3 ವರ್ಷಗಳ ಹಿಂದೆ ಮಾಡಿದ್ದ ಚಿಕ್ಕಪ್ಪನ ಕೊಲೆ: ಕೃತ್ಯ ಯಾರಿಗೂ ಗೊತ್ತಾಗಲ್ಲ ಎಂದು ಭಾರತಕ್ಕೆ ಬಂದ ಬಾಂಗ್ಲಾದೇಶದ ವ್ಯಕ್ತಿಯ ಬಂಧನ - Mahanayaka
8:47 AM Saturday 18 - October 2025

3 ವರ್ಷಗಳ ಹಿಂದೆ ಮಾಡಿದ್ದ ಚಿಕ್ಕಪ್ಪನ ಕೊಲೆ: ಕೃತ್ಯ ಯಾರಿಗೂ ಗೊತ್ತಾಗಲ್ಲ ಎಂದು ಭಾರತಕ್ಕೆ ಬಂದ ಬಾಂಗ್ಲಾದೇಶದ ವ್ಯಕ್ತಿಯ ಬಂಧನ

26/09/2024

ಸ್ವಂತ ಚಿಕ್ಕಪ್ಪನನ್ನೇ ಹತ್ಯೆ ಮಾಡಿ ಮೂರು ವರ್ಷಗಳ ನಂತರ ಭಾರತಕ್ಕೆ ಪ್ರವೇಶಿಸಿದ ಬಾಂಗ್ಲಾದೇಶದ ಪ್ರಜೆಯನ್ನು ಅಕ್ರಮ ವಲಸಿಗರ ಮೇಲಿನ ಕಠಿಣ ಕಾನೂನಿನಡಿಯಲ್ಲಿ ತಮಿಳುನಾಡಿನ ತಿರುಪ್ಪೂರಿನಲ್ಲಿ ಬಂಧಿಸಲಾಗಿದೆ.


Provided by

ಈ ಹಿಂದೆ ಬಂಧಿಸಲಾದ ಆರು ಜನರ ಸುಳಿವಿನ ಮೇರೆಗೆ ವಂಗಮೇಡು ಪ್ರದೇಶದಲ್ಲಿ ಅಕ್ರಮವಾಗಿ ವಾಸಿಸುತ್ತಿರುವ ಬಾಂಗ್ಲಾದೇಶದ ನಾಗರಿಕರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾಗ 29 ವರ್ಷದ ಆರೋಪಿ ತನ್ವೀರ್ ಅಹ್ಮದ್ ನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.

ವಿಚಾರಣೆಯ ಸಮಯದಲ್ಲಿ, ಆತನಿಗೆ ಸ್ಪಷ್ಟ ಉತ್ತರಗಳನ್ನು ನೀಡಲು ಸಾಧ್ಯವಾಗಲಿಲ್ಲ. ಇದು ಅನುಮಾನಕ್ಕೆ ಕಾರಣವಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಂತರ ಹೆಚ್ಚಿನ ವಿಚಾರಣೆಗಾಗಿ ಆತನನ್ನು ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು. ಅಲ್ಲಿ ತನ್ವೀರ್ ಸ್ಥಳೀಯ ವಿಳಾಸದೊಂದಿಗೆ ಆಧಾರ್ ಕಾರ್ಡ್ ಹೊಂದಿದ್ದಾನೆ ಎಂದು ಅಧಿಕಾರಿಗಳು ಕಂಡುಕೊಂಡರು.

ತಾನು ಬಾಂಗ್ಲಾದೇಶದ ಪ್ರಜೆಯಾಗಿದ್ದು, ಮೂರು ವರ್ಷಗಳ ಹಿಂದೆ ಬಾಂಗ್ಲಾದೇಶದಲ್ಲಿ ತನ್ನ ಚಿಕ್ಕಪ್ಪನ ಹತ್ಯೆಯಲ್ಲಿ ಭಾಗಿಯಾದ ನಂತರ ತನ್ನ ಪತ್ನಿ ಸೊಹಾಸಿಮ್ ಳೊಂದಿಗೆ ಭಾರತಕ್ಕೆ ಪ್ರವೇಶಿಸಿದ್ದೆ ಎಂದು ತನ್ವೀರ್ ಬಹಿರಂಗಪಡಿಸಿದ್ದಾನೆ. ಈ ದಂಪತಿ ನೆರೆಯ ಈರೋಡ್ ಜಿಲ್ಲೆಯಲ್ಲಿ ವಾಸಿಸುತ್ತಿದ್ದರು.

ಏಳು ತಿಂಗಳ ಹಿಂದೆ, ತನ್ವೀರ್ ತನ್ನ ಸ್ನೇಹಿತ ಮಮ್ಮುಲ್ ನ ಸಹಾಯದಿಂದ ವಂಗಮೇಡಿಗೆ ಸ್ಥಳಾಂತರಗೊಂಡಿದ್ದ.
ತನ್ವೀರ್ ಅವರ ತಪ್ಪೊಪ್ಪಿಗೆಯ ಆಧಾರದ ಮೇಲೆ ಪೊಲೀಸರು ಅವರ ಪತ್ನಿ, ಅವರ ಸ್ನೇಹಿತ ಮತ್ತು ಸ್ಥಳೀಯ ನಿವಾಸಿ ಮಾರಿಮುತ್ತು ಅವರನ್ನು ಬಂಧಿಸಿದ್ದಾರೆ. ಈ ಮೂವರಿಗೆ ಭಾರತೀಯ ವಿಳಾಸದೊಂದಿಗೆ ಆಧಾರ್ ಕಾರ್ಡ್ ಗಳನ್ನು ನೀಡಲು 6,000 ರೂಪಾಯಿಯನ್ನು ಸ್ನೇಹಿತ ಪಡೆದುಕೊಂಡಿದ್ದ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ