ಶಿವಾಜಿ ಪ್ರತಿಮೆ ಕುಸಿತ ಪ್ರಕರಣ: ಪೊಲೀಸರಿಂದ ಸಲಹೆಗಾರನ ಬಂಧನ - Mahanayaka
12:17 PM Monday 15 - September 2025

ಶಿವಾಜಿ ಪ್ರತಿಮೆ ಕುಸಿತ ಪ್ರಕರಣ: ಪೊಲೀಸರಿಂದ ಸಲಹೆಗಾರನ ಬಂಧನ

30/08/2024

ಮಹಾರಾಷ್ಟ್ರದ ಸಿಂಧುದುರ್ಗ್ ಜಿಲ್ಲೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜ್ ಅವರ ಪ್ರತಿಮೆ ಕುಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಚನಾತ್ಮಕ ಸಲಹೆಗಾರನನ್ನು ಶುಕ್ರವಾರ ಬಂಧಿಸಲಾಗಿದೆ.


Provided by

ಕೊಲ್ಹಾಪುರ ಅಪರಾಧ ವಿಭಾಗ ಮತ್ತು ಮಾಲ್ವನ್ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಕೊಲ್ಹಾಪುರ ನಿವಾಸಿ ಚೇತನ್ ಪಾಟೀಲ್ ನನ್ನು ಮುಂಜಾನೆ ಬಂಧಿಸಲಾಗಿದೆ. ನಂತರ ಅವರನ್ನು ಮಾಲ್ವಾನ್ ಪೊಲೀಸ್ ಕಸ್ಟಡಿಗೆ ವರ್ಗಾಯಿಸಲಾಯಿತು.

ಈ ಪ್ರಕರಣದಲ್ಲಿ ಎಫ್ಐಆರ್ ನಲ್ಲಿ ಹೆಸರಿಸಲಾಗಿರುವ ಪಾಟೀಲ್ ಈ ಹಿಂದೆ ಯೋಜನೆಯ ರಚನಾತ್ಮಕ ಸಲಹೆಗಾರರಾಗಿರುವುದನ್ನು ನಿರಾಕರಿಸಿದ್ದರು. ಪ್ರತಿಮೆಯ ಪ್ಲಾಟ್ಫಾರ್ಮ್‌ನಲ್ಲಿ ಕೆಲಸ ಮಾಡುವ ಕೆಲಸವನ್ನು ಮಾತ್ರ ತನಗೆ ವಹಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಆದರೆ ಥಾಣೆ ಮೂಲದ ಕಂಪನಿಯು ಪ್ರತಿಮೆಗೆ ಸಂಬಂಧಿಸಿದ ಕೆಲಸಗಳನ್ನು ನಿರ್ವಹಿಸಿದೆ.

ಸಿಂಧುದುರ್ಗದ ಮಾಲ್ವಾನ್ನ ರಾಜ್‌ಕೋಟ್ ಕೋಟೆಯಲ್ಲಿರುವ 17 ನೇ ಶತಮಾನದ ಮರಾಠಾ ಯೋಧ ರಾಜನ 35 ಅಡಿ ಎತ್ತರದ ಪ್ರತಿಮೆ ಆಗಸ್ಟ್ 26 ರ ಸೋಮವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಕುಸಿದಿದೆ.
ಈ ಪ್ರತಿಮೆಯ ಕುಸಿತವು ಮಹಾರಾಷ್ಟ್ರದಲ್ಲಿ ರಾಜಕೀಯ ವಿವಾದವನ್ನೇ ಸೃಷ್ಟಿ ಮಾಡಿತ್ತು. ಪ್ರತಿಮೆ ಯಾಕೆ ಉರುಳಿತು ಎಂಬುದನ್ನು ಕಂಡುಹಿಡಿಯಲು ರಾಜ್ಯ ಸರ್ಕಾರವು ತಾಂತ್ರಿಕ ಸಮಿತಿಯನ್ನು ರಚಿಸಿತು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ