ಶಾಂತಿನಿಕೇತನ ಫಲಕಗಳಲ್ಲಿ ರವೀಂದ್ರನಾಥ ಟ್ಯಾಗೋರ್ ಹೆಸರು ಸೇರಿಸಿ: ಇಲ್ಲದಿದ್ರೆ ಆಂದೋಲನ ನಡೆಯುತ್ತೆ ಎಂದ ಮಮತಾ ಬ್ಯಾನರ್ಜಿ - Mahanayaka
12:54 PM Saturday 23 - August 2025

ಶಾಂತಿನಿಕೇತನ ಫಲಕಗಳಲ್ಲಿ ರವೀಂದ್ರನಾಥ ಟ್ಯಾಗೋರ್ ಹೆಸರು ಸೇರಿಸಿ: ಇಲ್ಲದಿದ್ರೆ ಆಂದೋಲನ ನಡೆಯುತ್ತೆ ಎಂದ ಮಮತಾ ಬ್ಯಾನರ್ಜಿ

27/10/2023


Provided by

ಶಾಂತಿನಿಕೇತನದ ವಿಶ್ವ-ಭಾರತಿ ವಿಶ್ವವಿದ್ಯಾಲಯದಲ್ಲಿ ಯುನೆಸ್ಕೋ ‘ವಿಶ್ವ ಪರಂಪರೆಯ ತಾಣ’ ಪ್ರಶಸ್ತಿಯನ್ನು ನೀಡಿದ ಸ್ಮರಣಾರ್ಥ ಫಲಕಗಳಲ್ಲಿ ರವೀಂದ್ರನಾಥ ಟ್ಯಾಗೋರ್ ಅವರ ಹೆಸರನ್ನು ಬರೆಯದಿದ್ದಕ್ಕಾಗಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡು ಎಚ್ಚರಿಕೆ ನೀಡಿದರು. ಶುಕ್ರವಾರದೊಳಗೆ ಫಲಕಗಳನ್ನು ಬದಲಾಯಿಸದಿದ್ದರೆ ತಮ್ಮ ಪಕ್ಷದ ಕಾರ್ಯಕರ್ತರು ಆಂದೋಲನವನ್ನು ಪ್ರಾರಂಭಿಸುತ್ತಾರೆ ಎಂದು ಅವರು ಎಚ್ಚರಿಸಿದರು.

ಶಾಂತಿನಿಕೇತನಕ್ಕೆ ಯುನೆಸ್ಕೋ ಟ್ಯಾಗ್ ಸಿಕ್ಕಿದ್ದು ಠಾಕೂರರಿಗೆ ಮಾತ್ರ. ಆದರೆ ನೀವು ಅವರ ಹೆಸರನ್ನು ಫಲಕಗಳಿಂದ ತೆಗೆದುಹಾಕಿದ್ದೀರಿ. ದುರ್ಗಾ ಪೂಜಾ ಆಚರಣೆಯ ಕಾರಣ ನಾವು ಮೌನವಾಗಿದ್ದೆವು. ನಾಳೆ ಬೆಳಿಗ್ಗೆ 10 ಗಂಟೆಯೊಳಗೆ ನೀವು ಫಲಕಗಳನ್ನು ತೆಗೆದುಹಾಕಿ ನೊಬೆಲ್ ಪ್ರಶಸ್ತಿ ವಿಜೇತರ ಹೆಸರನ್ನು ಹಾಕದಿದ್ದರೆ, ನಮ್ಮ ಜನರು ಅವರ ಫೋಟೋಗಳನ್ನು ಎದೆಗೆ ಹಿಡಿದುಕೊಂಡು ಪ್ರದರ್ಶನವನ್ನು ಪ್ರಾರಂಭಿಸುತ್ತಾರೆ” ಎಂದು ಬ್ಯಾನರ್ಜಿ ಪತ್ರಿಕಾಗೋಷ್ಠಿಯಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ವಿಶ್ವವಿದ್ಯಾನಿಲಯದ ಕುಲಪತಿಯೂ ಆಗಿರುವ ಪ್ರಧಾನಿ ನರೇಂದ್ರ ಮೋದಿ ಮತ್ತು ಉಪಕುಲಪತಿ ಬಿದ್ಯುತ್ ಚಕ್ರವರ್ತಿ ಅವರ ಹೆಸರುಗಳನ್ನು ಹೊಂದಿರುವ ಅಮೃತಶಿಲೆಯ ಫಲಕಗಳನ್ನು ವಿಶ್ವವಿದ್ಯಾಲಯದ ಅಧಿಕಾರಿಗಳು ಹಾಕಿದ ನಂತರ ಭಾರಿ ವಿವಾದಕ್ಕೆ ಕಾರಣವಾಗಿತ್ತು.

ಈ ಕುರಿತು ಮಾತನಾಡಿದ ವಿಶ್ವ ಭಾರತಿ ವಕ್ತಾರ ಮಹುವಾ ಬಂಡೋಪಾಧ್ಯಾಯ ಮಾತನಾಡಿ, “ಇದು ಪಾರಂಪರಿಕ ತಾಣವನ್ನು ಗುರುತಿಸಲು ನಿರ್ಮಿಸಲಾದ ಸಂಪೂರ್ಣವಾಗಿ ತಾತ್ಕಾಲಿಕ ರಚನೆಯಾಗಿದೆ…” ಎಂದಿದ್ದಾರೆ. ಆಂದೋಲನವನ್ನು ಪ್ರಾರಂಭಿಸುವ ಮುಖ್ಯಮಂತ್ರಿ ಬ್ಯಾನರ್ಜಿ ಅವರ ಬೆದರಿಕೆಯ ಬಗ್ಗೆ ಪ್ರತಿಕ್ರಿಯಿಸಿದ ಬಂಡೋಪಾಧ್ಯಾಯ, “ಸಿಎಂ ಹೇಳಿಕೆಗಳ ಬಗ್ಗೆ ವಿಶ್ವ ಭಾರತಿ ಏನನ್ನೂ ಹೇಳುವುದಿಲ್ಲ” ಎಂದಿದ್ದಾರೆ.

ಇತ್ತೀಚಿನ ಸುದ್ದಿ