ವೈದ್ಯರ ಮೂರು ಬೇಡಿಕೆಗೆ ಮಮತಾ ಒಪ್ಪಿಗೆ: ಇಬ್ಬರು ಆರೋಗ್ಯಾಧಿಕಾರಿಗಳ ವಜಾ - Mahanayaka
11:29 PM Thursday 21 - August 2025

ವೈದ್ಯರ ಮೂರು ಬೇಡಿಕೆಗೆ ಮಮತಾ ಒಪ್ಪಿಗೆ: ಇಬ್ಬರು ಆರೋಗ್ಯಾಧಿಕಾರಿಗಳ ವಜಾ

17/09/2024


Provided by

ಆರ್ಜಿ ಕಾರ್ ಘಟನೆಯ ಬಿಕ್ಕಟ್ಟನ್ನು ಪರಿಹರಿಸಲು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸೋಮವಾರ ಪ್ರತಿಭಟನಾನಿರತ ವೈದ್ಯರಿಗೆ ಐದನೇ ಮತ್ತು ಅಂತಿಮ ಆಹ್ವಾನ ನೀಡಿದ ನಂತರ, ವೈದ್ಯರು ಅಂತಿಮವಾಗಿ ಟಿಎಂಸಿ ನಾಯಕಿಯೊಂದಿಗೆ ಅವರ ಕಾಲಿಘಾಟ್ ನಿವಾಸದಲ್ಲಿ ಮಾತುಕತೆ ನಡೆಸಿದರು. ಸಭೆಯ ನಂತರ, ಪಶ್ಚಿಮ ಬಂಗಾಳ ಸಿಎಂ, ಪ್ರತಿಭಟನಾಕಾರರ ಐದು ಬೇಡಿಕೆಗಳಲ್ಲಿ ಮೂರನ್ನು ಒಪ್ಪಿಕೊಂಡರು.

“ನಾವು ವೈದ್ಯರ ಬಹುತೇಕ ಎಲ್ಲಾ ಬೇಡಿಕೆಗಳನ್ನು ಒಪ್ಪಿಕೊಂಡಿದ್ದೇವೆ. ಸಾಮಾನ್ಯ ಜನರ ದುಃಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ನಾವು ನಮ್ಮಿಂದ ಸಾಧ್ಯವಾದಷ್ಟು ಉತ್ತಮವಾದದ್ದನ್ನು ಮಾಡಿದ್ದೇವೆ. ನಾನು ಈಗ ವೈದ್ಯರಿಗೆ ಕೆಲಸಕ್ಕೆ ಮರಳುವಂತೆ ಮನವಿ ಮಾಡುತ್ತೇನೆ” ಎಂದು ಬ್ಯಾನರ್ಜಿ ಹೇಳಿದರು.

ಆರೋಗ್ಯ ಇಲಾಖೆಯ ಇಬ್ಬರು ಹಿರಿಯ ಅಧಿಕಾರಿಗಳು ಮತ್ತು ಕೋಲ್ಕತಾ ಪೊಲೀಸ್ ಆಯುಕ್ತರನ್ನು ಸರ್ಕಾರ ವಜಾಗೊಳಿಸಿದೆ. ಅಲ್ಲದೇ ಇತ್ತೀಚೆಗೆ ತರಬೇತಿ ವೈದ್ಯರ ಅತ್ಯಾಚಾರ ಮತ್ತು ಕೊಲೆ ನಡೆದ ಸ್ಥಳವಾದ ಆರ್ಜಿ ಕಾರ್ ವೈದ್ಯಕೀಯ ಕಾಲೇಜು ಸೇರಿದಂತೆ ನಗರದ ಉತ್ತರ ವಲಯದ ಪೊಲೀಸ್ ಮುಖ್ಯಸ್ಥರನ್ನು ಸಹ ಕರ್ತವ್ಯದಿಂದ ಮುಕ್ತಗೊಳಿಸಲಾಗುವುದು ಎನ್ನಲಾಗಿದೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ