“ಪ್ರೊ.ಬಿ.ಕೃಷ್ಣಪ್ಪ ಅವರು ಹಚ್ಚಿದ ಹೋರಾಟದ ಹಣತೆ ಶಾಶ್ವತ”: ಪ್ರೊ.ಬಿ.ಕೃಷ್ಣಪ್ಪರವರ 87ನೇ ಜನ್ಮದಿನಾಚರಣೆ - Mahanayaka

“ಪ್ರೊ.ಬಿ.ಕೃಷ್ಣಪ್ಪ ಅವರು ಹಚ್ಚಿದ ಹೋರಾಟದ ಹಣತೆ ಶಾಶ್ವತ”: ಪ್ರೊ.ಬಿ.ಕೃಷ್ಣಪ್ಪರವರ 87ನೇ ಜನ್ಮದಿನಾಚರಣೆ

dss
23/06/2025

ಮಂಗಳೂರು: ಕನಾ೯ಟಕ ದಲಿತ ಸಂಘರ್ಷ ಸಮಿತಿ (ರಿ)ಸ್ವಾಭಿಮಾನಿ ಪ್ರೊ. ಕೃಷ್ಣಪ್ಪ ಬಣ, ಗ್ರಾಮ ಶಾಖೆ ಕೆಂಜಾರು. ಇದರ ವತಿಯಿಂದ ಭಾನುವಾರ  ಕನಾ೯ಟಕ ದಲಿತ ಸಂಘಷ೯ ಸಮಿತಿಯ ಸಂಸ್ಥಾಪಕ ಪ್ರೊ.ಬಿ.ಕೃಷ್ಣಪ್ಪ ರವರ 87ನೇ ಜನ್ಮದಿನಾಚರಣೆ, ಬಿಲ್ಲವ ಸಮಾಜ ಸೇವಾ ಸಂಘ ಕೆಂಜಾರು—ಪೇಜಾವರ–ತೋಕೂರು ಇದರ ಸಭಾಂಗಣದಲ್ಲಿ ಆಚರಿಸಲಾಯಿತು.

ಕಾಯ೯ಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಂಗಳೂರು ತಾಲೂಕು ಸಮಿತಿಯ ಸಂಚಾಲಕರಾದ ರಾಘವೇಂದ್ರ  “ಪ್ರೊ. ಬಿ.ಕೃಷ್ಣಪ್ಪರವರ ಹುಟ್ಟು ದಲಿತರ ಸ್ವಾಭಿಮಾನದ ಬದುಕಿನ ಆಶಾಕಿರಣವಾಗಿದೆ. ಕನಾ೯ಟಕದಲ್ಲಿ ಪ್ರೊಫೆಸರ್  ಬಿ.ಕೆಯವರ ನೆನಪು ಶಾಶ್ವತ.  ಅವರು ಅಂದು ಗುಡಿಸಲಲ್ಲಿ ಹಚ್ಚಿದ ಹೋರಾಟದ ಆ ಹಣತೆ ಇಂದಿಗೂ ಆರದಂತೆ ನೋಡಿಕೊಂಡಿದ್ದೇವೆ. ಮುಂದೆಯೂ ನೋಡಿಕೊಳ್ಳುವ ಅನಿವಾರ್ಯತೆ ಇದೆ. ದಲಿತರ ಬದುಕಿನ ಬದಲಾವಣೆಗೆ ಶ್ರಮಿಸಿದ ಹಲವಾರು ಹೋರಾಟಗಾರರಿದ್ದಾರೆ . ಅವರುಗಳ ಬಗ್ಗೆ ನಾವುಗಳು ತಿಳಿದು ಕೊಳ್ಳಬೇಕು, ನಮ್ಮ ಮಕ್ಕಳಿಗೂ ತಿಳಿಸಬೇಕು” ಎಂದರು.

ದ.ಕ ಜಿಲ್ಲಾ ಸಂಚಾಲಕರಾದ ಸದಾಶಿವ ಪಡುಬಿದ್ರಿ ಮಾತನಾಡಿ “ವಿಶ್ವ ಮಾನವ ಅಂಬೇಡ್ಕರ್, ನಮ್ಮ ಪಾಲಿನ ದೇವರು ಅವರನ್ನು ಪರಿಚಯಿಸಿದವರು ಪ್ರೊಫೆಸರ್. ಬಿ.ಕೃಷ್ಣಪ್ಪರವರು. ಬಿ. ಕೆ. ಯವರು ಹಳ್ಳಿ ಹಳ್ಳಿಗೂ ಪರಿಚಿತರು ಅವರ ಹೋರಾಟದ ಹಾದಿ ನಮಗೆ ಸ್ಪೂರ್ತಿ ಅವರನ್ನು ಮರೆತರೆ ನಾವು ಮುಂದೆ  ಗುಲಾಮರಂತೆ ಬದುಕಬೇಕಾದ ಸ್ಥಿತಿ ಬಂದು ಒದಗಬಹುದು” ಎಂದರು.

<

ಜಿಲ್ಲಾ ಸಂಘಟನಾ ಸಂಚಾಲಕರಾದ ರಘು ಕೆ. ಎಕ್ಕಾರು ಮಾತನಾಡಿ “ದಲಿತ ಸಂಘಟನೆ ಎಂದರೆ ಕೋಮು ಸಂಘಟನೆ ಅಲ್ಲ. ದಲಿತ ಸಂಘಟನೆ ಇರುವುದಕ್ಕೆ ನಾವು ಧೈರ್ಯದಿಂದ ಬದುಕು ಕಟ್ಟಿಕೊಂಡಿದ್ದೇವೆ. ಅದಕ್ಕೆ ಕಾರಣ ಪ್ರೊಫೆಸರ್ ಬಿ.ಕೃಷ್ಣಪ್ಪರಂತಹ ಸಾಮಾಜಿಕ ಚಿಂತನಾಕಾರರ ಪರಿಶ್ರಮದಿಂದ ಮಾತ್ರ ಸಾಧ್ಯವಾಗಿದೆ. ಸಂಘಟನೆಯನ್ನು ಮೈಗೂಡಿಸಿಕೊಂಡು ಬದುಕುತ್ತಿರುವ ನಾವೆಲ್ಲಾ ಸ್ವಲ್ಪ ಮಟ್ಟಿಗೆ ನೆಮ್ಮದಿಯ ಜೀವನ ನಡೆಸುತ್ತಿದ್ದೇವೆ.  ಸಂಘಟನೆಯಿಂದ ದೂರ ಇರುವ ನಮ್ಮ ಸಮುದಾಯದ ಕೆಲವು ಯುವಕರು  ಕೋಮುವಾದಿ ಸಂಘಟನೆಗಳತ್ತ ಆಕರ್ಷತರಾಗಿ ಸಮಾಜದ ಸಾಮರಸ್ಯ ಕೆಡಿಸುವುದರ ಜೊತೆಗೆ ತಮ್ಮ ಉಜ್ವಲ ಭವಿಷ್ಯವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ಮಕ್ಕಳಿಗೆ ಸಂಘಟನೆ ಹಾಗೂ ಸಾಮಾಜಿಕ ಪರಿವರ್ತನಕಾರರ ವಿಚಾರಗಳನ್ನು ತಿಳಿಸಿ,  ಹೆಚ್ಚಿನ ವಿದ್ಯಾಬ್ಯಾಸವನ್ನು ನೀಡಿ ವಿಚಾರವಂತರಾಗಿ ಮಾಡಿ ಸಮಾಜದಲ್ಲಿ ಒಳ್ಳೆಯ ಪ್ರಜೆಗಳಾಗುವ ಸಂಸ್ಕಾರವನ್ನು ಕಲಿಸಿ ಧಮ೯ಧಮ೯ಗಳ ನಡುವೆ ವಿಷ ಬಿತ್ತುವವರನ್ನು ಮೆಟ್ಟಿನಿಲ್ಲುವವರನ್ನಾಗಿ ಬೆಳೆಸುವ ಕಾರ್ಯವನ್ನು ನಮ್ಮ ಸಂಘಟನೆಯ ಪ್ರತಿಯೊಬ್ಬರೂ ಮಾಡಬೇಕು “ಎಂದರು.

ಕಾಯ೯ಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಲಿಂಗಪ್ಪ ಕುಂದರ್ ಮಾತನಾಡಿ, ಕೃಪ್ಣಪ್ಪರವರು ಹುಟ್ಟು ಹಾಕಿದ ಸಂಘಟನೆಯಿಂದ ನಮ್ಮ ಗ್ರಾಮದ ದಲಿತರ ಬದುಕು ಬದಲಾವಣೆಯಾಗಿದೆ ಎಂದರು. ನಮ್ಮ ಸಮಸ್ಯೆಗಳಿಗೆ ಯಾವ ಜನಪ್ರತಿನಿಧಿಗಳಿಂದ ನೇರ ಬದಲಾವಣೆಯಾಗಿಲ್ಲ. ಅವರಿಗೆ ನಮ್ಮ ಜಾತಿ ಜನಾಂಗವನ್ನು ಉದ್ದಾರ ಮಾಡುವ ಮನಸ್ಥಿತಿಯೂ ಇಲ್ಲ, ದಲಿತ ಕುಟುಂಬಗಳು ಬದಲಾವಣೆ ಕಂಡಿವೆ ಅಂದರೆ ಅದು ಪ್ರೊ.ಬಿ.ಕೆ.ಹಚ್ಚಿದ ಹೋರಾಟದ ಹಣತೆಯಿಂದ ಸಾಧ್ಯವಾಗಿದೆ. ಇನ್ನೂ ಹಲವಾರು ಸಮಸ್ಯೆಗಳಿದೆ ಅದನ್ನು ಕೂಡ ಸಂಘಟನೆಯಿಂದ ಬಗೆಹರಿಸಿಕೊಳ್ಳಲು ಪ್ರಯತ್ನ ಮಾಡಬೇಕಾಗಿದೆ ಎಂದರು.

ಕಾರ್ಯಕ್ರಮದ ವೇದಿಕೆಯಲ್ಲಿ ಜಿಲ್ಲಾ ಮಹಿಳಾ ಸಂಚಾಲಕಿ ಸರೋಜಿನಿ ಬಂಟ್ವಾಳ, ಜಿಲ್ಲಾ ದಲಿತ ನೌಕರರ ಒಕ್ಕೂಟದ ಉಸ್ತುವಾರಿ ಹೆಚ್.ಡಿ.ಲೋಹಿತ್, ದಲಿತ ಕಲಾ ಮಂಡಳಿ ತಾಲೂಕು ಸಂಚಾಲಕರಾದ ಗಂಗಾಧರ್ ಜೋಕಟ್ಟೆ, ತಾಲೂಕು ಸಂಘಟನಾ ಸಂಚಾಲಕರಾದ ರುಕ್ಕಯ್ಯ ಅಮೀನ್ ಕರಂಬಾರು, ಎಕ್ಕಾರು ಗ್ರಾಮ ಸಂಚಾಲಕರಾದ ಗಣೇಶ್ ಕೆಂಚಗುಡ್ಡೆ, ಗ್ರಾಮ ಪಂಚಾಯತ್ ಸದಸ್ಯರಾದ ಚೆನ್ನಪ್ಪ ಸಾಲ್ಯಾನ್ ಮುಂತಾದವರು ಉಪಸ್ಥಿತರಿದ್ದರು.

ಕಾರ್ಯಕ್ರಮದ ವೇದಿಕೆಯಲ್ಲಿ ಶಿಕ್ಷಣ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಅಪೂರ್ವ ಸಾಧನೆಗೈದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಕೃಷ್ಣ  ಕೆ. ಎಕ್ಕಾರು ಕಾಯ೯ಕ್ರಮ ನಿರ್ವಹಿಸಿ ಜಾಗೃತಿಯವರು ಧನ್ಯವಾದ ಅರ್ಪಿಸಿದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ