ನಡುಬಗ್ಗಿಸಿ ಕನ್ನಡಿಗರ ಕ್ಷಮೆ ಕೇಳಿದ ದುರಾಹಂಕಾರಿ ಗಾಯಕ ಸೋನು ನಿಗಮ್

ಕನ್ನಡ ಹಾಡು ಹಾಡಿ ಎಂದಿದ್ದಕ್ಕೆ ಪಿತ್ತ ನೆತ್ತಿಗೇರಿಸಿಕೊಂಡು ಕನ್ನಡ ಅಭಿಮಾನವನ್ನು ದೂಷಿಸಿ, ಪಹಲ್ಗಾಮ್ ದಾಳಿ ನಡೆಸಿದ ಉಗ್ರರಿಗೆ ಹೋಲಿಸಿದ್ದ, ದುರಾಹಂಕಾರಿ ಗಾಯಕ ಸೋನು ನಿಗಮ್, ಕನ್ನಡಿಗರ ರೌದ್ರಾವತಾರಕ್ಕೆ ಬೆಚ್ಚಿಬಿದ್ದು ಕೊನೆಗೂ ನಡುಬಗ್ಗಿಸಿ ಕ್ಷಮೆಯಾಚಿಸಿದ್ದಾರೆ.
ಕಳೆದ ಹಲವಾರು ವರ್ಷಗಳಿಂದಲೂ ಕನ್ನಡ ಹಾಡುಗಳೇ ಈತನಿಗೆ ಜೀವನಾಧಾರವಾಗಿತ್ತು. ಆದರೆ ಕನ್ನಡ ಹಾಡು ಹಾಡಿ ಅಂತ ಕನ್ನಡಿಗರು ಕೇಳುವಂತಿಲ್ಲ, ಉಗ್ರರ ದಾಳಿ, ರೌಡಿಗಳು ಎಂಬಂತೆ ಕನ್ನಡಿಗರನ್ನು ಬಿಂಬಿಸುತ್ತಿದ್ದಾನೆ. ಈತನ ದುರಾಹಂಕಾರಕ್ಕೆ ಫಿಲ್ಮ್ ಚೇಂಬರ್ ಬ್ಯಾನ್ ಮಾಡುವ ನಿರ್ಧಾರ ಕೈಗೊಂಡಿತ್ತು. ಆದರೂ ತನ್ನ ತಿಳಿಗೇಡಿ ಕೃತ್ಯವನ್ನು ಸಮರ್ಥಿಸಿಕೊಂಡು ಮತ್ತೆ ಆತ ಹಲವು ಪೋಸ್ಟ್ ಗಳನ್ನು ಹಾಕಿದ್ದ.
ಕನ್ನಡಿಗರ ದಿಟ್ಟ ನಿರ್ಧಾರ ಬದಲಾಗಲ್ಲ ಎನ್ನುವುದು ಯಾವಾಗ ತಿಳಿಯಿತೋ, ಸೋನು ನಿಗಮ್ ನಡುಬಗ್ಗಿಸಿ ಕ್ಷಮೆ ಕೇಳಿದ್ದಾನೆ. ಕ್ಷಮಿಸಿ ಕರ್ನಾಟಕ, ನನ್ನ ಪ್ರತಿಷ್ಠೆಗಿಂತ ನಿಮ್ಮ ಪ್ರೀತಿ ದೊಡ್ಡದು.. ನಿಮ್ಮನ್ನ ಯಾವಾಗಲೂ ಪ್ರೀತಿಸುತ್ತೇನೆ ಅಂತ ಕ್ಷಮೆ ಯಾಚಿಸಿದ್ದಾನೆ.
ಕನ್ನಡದಲ್ಲಿ ಸಾಕಷ್ಟು ಪ್ರತಿಭೆಗಳಿದ್ದರೂ ಕನ್ನಡ ಸಿನಿಮಾ ನಿರ್ಮಾಪಕರು ತಮ್ಮ ಸಿನಿಮಾದಲ್ಲಿ ಹಿಂದಿವಾಲಾಗಳ ಹಾಡು ಇರಬೇಕು. ಅದೊಂದು ಪ್ರತಿಷ್ಠೆ ಎಂಬಂತೆ ನಡೆದುಕೊಂಡು ಬಂದಿದ್ದಾರೆ. ಕನ್ನಡಿಗರ ಹಣದಲ್ಲಿ ಹಾಡು ಹಾಡಿ, ಕನ್ನಡದ ಬಗ್ಗೆ ಮಾತನಾಡಬಾರದು ಎಂದು ಕನ್ನಡ ಬಗ್ಗೆ ಸ್ವಲ್ಪವೂ ಗೌರವವಿಲ್ಲದವರನ್ನು ಕನ್ನಡಿಗರು ಕ್ಷಮಿಸಲು ಸಾಧ್ಯವೇ? ಎನ್ನುವ ಪ್ರಶ್ನೆ ಕೇಳಿ ಬಂದಿದೆ.
ಮಾತಿನ ಭರದಲ್ಲಿ ಮಾತನಾಡಿದೆ ಕ್ಷಮೆ ಇರಲಿ ಎಂಬ ಸಣ್ಣ ವಾಕ್ಯ ಹೇಳಲು ಸೋನು ನಿಗಮ್ ನ ಇಗೋ ಬಿಡಲಿಲ್ಲ, ಕನ್ನಡಿಗರ ಸ್ವಾಭಿಮಾನದ ಮುಂದೆ ಯಾವುದೂ ಇಲ್ಲ ಎನ್ನುವುದನ್ನು ಆತನಿಗೆ ಸಾಬೀತು ಪಡಿಸಿದ ತಕ್ಷಣವೇ ನಡುಬಗ್ಗಿಸಿ ಕ್ಷಮೆಯಾಚಿಸಿದ್ದಾನೆ. ಇನ್ನಾದರೂ ಕನ್ನಡ ಸಿನಿಮಾ ನಿರ್ಮಾಪಕರು ಹಿಂದಿವಾಲಗಳ ಬಾಲ ಹಿಡಿಯದೇ ಕನ್ನಡಿಗರ ಪ್ರತಿಭೆಗಳಿಗೆ ಅವಕಾಶ ಕೊಡಲಿ ಎನ್ನುವುದೇ ಕನ್ನಡಿಗರ ಆಶಯ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: