ಪ್ರಧಾನಿ ಮೋದಿ ಭಾಗಲ್ಪುರ ಭೇಟಿ ವಿಚಾರ: ಬಿಹಾರದಲ್ಲಿ ರಾಜಕೀಯ ಕಾವು - Mahanayaka

ಪ್ರಧಾನಿ ಮೋದಿ ಭಾಗಲ್ಪುರ ಭೇಟಿ ವಿಚಾರ: ಬಿಹಾರದಲ್ಲಿ ರಾಜಕೀಯ ಕಾವು

23/02/2025


Provided by

ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಸುಮಾರು 9.8 ಕೋಟಿ ರೈತರಿಗೆ ಸುಮಾರು 23,000 ಕೋಟಿ ರೂ.ಗಳನ್ನು ವಿತರಿಸಲು ಸಜ್ಜಾಗಿರುವ ಪ್ರಧಾನಿ ನರೇಂದ್ರ ಮೋದಿಯವರ ಭಾಗಲ್ಪುರಕ್ಕೆ ಭೇಟಿ ನೀಡುವ ಒಂದು ದಿನ ಮೊದಲು ಬಿಹಾರದಲ್ಲಿ ರಾಜಕೀಯ ಕಾವು ಏರಿದೆ. ಈ ಭೇಟಿಯು ರಾಜಕೀಯ ನಾಯಕರ ನಡುವೆ ವಾಕ್ಸಮರಕ್ಕೆ ನಾಂದಿ ಹಾಡಿದ್ದು, ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯ ಮೇಲೆ ಪ್ರಧಾನಿ ಕಣ್ಣಿಟ್ಟಿದ್ದಾರೆ ಎಂದು ವಿರೋಧ ಪಕ್ಷಗಳು ಆರೋಪಿಸಿವೆ.


Provided by

ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ಪ್ರಧಾನಿ ಭೇಟಿಯ ಸಿದ್ಧತೆಗಳ ಮೇಲ್ವಿಚಾರಣೆಗಾಗಿ ಒಂದು ದಿನ ಮುಂಚಿತವಾಗಿ ಬಿಹಾರಕ್ಕೆ ಆಗಮಿಸಿದ್ದಾರೆ. ದರ್ಭಾಂಗದಲ್ಲಿ ಫಾಕ್ಸ್ ನಟ್ (ಮಖಾನಾ) ರೈತರೊಂದಿಗೆ ಸಂವಾದ ನಡೆಸಿದ ಅವರು, ಇತ್ತೀಚಿನ ಕೇಂದ್ರ ಬಜೆಟ್ ನಲ್ಲಿ ಘೋಷಿಸಲಾದ ಉದ್ದೇಶಿತ ಮಖಾನಾ ಮಂಡಳಿಯ ಯೋಜನೆಗಳ ಬಗ್ಗೆ ಚರ್ಚಿಸಿದ್ದಾರೆ.

‘ನಿಜವಾದ ಪಾಲುದಾರರಾಗಿರುವ ರೈತರೊಂದಿಗೆ ಸಮಾಲೋಚಿಸಿ ಮಖಾನಾ ಮಂಡಳಿಯನ್ನು ಸ್ಥಾಪಿಸಬೇಕು ಎಂದು ನಾವು ನಿರ್ಧರಿಸಿದ್ದೇವೆ. ದೆಹಲಿಯ ಕೃಷಿ ಭವನದಿಂದ ನಮಗೆ ಆದೇಶ ಬೇಕಾಗಿಲ್ಲ’ ಎಂದು ಚೌಹಾಣ್ ‘ಮಖಾನಾ ಪಂಚಾಯತ್’ ನಂತರ ಸುದ್ದಿಗಾರರಿಗೆ ತಿಳಿಸಿದ್ದಾರೆ.


Provided by

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ