ಸಚಿವ ಸಂಪುಟ ವಿಸ್ತರಣೆ ಯಾವಾಗ? | ಯಡಿಯೂರಪ್ಪ ಏನಂದ್ರು? - Mahanayaka

ಸಚಿವ ಸಂಪುಟ ವಿಸ್ತರಣೆ ಯಾವಾಗ? | ಯಡಿಯೂರಪ್ಪ ಏನಂದ್ರು?

27/11/2020


Provided by

ಬೆಂಗಳೂರು: ರಾಜ್ಯ ಸಂಪುಟ ವಿಸ್ತರಣೆ ಅಥವಾ ಪುನರ್ ರಚನೆ ನಡೆಯುತ್ತದೆಯೇ, ಇಲ್ಲವೇ ? ಎನ್ನುವುದು ಇದೀಗ ಅನುಮಾನವಾಗಿಯೇ ಉಳಿದಿದೆ.  ಈ ನಡುವೆ ಸಿಎಂ ಯಡಿಯೂರಪ್ಪನವರು  ಮತ್ತೊಮ್ಮೆ ಅಮಿತ್ ಶಾ ಅವರನ್ನು ಭೇಟಿ ಮಾಡುತ್ತೇನೆ ಎಂದು ಹೇಳಿದ್ದಾರೆ.

ವಿಧಾನಸೌಧದಲ್ಲಿಂದು ಈ ಸಂಬಂಧ  ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಮತ್ತೊಮ್ಮೆ ದೆಹಲಿಗೆ ತೆರಳಿ ಅಮಿತ್ ಶಾ ರನ್ನು ಭೇಟಿಯಾಗಿ ನಿರ್ಧಾರ ಮಾಡುತ್ತೇನೆ. ಶಾ ಅವರೊಂದಿಗೆ ಮಾತನಾಡಿ ವಿಶೇಷ ತೀರ್ಮಾನ ಕೈಗೊಳ್ಳುತ್ತೇನೆ ಎಂದು ಹೇಳಿದರು.

ಒಂದೆಡೆ ಯಡಿಯೂರಪ್ಪನವರು ದೆಹಲಿಗೆ ತೆರಳುತ್ತಿದ್ದಂತೆಯೇ ಅಮಿತ್ ಶಾ ಅವರು ತಪ್ಪಿಸಿಕೊಳ್ಳುತ್ತಿದ್ದಾರೆ. ಇನ್ನೊಂದೆಡೆಯಲ್ಲಿ ಸಚಿವ ಸ್ಥಾನಾಕಾಂಕ್ಷಿಗಳು ದೆಹಲಿಗೆ ತೆರಳಿ ಬಿಜೆಪಿ ಅಧ್ಯಕ್ಷ ನಡ್ಡಾ ಅವರನ್ನು ಭೇಟಿಯಾಗುತ್ತಿದ್ದಾರೆ.  ಈ ನಡುವೆ ಹೈಕಮಾಂಡ್ ಕೂಡ ಗೊಂದಲಕ್ಕೀಡಾಗಿದೆ.

 

ಇತ್ತೀಚಿನ ಸುದ್ದಿ