ಶಾಕಿಂಗ್ ನ್ಯೂಸ್: ಚುನಾವಣೆಗೂ ಮೊದಲೇ ಅಭ್ಯರ್ಥಿಯ ಹತ್ಯೆ! - Mahanayaka
2:15 AM Wednesday 15 - October 2025

ಶಾಕಿಂಗ್ ನ್ಯೂಸ್: ಚುನಾವಣೆಗೂ ಮೊದಲೇ ಅಭ್ಯರ್ಥಿಯ ಹತ್ಯೆ!

25/10/2020

ಪಾಟ್ನಾ:  ಬಿಹಾರ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದ್ದ ಜನತಾದಳ ರಾಷ್ಟ್ರೀಯವಾದಿ ಪಕ್ಷದ ಅಭ್ಯರ್ಥಿಯನ್ನು ಗುಂಡು ಹಾರಿಸಿ ಹತ್ಯೆ ಗೈದ ಘಟನೆ ಶೆಯೋಹರ್ ಜಿಲ್ಲೆಯ ಹಥ್ಸರ್ ಗ್ರಾಮದಲ್ಲಿ ನಡೆದಿದೆ.


Provided by
mahanayaka

ಶ್ರೀನಾರಾಯಣ ಸಿಂಗ್ ಹತ್ಯೆಗೀಡಾದವರಾಗಿದ್ದಾರೆ. ಇವರ ಮೇಲೆ ಗುಂಡು ಹಾರಿಸಿ ತಪ್ಪಿಸಿಕೊಳ್ಳಲು ಯತ್ನಿಸಿದ ಓರ್ವ ಆರೋಪಿಯನ್ನು ನಾರಾಯಣ ಸಿಂಗ್  ಬೆಂಬಲಿಗರು ಹಿಡಿದು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಆತನನ್ನು ಚಿಕಿತ್ಸೆಗಾಗಿ ದಾಖಲಿಸಲಾಯಿತಾದರೂ ಆತ ಬದುಕುಳಿಯಲಿಲ್ಲ ಎಂದು ಇಲ್ಲಿನ ಎಸ್ಪಿ ಸಂತೋಷ್ ಕುಮಾರ್ ಹೇಳಿದ್ದಾರೆ.

ಶೂಟರ್ ನ ಗುರುತು ಪತ್ತೆ ಮಾಡಲು ಸಾಧ್ಯವಾಗಿಲ್ಲ ಬಿಹಾರದಲ್ಲಿ ಅ.28ರಿಂದ 3 ಹಂತದಲ್ಲಿ ಮತದಾನ ನಡೆಯಲಿದೆ. ಆದರೆ, ಅದಕ್ಕೂ ಮೊದಲೇ ಅಭ್ಯರ್ಥಿಯನ್ನು ಹತ್ಯೆ ಮಾಡಲಾಗಿದೆ.

ಮಹಾನಾಯಕ ಟೆಲಿಗ್ರಾಮ್ ಗ್ರೂಪ್ ಗೆ ಜಾಯಿನ್ ಆಗಿ

https://t.me/joinchat/Q8oMxBZkakVUy7-VpEsIXQ

ಇತ್ತೀಚಿನ ಸುದ್ದಿ