ಗ್ಯಾರೇಜ್ ನಲ್ಲಿ ಚಕ್ರ ಬದಲಿಸಿ ಬಂದ ಟಿಪ್ಪರ್ ವೃದ್ಧನ ಜೀವವನ್ನೇ ತೆಗೆಯಿತು! - Mahanayaka
2:03 AM Wednesday 27 - August 2025

ಗ್ಯಾರೇಜ್ ನಲ್ಲಿ ಚಕ್ರ ಬದಲಿಸಿ ಬಂದ ಟಿಪ್ಪರ್ ವೃದ್ಧನ ಜೀವವನ್ನೇ ತೆಗೆಯಿತು!

tipper
14/12/2022


Provided by

ಟಿಪ್ಪರ್ ವೊಂದು ಡಿಕ್ಕಿ ಹೊಡೆದು‌ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೃದ್ಧರೋರ್ವರು‌ ಮೃತಪಟ್ಟ ದಾರುಣ ಘಟನೆ ಪೆರ್ಡೂರು ಮೇಲ್ಪೇಟೆಯ ಬಿಎಮ್ ಸ್ಕೂಲ್ ಎದುರು ಇಂದು ಬೆಳಿಗ್ಗೆ ನಡೆದಿದೆ.

ಮೃತರನ್ನು ಅಲಂಕಾರು ನಿವಾಸಿ 70ವರ್ಷದ ಮಂಜಯ್ಯ‌ ಶೆಟ್ಟಿ ಎಂದು ಗುರುತಿಸಲಾಗಿದೆ. ಪೆರ್ಡೂರಿನಿಂದ ಹಿರಿಯಡಕ ಕಡೆಗೆ ಚಲಿಸುತ್ತಿದ್ದ ಟಿಪ್ಪರ್ ವೊಂದು ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಂಜಯ್ಯ ಶೆಟ್ಟಿಗೆ ಡಿಕ್ಕಿ ಹೊಡೆದಿದ್ದು, ಇದರ ಪರಿಣಾಮ ರಸ್ತೆಗೆ ಬಿದ್ದ ಮಂಜಯ್ಯ ಶೆಟ್ಟಿ ಅವರ ತಲೆ ಮೇಲೆ ಟಿಪ್ಪರ್ ನ ಚಕ್ರ ಹರಿದಿದೆ. ಇದರಿಂದ ತಲೆ ಸಂಪೂರ್ಣ ಛಿದ್ರಗೊಂಡಿದ್ದು, ಸ್ಥಳದಲ್ಲೆ ಅವರು ಉಸಿರುಚೆಲ್ಲಿದ್ದಾರೆ.

ಟಿಪ್ಪರ್ ಚಾಲಕ ಪೆರ್ಡೂರಿನ ಗ್ಯಾರೇಜ್ ವೊಂದರಲ್ಲಿ ಚಕ್ರ ಬದಲಾಯಿಸಿಕೊಂಡು ಹಿರಿಯಡಕ ಕಡೆಗೆ ಸಾಗುತ್ತಿದ್ದನು. ಅಪಘಾತ ನಡೆದ ಬಳಿಕ ಚಾಲಕ ಸ್ಥಳದಲ್ಲಿ ಟಿಪ್ಪರ್ ನಿಲ್ಲಿಸದೆ ಪರಾರಿಯಾಗಿದ್ದಾನೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LwWxa0YtfZe3V04Rgx7ZIV

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ