ಮುಸ್ಲಿಮರು ದೇಶಕ್ಕೆ ಹಾನಿಕಾರಕ: ಬಿಹಾರದ ಬಿಜೆಪಿ ಶಾಸಕನಿಂದ ವಿವಾದಾತ್ಮಕ ಹೇಳಿಕೆ - Mahanayaka
5:50 PM Wednesday 17 - September 2025

ಮುಸ್ಲಿಮರು ದೇಶಕ್ಕೆ ಹಾನಿಕಾರಕ: ಬಿಹಾರದ ಬಿಜೆಪಿ ಶಾಸಕನಿಂದ ವಿವಾದಾತ್ಮಕ ಹೇಳಿಕೆ

01/01/2025

ಬಿಹಾರದ ಬಿಹ್ಪುರ್ ಕ್ಷೇತ್ರದ ಬಿಜೆಪಿ ಶಾಸಕ ಎಂಜಿನಿಯರ್ ಶೈಲೇಂದ್ರ ಅವರು ಮುಸ್ಲಿಮರು ಜನಸಂಖ್ಯಾ ನಿಯಂತ್ರಣವನ್ನು ಜಾರಿಗೆ ತರಬೇಕು ಎಂದು ಹೇಳುವ ಮೂಲಕ ವಿವಾದವನ್ನು ಹುಟ್ಟುಹಾಕಿದ್ದಾರೆ.


Provided by

ಮುಸ್ಲಿಮರ ಮತಗಳನ್ನು ಸ್ವೀಕರಿಸುವುದಕ್ಕಿಂತ ಚುನಾವಣೆಯಲ್ಲಿ ಸೋಲಲು ಬಯಸುತ್ತೇನೆ ಎಂದು ಶೈಲೇಂದ್ರ ಹೇಳಿದ್ದಾರೆ.

ದೇಶಾದ್ಯಂತ ಅವ್ಯವಸ್ಥೆಯನ್ನು ಸೃಷ್ಟಿಸುವವರು ಯಾರು? ಸನಾತನ ಧರ್ಮಕ್ಕೆ ಮತ ಹಾಕುವವರನ್ನು ಯಾರು ವಿರೋಧಿಸುತ್ತಾರೆ? ದೇಶದಲ್ಲಿ ಭಯೋತ್ಪಾದಕರು ಯಾರು? ಮಸೀದಿಗಳಲ್ಲಿ ದೇವಾಲಯದ ಅವಶೇಷಗಳು ಎಲ್ಲಿ ಕಂಡುಬರುತ್ತವೆ? ಈ ಎಲ್ಲಾ ಚಟುವಟಿಕೆಗಳಿಗೆ ಯಾರು ಜವಾಬ್ದಾರರು? ಮುಸ್ಲಿಮರು ಇದನ್ನು ಮಾಡುತ್ತಾರೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಮುಸ್ಲಿಮರನ್ನು ಯಾರು ಬೆಂಬಲಿಸುತ್ತಾರೆ? ಅದು ಆರ್ ಜೆಡಿ.

ನಮಗೆ ಮುಸ್ಲಿಂ ಮತಗಳು ಅಗತ್ಯವಿಲ್ಲ. ಯಾಕೆಂದರೆ ಮುಸ್ಲಿಮರು ದೇಶಕ್ಕೆ ಹಾನಿಕಾರಕ. ನಾವು ಅವರ ಮತಗಳನ್ನು ಏಕೆ ತೆಗೆದುಕೊಳ್ಳಬೇಕು? ಇಂದು, ಗಡಿಯಲ್ಲಿ ಸೈನಿಕರನ್ನು ಕೊಲ್ಲುತ್ತಿರುವವರು ಯಾರು? ಇದು ಪಾಕಿಸ್ತಾನದಿಂದ ಬಂದ ಹಿಂದೂಗಳೇ ಅಥವಾ ಮುಸ್ಲಿಮರೇ ಎಂದು ಬಾಯಿಗೆ ಬಂದಂತೆ ಮಾತನಾಡಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ