ಕೇರಳದ ಬ್ಯಾಂಕ್ ನಲ್ಲಿ ನಡೀತು ಹಗಲು ದರೋಡೆ: 15 ಲಕ್ಷ ರೂ ದೋಚಿದ ದರೋಡೆಕೋರ ಎಸ್ಕೇಪ್

ಕೇರಳದ ತ್ರಿಶೂರ್ ಜಿಲ್ಲೆಯ ಫೆಡರಲ್ ಬ್ಯಾಂಕಿನ ಚಲಕುಡಿ ಪೊಟ್ಟಾ ಶಾಖೆಯಲ್ಲಿ ಹಗಲು ದರೋಡೆ ನಡೆದಿದೆ. ಅಲ್ಲಿ ಉದ್ಯೋಗಿಗಳನ್ನು ಒತ್ತೆಯಾಳುಗಳಾಗಿ ಇರಿಸಿ ಹಣವನ್ನು ಕಳವು ಮಾಡಲಾಗಿದೆ. ಇನ್ನು ಈ ಘಟನೆಯ ಸಮಯದಲ್ಲಿ ಉಳಿದ ಉದ್ಯೋಗಿಗಳು ಊಟಕ್ಕೆ ಹೋಗಿದ್ದರಿಂದ ಮ್ಯಾನೇಜರ್ ಮತ್ತು ಇನ್ನೊಬ್ಬ ಸಿಬ್ಬಂದಿ ಮಾತ್ರ ಹಾಜರಿದ್ದರು.
ಚಾಕು ಹಿಡಿದು ಮ್ಯಾನೇಜರ್ ಮತ್ತು ಉದ್ಯೋಗಿಯನ್ನು ಬೆದರಿಸಿದ ದರೋಡೆಕೋರರು, ಕೌಂಟರ್ ಗಾಜನ್ನು ಕುರ್ಚಿಯಿಂದ ಒಡೆದು ಹಣವನ್ನು ಲೂಟಿ ಮಾಡುವ ಮೊದಲು ಅವರನ್ನು ಶೌಚಾಲಯದೊಳಗೆ ಲಾಕ್ ಮಾಡಿದ್ದಾರೆ. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ಆರಂಭಿಸಿದ್ದಾರೆ.
ಉದ್ಯೋಗಿಗಳ ಹೇಳಿಕೆಗಳ ಪ್ರಕಾರ, ದರೋಡೆಯ ಸಮಯದಲ್ಲಿ ಹಾಜರಿದ್ದ ಕ್ಯಾಷಿಯರ್, ಹಣವನ್ನು ದೋಚುವ ಮೊದಲು ಕಳ್ಳನು ಅವರನ್ನು ಬೆದರಿಸಲು ಚಾಕುವನ್ನು ಬಳಸಿದ್ದಾನೆ ಎಂದು ಹೇಳಿಕೆ ನೀಡಿದ್ದಾರೆ. ಪೊಲೀಸರು ಶಂಕಿತನಿಗಾಗಿ ವ್ಯಾಪಕ ಶೋಧವನ್ನು ಪ್ರಾರಂಭಿಸಿದ್ದಾರೆ ಮತ್ತು ಅವನು ಬೇರೆ ರಾಜ್ಯದವನಾಗಿರಬಹುದೇ ಎಂಬ ಬಗ್ಗೆಯೂ ತನಿಖೆ ನಡೆಸುತ್ತಿದ್ದಾರೆ. ಪ್ರಾಥಮಿಕ ಅಂದಾಜಿನ ಪ್ರಕಾರ ಸುಮಾರು ೧೫ ಲಕ್ಷ ರೂ. ಕಳ್ಳತನವಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj