ಮಿಸ್ಸಾಗಿ ಬಸ್ ಹತ್ತಿದ 5 ವರ್ಷದ ಬಾಲಕ: 40 ನಿಮಿಷದಲ್ಲಿ ಕುಟುಂಬ ಸೇರಿದ! - Mahanayaka
12:03 AM Wednesday 22 - October 2025

ಮಿಸ್ಸಾಗಿ ಬಸ್ ಹತ್ತಿದ 5 ವರ್ಷದ ಬಾಲಕ: 40 ನಿಮಿಷದಲ್ಲಿ ಕುಟುಂಬ ಸೇರಿದ!

17/01/2025

ಚೆನ್ನೈನ ತಾಂಬರಂ ಪೂರ್ವ ರೈಲ್ವೆ ನಿಲ್ದಾಣದ ಬಳಿ ಅಲೆದಾಡುತ್ತಿದ್ದ ಐದು ವರ್ಷದ ಬಾಲಕನೋರ್ವ 40 ನಿಮಿಷಗಳಲ್ಲಿ ತನ್ನ ಕುಟುಂಬದೊಂದಿಗೆ ಮತ್ತೆ ಸೇರಿದ್ದಾನೆ.
ತಾಂಬರಂ ಪೂರ್ವ ರೈಲ್ವೆ ನಿಲ್ದಾಣದ ಬಸ್ ನಿಲ್ದಾಣದಲ್ಲಿ ಮಾರ್ಗ ಸಂಖ್ಯೆ 31 ಜಿ ಯಲ್ಲಿ ಮಗು ತಿಳಿಯದೆ ಎಂಟಿಸಿ ಬಸ್ ಹತ್ತಿದೆ. ಈ ಕುರಿತು ಬಸ್ ಚಾಲಕ ತಿರು ವೀರಮಣಿ ಕ್ರೋಮ್ ಪೇಟೆ -2 ಶಾಖಾ ವ್ಯವಸ್ಥಾಪಕರಿಗೆ ಮಾಹಿತಿ ನೀಡುವ ಮೂಲಕ ತ್ವರಿತವಾಗಿ ಕಾರ್ಯಾಚರಣೆ ನಡೆಸಿದ್ದಾರೆ.

ಈ ಮಧ್ಯೆ ತಾಂಬರಂ ರೈಲ್ವೆ ನಿಲ್ದಾಣದ ಬಳಿ ನಿಂತಿದ್ದ ಎಂಟಿಸಿ ಸಿಬ್ಬಂದಿ ಹುಡುಕಾಟವನ್ನು ಪ್ರಾರಂಭಿಸಿದರು. ಇದೇ ವೇಳೆ ಹುಡುಗನ ಅಜ್ಜಿಯನ್ನು ಸಂಪರ್ಕಿಸಿದ್ದಾರೆ. ಅವರು ಕೂಡಾ‌ ಮಗುವನ್ನು ಹುಡುಕುತ್ತಿದ್ದರು. ಕುಟುಂಬದಿಂದ ವಿವರಗಳನ್ನು ಸಂಗ್ರಹಿಸಿದ ನಂತರ, ಸಿಬ್ಬಂದಿ ಚಾಲಕನೊಂದಿಗೆ ಸಮನ್ವಯ ಸಾಧಿಸಿ ತಾಂಬರಂ ಕ್ಯಾಂಪ್ ರಸ್ತೆಯಲ್ಲಿ ಬಸ್ ನಿಲ್ಲಿಸಲು ಸೂಚನೆ ನೀಡಿದ್ದಾರೆ.

ಚಾಲಕ ವೀರಮಣಿ, ಕಂಡಕ್ಟರ್ ಸಿಂಗೈ ಭೂಪತಿ ಮತ್ತು ಅವರ ತ್ವರಿತ ನಿರ್ಧಾರ ಮತ್ತು ತಂಡದ ಕೆಲಸದಲ್ಲಿ ಭಾಗಿಯಾದವರನ್ನೂ ಚೆನ್ನೈ ಶ್ಲಾಘಿಸಿದೆ. ಸಾರ್ವಜನಿಕ ಸುರಕ್ಷತೆಗೆ ಎಂಟಿಸಿಯ ಬದ್ಧತೆಯನ್ನು ಪುನರುಚ್ಚರಿಸುತ್ತದೆ” ಎಂದು ಎಂಟಿಸಿ ಹೇಳಿದೆ.
ಮಗುವನ್ನು ಸೆಲೈಯೂರ್ ಪೊಲೀಸರ ಸಮ್ಮುಖದಲ್ಲಿ ಸುರಕ್ಷಿತವಾಗಿ ಹಸ್ತಾಂತರಿಸಲಾಯಿತು.

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ