ಸರ್ಕಾರಿ ಶಾಲೆಯನ್ನು ಮಾದರಿ ಶಾಲೆಯಾಗಿ ಪರಿವರ್ತಿಸಿದ ಉದ್ಯಮಿ: ನಿಸ್ವಾರ್ಥ ಕೊಡುಗೆಗೆ ಭಾರೀ ಮೆಚ್ಚುಗೆ - Mahanayaka

ಸರ್ಕಾರಿ ಶಾಲೆಯನ್ನು ಮಾದರಿ ಶಾಲೆಯಾಗಿ ಪರಿವರ್ತಿಸಿದ ಉದ್ಯಮಿ: ನಿಸ್ವಾರ್ಥ ಕೊಡುಗೆಗೆ ಭಾರೀ ಮೆಚ್ಚುಗೆ

moodigere
24/02/2025

ಮೂಡಿಗೆರೆ: ಸಮೀಪದ ಮುತ್ತಿಗೆರೆಪುರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಈಗ ಮಾದರಿ ಶಾಲೆಯಾಗಿ ಪರಿವರ್ತನೆಗೊಂಡಿದೆ. ಇದರ ಹಿಂದಿನ ಕಾರಣ ಮುದ್ರೆಮನೆ ಕಾಫಿ ಕ್ಯೂರಿಂಗ್ ಮಾಲೀಕರಾದ ಬಿ.ಎಸ್. ಸಂತೋಷ್ ಅವರ ಜನ್ಮಭೂಮಿಗೆ ನೀಡಿದ ನಿಸ್ವಾರ್ಥ ಕೊಡುಗೆ.

ಎರಡು ಕೋಟಿ ರೂಪಾಯಿಗೂ ಅಧಿಕ ವ್ಯಯ:

ಸಂತೋಷ್ ಅವರು ಸುಮಾರು 2 ಕೋಟಿ ರೂಪಾಯಿಗೂ ಹೆಚ್ಚು ವೆಚ್ಚವನ್ನು ವೆಚ್ಚಮಾಡಿ, 8 ಹೊಸ ಕೊಠಡಿಗಳು, ಪೂರಕ ಮೂಲಭೂತ ಸೌಲಭ್ಯಗಳು ಸೇರಿದಂತೆ ಶಾಲೆಯನ್ನು ಸಂಪೂರ್ಣ ಪುನರ್ ನಿರ್ಮಿಸಿದ್ದಾರೆ.

ಅಭಿವೃದ್ಧಿಯ ಜೊತೆಗೆ, ತಮ್ಮ ಮಗನನ್ನೂ ಇದೇ ಸರಕಾರಿ ಶಾಲೆಯಲ್ಲಿ ಪ್ರವೇಶ ಮಾಡಿಸಿದ್ದಾರೆ. ತಮ್ಮ ಕುಟುಂಬದ ಬಾಳಿನಲ್ಲಿ ನಂಬಿಕೆ ಮತ್ತು ಸಮರ್ಪಣೆಯೊಂದಿಗೆ ಶಾಲೆಯ ಗುಣಮಟ್ಟವನ್ನು ಒಪ್ಪಿಕೊಂಡಿದ್ದಾರೆ.


Provided by
Provided by

ಖಾಸಗಿ ಶಾಲೆಯ ಮಟ್ಟದ ಶಿಕ್ಷಣ:

363 ವಿದ್ಯಾರ್ಥಿಗಳು ಈ ಶಾಲೆಯಲ್ಲಿ ಶಿಕ್ಷಣ ಪಡೆಯುತ್ತಿದ್ದು, ಖಾಸಗಿ ಶಾಲೆಗೂ ಸಮಪ್ರಮಾಣದ ಸೌಲಭ್ಯಗಳನ್ನು ಇಲ್ಲಿ ಒದಗಿಸಲಾಗಿದೆ. ಈ ಮೂಲಕ ಸರಕಾರಿ ಶಾಲೆಗಳ ಮೇಲಿನ ಜನರ ನಂಬಿಕೆಯನ್ನು ಮತ್ತೆ ನೆಮ್ಮದಿಯಿಂದ ತುಂಬಲು ಸಂತೋಷ್ ಅವರ ಪ್ರಯತ್ನ ಯಶಸ್ವಿಯಾಗಿದೆ.

ಬಿ.ಎಸ್. ಸಂತೋಷ್ ಅವರ ಈ ಕಾರ್ಯ ಸಮಾಜಕ್ಕೆ ಮಾದರಿಯಾಗಿದೆ. ದೇಶದ ಅನೇಕ ಗ್ರಾಮೀಣ ಪ್ರದೇಶಗಳಲ್ಲಿ ಈ ಮಾದರಿ ಅನುಸರಿಸಲು ಲೈಟ್‌ ಹೌಸ್‌ ಆಗುವ ಸಾಧ್ಯತೆ ಇದೆ. ಹೀಗೆ ನಿಸ್ವಾರ್ಥ ಸೇವೆಯಿಂದ ಸ್ವಂತ ಗ್ರಾಮದ ಅಭಿವೃದ್ಧಿಗೆ ತೊಡಗಿರುವ ಮುದ್ರೆಮನೆ ಸಂತೋಷ್ ಅವರಿಗೆ  ಗ್ರಾಮಸ್ಥರು ಹೃದಯಪೂರ್ವಕ ಅಭಿನಂದನೆ ಸಲ್ಲಿಸಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/BR3b3qhWZWaCzpD1m6N5uu

ಇತ್ತೀಚಿನ ಸುದ್ದಿ