಪೊಲೀಸರು ಹುಡುಕಾಟ ನಡೆಸಿದ್ದರು. ಆದರೆ, ಕಾಣೆಯಾಗಿದ್ದ ಶೀತಲ್ ಅಲಿಯಾಸ್ ಸಿಮ್ಮಿ ಚೌಧರಿಯ ಶವ ಸೋಮವಾರ ಸೋನಿಪತ್ನ ಖಾರ್ಖೋಡಾ ಬಳಿಯ ರಿಲಯನ್ಸ್ ಕಾಲುವೆಯಲ್ಲಿ ಪತ್ತೆಯಾಗಿದೆ. ಅವರ ಕೈ ಮತ್ತು ಎದೆಯ ಮೇಲಿನ ಹಚ್ಚೆಗಳ ಆಧಾರದ ಮೇಲೆ ಅಧಿಕಾರಿಗಳು ಮೃತದೇಹವನ್ನು ಗುರುತಿಸಿದರು.

ಶೀತಲ್ ನ ಸಹೋದರೆ ಶನಿವಾರ ವಿಡಿಯೋ ಕರೆ ಮಾಡಿದ ನಂತರ ಅವರ ಫೋನ್ ಸಂಪರ್ಕ ಸಿಕ್ಕಿರಲಿಲ್ಲ. ಕರೆ ಮಾಡಿದ ವೇಳೆ ಗೆಳೆಯ ಸುನೀಲ್ ಹಲ್ಲೆ ನಡೆಸುತ್ತಿದ್ದಾನೆ ಎಂದು ಶೀತಲ್ ಹೇಳಿದ್ದರು. ಭಾನುವಾರ ಶೀತಲ್ ಗೆಳೆಯ ಸುನೀಲ್ ಇದ್ದ ಕಾರು ಕಾಲುವೆಯಲ್ಲಿ ಪತ್ತೆಯಾಗಿತ್ತು. ಕಾರಿನಲ್ಲಿದ್ದ ಸುನೀಲ್ ನನ್ನು ರಕ್ಷಿಸಲಾಗಿದ್ದು, ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಆಲ್ಬಮ್ ಚಿತ್ರೀಕರಣಕ್ಕಾಗಿ ಶೀತಲ್ ಪಾಣಿಪತ್ ನ ಅಹರ್ ಗ್ರಾಮಕ್ಕೆ ತೆರಳಿದ್ದರು. ಆ ರಾತ್ರಿ ಸುನೀಲ್ ಶೀತಲ್ ಅವರನ್ನು ಭೇಟಿಯಾಗಿದ್ದು, ರಾತ್ರಿ ಕಾರಿನಲ್ಲಿ ತೆರದ್ದರು. ನಂತರ ಇಬ್ಬರ ನಡುವೆ ವಾಗ್ವಾದ ನಡೆದಿತ್ತು. ನಂತರ ಆಕೆಯ ಸಹೋದರಿ ಜೊತೆಗೆ ಫೋನ್ ನಲ್ಲಿ ಮಾತನಾಡಿದ್ದ ಶೀತಲ್ ಸುನೀಲ್ ಹಲ್ಲೆ ನಡೆಸಿದ್ದಾನೆ ಎಂದು ತಿಳಿಸಿದ್ದು, ನಂತರ ಆಕೆಯ ಫೋನ್ ಸ್ವಿಚ್ ಆಫ್ ಆಗಿತ್ತು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ