ಪಬ್‌ ದಾಳಿಗೆ ಬಜರಂಗದಳಕ್ಕೆ ಅಧಿಕಾರ ನೀಡಿದವರು ಯಾರು?: ಯೂಥ್  ಜೆಡಿಎಸ್‌ ಪ್ರಶ್ನೆ - Mahanayaka
10:39 PM Thursday 13 - August 2026

ಪಬ್‌ ದಾಳಿಗೆ ಬಜರಂಗದಳಕ್ಕೆ ಅಧಿಕಾರ ನೀಡಿದವರು ಯಾರು?: ಯೂಥ್  ಜೆಡಿಎಸ್‌ ಪ್ರಶ್ನೆ

akshith suvarna
26/07/2022

ಮಂಗಳೂರು: ಹೊಟೇಲ್ ಗೆ ಹೋಗಿ  ಗೂಂಡಾಗಿರಿ ಪ್ರದರ್ಶಿಸಲು  ಬಜರಂಗದಳಕ್ಕೆ ಅಧಿಕಾರ ನೀಡಿದವರು ಯಾರು? ಎಂದು‌ ಜೆಡಿಎಸ್ ಯೂಥ್  ಘಟಕದ ಜಿಲ್ಲಾಧ್ಯಕ್ಷ ಅಕ್ಷಿತ್ ಸುವರ್ಣ ಪ್ರಶ್ನಿಸಿದ್ದಾರೆ‌.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, 2009ರಲ್ಲಿ ಪಬ್  ದಾಳಿ ಆದಾಗಲೂ ರಾಜ್ಯದಲ್ಲಿ ಬಿಜೆಪಿ ಸರಕಾರವಿತ್ತು. ಈಗಲೂ ಅದೇ ಸರಕಾರ ಇದೆ. ಚುನಾವಣೆ ಸಮೀಪಿಸುತ್ತಿರುವಾಗ ಈ ಕೃತ್ಯ ನಡೆಯುತ್ತಿದ್ದು, ಇದು‌ ರಾಜಕೀಯ ಪ್ರೇರಿತ‌ ದಾಳಿ ಎಂದು‌ ಪರೋಕ್ಷವಾಗಿ ಹೇಳಿದರು.

ನಿನ್ನೆ ನಗರದಲ್ಲಿ ನಡೆದ ಕೃತ್ಯದಲ್ಲಿ ಭಾಗವಹಿಸಿದವರನ್ನು ಬಂಧಿಸಬೇಕು. ಅವರ  ಹಿನ್ನೆಲೆ ಪರಿಶೀಲಿಸಬೇಕು. ಪೊಲೀಸ್ ಆಯುಕ್ತರು ಸೂಕ್ತ ಕ್ರಮ ವಹಿಸಬೇಕು. ಸರಕಾರ  ಇಂತಹ ಸಂಘಟನೆಗಳನ್ನು ನಿಷೇಧಿಸಬೇಕು ಎಂದು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಫೈಸಲ್ ರಹ್ಮಾನ್, ಹಿತೇಶ್ ರೈ, ಸುಮಿತ್ ಸುವರ್ಣ, ಲತೀಶ್  ಕರ್ಕೇರ, ರಶೀದ್ ಮೊದಲಾದವರು ಉಪಸ್ಥಿತರಿದ್ದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ