ಕಥುವಾದಲ್ಲಿ ನಾಪತ್ತೆಯಾಗಿದ್ದ ಮೂವರು ನಾಗರಿಕರ ಶವಗಳು ಅರಣ್ಯದಲ್ಲಿ ಪತ್ತೆ - Mahanayaka

ಕಥುವಾದಲ್ಲಿ ನಾಪತ್ತೆಯಾಗಿದ್ದ ಮೂವರು ನಾಗರಿಕರ ಶವಗಳು ಅರಣ್ಯದಲ್ಲಿ ಪತ್ತೆ

08/03/2025

ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯಿಂದ ನಾಪತ್ತೆಯಾಗಿದ್ದ ಮೂವರು ನಾಗರಿಕರ ಶವಗಳನ್ನು ಭದ್ರತಾ ಪಡೆಗಳು ಶನಿವಾರ ಪತ್ತೆ ಮಾಡಿವೆ. ಜಮ್ಮುವಿನ ಕಥುವಾ ಜಿಲ್ಲೆಯಿಂದ ಗುರುವಾರ ನಾಪತ್ತೆಯಾಗಿದ್ದ ಮೂವರು ಹಿಂದೂ ನಾಗರಿಕರ ಶವಗಳು ಬಿಲ್ಲಾವರ್ ನ ಮೇಲ್ಭಾಗದಲ್ಲಿ ಪತ್ತೆಯಾಗಿವೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಕಥುವಾದ ಲೋಹೈ ಮಲ್ಹಾರ್ ಪ್ರದೇಶದಲ್ಲಿ ನಡೆದ ಮದುವೆಯಲ್ಲಿ ಭಾಗವಹಿಸಲು ಮನೆಯಿಂದ ಹೊರಟ ನಂತರ ಮೂವರು ನಾಗರಿಕರು ನಾಪತ್ತೆಯಾಗಿದ್ದಾರೆ.


Provided by

ಗುರುವಾರ ರಾತ್ರಿ 8.30 ರ ಸುಮಾರಿಗೆ ಬಿಲ್ಲಾವರ್ನ ದೆಹೋಟಾ ಗ್ರಾಮದಿಂದ ಲೋಹೈ ಮಲ್ಹಾರ್ನ ಸುರಾಗ್ ಗ್ರಾಮಕ್ಕೆ ಮದುವೆಯ ತಂಡ ತೆರಳುತ್ತಿದ್ದಾಗ ನಾಗರಿಕರು ಕಾಣೆಯಾಗಿದ್ದಾರೆ ಎಂದು ಪ್ರದೇಶದ ಸ್ಥಳೀಯರು ತಿಳಿಸಿದ್ದಾರೆ. ಕಾಣೆಯಾದವರನ್ನು ಮರ್ಹೂನ್ ಗ್ರಾಮದ ಜೋಗೇಶ್ ಸಿಂಗ್ (35), ದೆಹೋಟಾ ಗ್ರಾಮದ ದರ್ಶನ್ ಸಿಂಗ್ (40) ಮತ್ತು ಜಿಲ್ಲೆಯ ಬಿಲ್ಲಾವರ್ ತಹಸಿಲ್ನ ದೆಹೋಟಾ ಗ್ರಾಮದ 14 ವರ್ಷದ ಬರೂನ್ ಸಿಂಗ್ ಎಂದು ಗುರುತಿಸಲಾಗಿದೆ.

ಕಾಣೆಯಾದ ಮೂವರು ನಾಗರಿಕರ ವಿಷಯವನ್ನು ಬಿಜೆಪಿ ಶಾಸಕರೊಬ್ಬರು ಶುಕ್ರವಾರ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯಲ್ಲಿ ಎತ್ತಿದ್ದರು ಮತ್ತು ಸರ್ಕಾರದಿಂದ ಪ್ರತಿಕ್ರಿಯೆ ಕೋರಿದ್ದರು. ವಿಧಾನಸಭೆ ಅಧಿವೇಶನ ಆರಂಭವಾಗುತ್ತಿದ್ದಂತೆ ಬಿಜೆಪಿ ಸದಸ್ಯ ಸತೀಶ್ ಶರ್ಮಾ ಅವರು ಬಿಲ್ಲಾವರ್ ಕ್ಷೇತ್ರದ ಲೋಹೈ ಮಲ್ಹಾರ್ ಪ್ರದೇಶದಲ್ಲಿ ಕಾಣೆಯಾದ ನಾಗರಿಕರ ಬಗ್ಗೆ ಸದನಕ್ಕೆ ಮಾಹಿತಿ ನೀಡುವಂತೆ ಪಾಯಿಂಟ್ ಆಫ್ ಆರ್ಡರ್ ಮಾಡಿದ್ದರು.


Provided by

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ