ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯಲ್ಲಿ ತೇಜಸ್ವಿ ಸಹಾಯಕನ ಕೈವಾಡ: ಬಿಹಾರ ಉಪಮುಖ್ಯಮಂತ್ರಿ ಆರೋಪ - Mahanayaka

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯಲ್ಲಿ ತೇಜಸ್ವಿ ಸಹಾಯಕನ ಕೈವಾಡ: ಬಿಹಾರ ಉಪಮುಖ್ಯಮಂತ್ರಿ ಆರೋಪ

20/06/2024

ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ನೀಟ್-ಯುಜಿ ವಿವಾದದ ಪ್ರಕರಣದಲ್ಲಿ ಆರ್ ಜೆಡಿ ನಾಯಕ ತೇಜಸ್ವಿ ಯಾದವ್ ಅವರ ಸಹಾಯಕನ ಕೈವಾಡವಿದೆ ಎಂದು ಬಿಹಾರ ಉಪಮುಖ್ಯಮಂತ್ರಿ ವಿಜಯ್ ಕುಮಾರ್ ಸಿನ್ಹಾ ಹೇಳಿದ್ದಾರೆ.

ಈ ಕುರಿತು‌ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಿನ್ಹಾ, ತೇಜಸ್ವಿ ಯಾದವ್ ಅವರ ಸಹಾಯಕ ಪ್ರೀತಮ್ ಕುಮಾರ್ ಅವರು ಬಿಹಾರ ರಸ್ತೆ ನಿರ್ಮಾಣ ಇಲಾಖೆಯ ಉದ್ಯೋಗಿಗೆ ಕರೆ ಮಾಡಿ ಎಂಜಿನಿಯರ್ ಸಿಕಂದರ್ ಪ್ರಸಾದ್ ಯಡವೇಂದು ಅವರಿಗೆ ಕೊಠಡಿ ಕಾಯ್ದಿರಿಸಲು ಕರೆ ಮಾಡಿದ್ದರು.

ನೀಟ್ ಆಕಾಂಕ್ಷಿಯಾಗಿರುವ ತನ್ನ ಸೋದರಳಿಯ ಅನುರಾಗ್ ಯಾದವ್, ಅವರ ತಾಯಿ ಮತ್ತು ಇತರ ಸಹಚರರನ್ನು ಪಾಟ್ನಾದ ಸರ್ಕಾರಿ ಬಂಗಲೆಯಲ್ಲಿ ಉಳಿಯಲು ಶಿಫಾರಸು ಮಾಡಿದ್ದೇನೆ ಎಂದು ಸಿಕಂದರ್ ಪ್ರಸಾದ್ ಯಡವೇಂದು ಹೇಳಿದ್ದಾರೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.


Provided by
Provided by

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ