"ಚಿಣ್ಣರ ಚಿಲಿಪಿಲಿ" ಮಕ್ಕಳ ಆಟ—ಪಾಠ: ಬೇಸಿಗೆ ಶಿಬಿರ ಉದ್ಘಾಟನೆ - Mahanayaka

“ಚಿಣ್ಣರ ಚಿಲಿಪಿಲಿ” ಮಕ್ಕಳ ಆಟ—ಪಾಠ: ಬೇಸಿಗೆ ಶಿಬಿರ ಉದ್ಘಾಟನೆ

chinnara chilipili
19/05/2025

ಬಜಪೆ: ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ ) ಸ್ವಾಭಿಮಾನಿ ಪ್ರೊ.ಬಿ.ಕೃಷ್ಣಪ್ಪ ಬಣ, ಗ್ರಾಮ ಶಾಖೆ ಎಕ್ಕಾರು ಹಾಗೂ ಜೀವ ನಿಧಿ ಟ್ರಸ್ಟ್ (ರಿ ) ಬಜ್ಪೆ ಇದರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿರುವ 5 ದಿನಗಳ ” ಚಿಣ್ಣರ ಚಿಲಿಪಿಲಿ ” ಮಕ್ಕಳ ಆಟ– ಪಾಠ ಬೇಸಿಗೆ ಶಿಬಿರವನ್ನು ಕೆಂಚಗುಡ್ಡೆ ಅಂಬೇಡ್ಕರ್ ಭವನದಲ್ಲಿ ವೈದ್ಯನಾಥೇಶ್ವರ ದೈವಸ್ಥಾನ ಕೆಂಚಗುಡ್ಡೆ ಇದರ ಗುರಿಕಾರ ಶ್ರೀ ರತ್ನಪ್ಪ ಕೆಂಚಗುಡ್ಡೆ ಇವರು ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ದೀಪ ಬೆಳಗಿಸಿ ಉದ್ಘಾಟಿಸಿದರು.

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಡಗ ಎಕ್ಕಾರು ಇದರ ಮುಖ್ಯ ಉಪಾಧ್ಯಯರಾದ ಜಯಂತಿಯವರು ಶಿಬಿರಾರ್ಥಿಗಳಿಗೆ ಪುಸ್ತಕ ಹಾಗೂ ಪೆನ್ನು ನೀಡುವ ಮೂಲಕ ಶಿಬಿರಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, “ಮಕ್ಕಳು ರಜಾ ದಿನಗಳಲ್ಲಿ ಎಲ್ಲೆಂದರಲ್ಲಿ ಅಲೆದಾಡಿ ತಮ್ಮ ಅಮೂಲ್ಯ ಸಮಯವನ್ನು ವ್ಯರ್ಥ ಮಾಡುವ ಬದಲು ಇಂತಹ ಬೇಸಿಗೆ ಶಿಬಿರಗಳಲ್ಲಿ ಭಾಗವಹಿಸಿ, ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವ ಮೂಲಕ ಅವರ ಜ್ಞಾನ ಮಟ್ಟವನ್ನು ಬೆಳೆಸಬೇಕು. ಮಕ್ಕಳು ವಿದ್ಯಾವಂತರಾಗಿ ಸಮಾಜದಲ್ಲಿ ಉತ್ತಮ ವ್ಯಕ್ತಿತ್ವವನ್ನು ಬೆಳೆಸಿಕೊಂಡರೆ ಮಾತ್ರ ದೇಶದ ಆಸ್ತಿಗಳಾಗಲು ಸಾಧ್ಯ. ವಿದ್ಯೆಯಿಂದ ಮಾತ್ರ ಸಮಾಜದಲ್ಲಿರುವ ತಾರತಮ್ಯವನ್ನು ನಿವಾರಿಸಿ ನಾರಾಯಣ ಗುರುಗಳ ಆಶಯದಂತೆ ಸ್ವತಂತ್ರರಾಗಲು ಸಾಧ್ಯ ಎಂದರು.

ಜೀವ ನಿಧಿ ಟ್ರಸ್ಟ್ (ರಿ )ಬಜ್ಪೆ ಇದರ ನಿರ್ದೇಶಕರಾದ ಜಯಂತ್ ಮಾತನಾಡಿ, “ಮಕ್ಕಳಲ್ಲಿ ಹಲವಾರು ಪ್ರತಿಭೆಗಳಿವೆ, ಅದನ್ನು ಗುರುತಿಸಿ ಅವರಿಗೆ ಸರಿಯಾದ ಮಾರ್ಗದರ್ಶನ ನೀಡಿದ್ದೇ ಆದಲ್ಲಿ ಅದು ಅವರ ಮುಂದಿನ ಶಿಕ್ಷಣಕ್ಕೆ ಪೂರಕವಾಗಬಹುದು. ಭವಿಷ್ಯದ ಭಾರತ ಕಟ್ಟುವಲ್ಲಿ ಇಂದಿನ ಮಕ್ಕಳ ಪಾತ್ರ ಪ್ರಮುಖವಾಗಲಿದೆ ಎಂದರು.

ವಿದ್ಯಾರ್ಥಿ ನಾಯಕಿ ಕು.ಅಂಕಿತಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ರಘು ಕೆ. ಎಕ್ಕಾರು ಪ್ರಾಸ್ತಾವಿಕವಾಗಿ ಮಾತನಾಡಿದರು. ದ. ಸಂ.ಸ. ಗ್ರಾಮ ಸಂಚಾಲಕ ಗಣೇಶ್ ಕೆಂಚಗುಡ್ಡೆ, ಹಿರಿಯ ಕಾರ್ಯಕರ್ತರಾದ ಯಮುನಾ ಎಕ್ಕಾರು ಉಪಸ್ಥಿತರಿದ್ದರು. ಕು.ಸೌಜನ್ಯ ಸುರೇಶ್ ಕಾರ್ಯಕ್ರಮ ನಿರ್ವಹಿಸಿ, ಕು.ಕೃತಿಕಾ ಸ್ವಾಗತಿಸಿದರು. ಕು.ಪ್ರಣಮ್ಯ ಧನ್ಯವಾದ ಸಮರ್ಪಿಸಿದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ