ರಾಜಸ್ಥಾನದಲ್ಲಿ ಅವಿತಿದ್ದ ಪುನೀತ್ ಕೆರೆಹಳ್ಳಿ ಅರೆಸ್ಟ್: ಕಾಮಿಡಿ ಪೀಸ್ ಆಗಿದ್ದ ವ್ಯಕ್ತಿ ಈಗ ಕೊಲೆ ಪ್ರಕರಣದ ಆರೋಪಿ! - Mahanayaka
11:46 PM Thursday 13 - August 2026

ರಾಜಸ್ಥಾನದಲ್ಲಿ ಅವಿತಿದ್ದ ಪುನೀತ್ ಕೆರೆಹಳ್ಳಿ ಅರೆಸ್ಟ್: ಕಾಮಿಡಿ ಪೀಸ್ ಆಗಿದ್ದ ವ್ಯಕ್ತಿ ಈಗ ಕೊಲೆ ಪ್ರಕರಣದ ಆರೋಪಿ!

puneeth kerehalli
05/04/2023

ಬೆಂಗಳೂರು: ಕನಕಪುರ ಸಾತನೂರು ಬಳಿ ಗೋ ಸಾಗಾಟದ ವೇಳೆ ವ್ಯಕ್ತಿಯೋರ್ವನ ಅನುಮಾನಾಸ್ಪದ ಸಾವು ಪ್ರಕರಣದ ಪ್ರಮುಖ ಆರೋಪಿ ಪುನೀತ್ ಕೆರೆಹಳ್ಳಿಯನ್ನು ಪೊಲೀಸರು ಬಂಧಿಸಿದ್ದಾರೆ.

ಕಳೆದೊಂದು ವಾರದಿಂದ ತಲೆಮರೆಸಿಕೊಂಡಿದ್ದ ಪುನೀತ್ ಕೆರೆಹಳ್ಳಿ ಹಾಗೂ  ಒಟ್ಟು ಐವರನ್ನು ಸಾತನೂರು ಠಾಣೆ ಪೊಲೀಸರು ರಾಜಸ್ಥಾನದಲ್ಲಿ ಬಂಧಿಸಿದ್ದಾರೆ.

ಪುನೀತ್ ಕೆರೆಹಳ್ಳಿ ಹಾಗೂ ಗ್ಯಾಂಗ್ ಗೋಸಾಗಾಟಗಾರರ  ಮೇಲೆ ದಾಳಿ ನಡೆಸಿದ ಬಳಿಕ ಓರ್ವ ಗೋಸಾಗಾಟಗಾರ ಮಂಡ್ಯದ ಇದ್ರಿಷ್ ಪಾಷಾ ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದ. ಇದರ ಬೆನ್ನಲ್ಲೇ ಪುನೀತ್ ಕೆರೆಹಳ್ಳಿ ಹಾಗೂ ಆತನ ತಂಡ ತಲೆಮರೆಸಿಕೊಂಡಿತ್ತು.

ರಾತ್ರಿ ವೇಳೆ ರಸ್ತೆಯಲ್ಲಿ ಬರುವ ವಾಹನಗಳನ್ನು ತಡೆದು ಪರಿಶೀಲಿಸುತ್ತಿದ್ದ ಈ ಗ್ಯಾಂಗ್ ಗೋಸಾಗಾಟದ ವಾಹನಗಳನ್ನು ತಡೆದು, ಹಣಕ್ಕೆ ಬೇಡಿಕೆ ಇಡುತ್ತಿದ್ದು, ಹಣ ಕೊಡದೇ ಹೋದರೆ ಅವರಿಗೆ ಕೆಲವು ಉಪಕರಣಗಳನ್ನು ಬಳಸಿ ಶಾಕ್ ನೀಡಿ ಹಿಂಸಿಸುವ ಕೆಲಸ ಮಾಡುತ್ತಿದ್ದರು ಅನ್ನೋ ಆರೋಪ ಕೇಳಿ ಬಂದಿತ್ತು. ಈ ನಡುವೆ ಸಾತನೂರಿನಲ್ಲಿ ಪುನೀತ್ ಕೆರೆಹಳ್ಳಿ ಮತ್ತು ಗ್ಯಾಂಗ್ ದಾಳಿ ನಡೆಸಿದ ಬಳಿಕ ಗೋಸಾಗಾಟ ಮಾಡುತ್ತಿದ್ದ ವಾಹನದಲ್ಲಿದ್ದ ಇದ್ರಿಷ್ ಪಾಷಾ ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದ.

ಹಲವಾರು ಪುಂಡಾಟಿಕೆಯಲ್ಲಿ ಸಕ್ರಿಯನಾಗಿದ್ದ ಪುನೀತ್ ಕೆರೆಹಳ್ಳಿಗೆ ರಾಜಕೀಯ ವ್ಯಕ್ತಿಗಳ ಒಡನಾಟ ಪ್ಲಸ್ ಪಾಯಿಂಟ್ ಆಗಿತ್ತು. ಈತನ ಪುಂಡಾಟಿಕೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಹೋಗುತ್ತಿದ್ದರೂ, ಈತನ ವಿರುದ್ಧ ಯಾವುದೇ ಕಠಿಣ ಕಾನೂನು ಕ್ರಮಗಳು ಆಗಿಲ್ಲ. ಇದು ಈತನ ಉಪಟಳ ಹೆಚ್ಚಳವಾಗಲು ಕಾರಣವಾಗಿದೆ. ಕಾಮಿಡಿ ಪೀಸ್ ನಂತಿದ್ದ ಪುನೀತ್ ಕೆರೆಹಳ್ಳಿ ಇಂದು ಕೊಲೆ ಪ್ರಕರಣದ ಆರೋಪಿಯಾಗಿ ಬದಲಾಗಿದ್ದಾನೆ. ಪ್ರಾಥಮಿಕ ಹಂತದಲ್ಲೇ ಸರಿಯಾಗಿ ಕಾನೂನಿನ ರುಚಿ ತೋರಿಸಿದ್ದರೆ ಇಂದು ಒಬ್ಬ ಅಮಾಯಕನ ಪ್ರಾಣವಾದ್ರು ಉಳಿಯುತ್ತಿತ್ತು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ