ರಾಜಭವನದಲ್ಲಿ ಜೀವಂತ ಇರುವಾಗಲೇ ತಮ್ಮದೇ ಪ್ರತಿಮೆ ಅನಾವರಣಗೊಳಿಸಿದ ಬಂಗಾಳ ರಾಜ್ಯಪಾಲರು: ವಿವಾದ ಸೃಷ್ಟಿ - Mahanayaka

ರಾಜಭವನದಲ್ಲಿ ಜೀವಂತ ಇರುವಾಗಲೇ ತಮ್ಮದೇ ಪ್ರತಿಮೆ ಅನಾವರಣಗೊಳಿಸಿದ ಬಂಗಾಳ ರಾಜ್ಯಪಾಲರು: ವಿವಾದ ಸೃಷ್ಟಿ

24/11/2024


Provided by

ಪಶ್ಚಿಮ ಬಂಗಾಳದ ರಾಜ್ಯಪಾಲ ಸಿ.ವಿ.ಆನಂದ ಬೋಸ್ ಅವರು ಶನಿವಾರ ರಾಜಭವನದಲ್ಲಿ ತಮ್ಮದೇ ಪ್ರತಿಮೆಯನ್ನು ಅನಾವರಣಗೊಳಿಸಿದರು. ಈ ಕ್ರಮವು ದೊಡ್ಡ ರಾಜಕೀಯ ವಿವಾದವನ್ನು ಹುಟ್ಟುಹಾಕಿದೆ. ವಿರೋಧ ಪಕ್ಷಗಳು ಇದನ್ನು ನಾಚಿಕೆಗೇಡಿನ ವಿಷಯ ಎಂದು ಟೀಕಿಸಿದೆ. ಈ ಮೂಲಕ ಅವರು ಸ್ವ-ಪ್ರಾಮುಖ್ಯತೆಯ ಅತಿಯಾದ ಪ್ರಜ್ಞೆಯನ್ನು ಪ್ರದರ್ಶಿಸಿದ್ದಾರೆ ಎಂದು ಆರೋಪಿಸಿದೆ.
ರಾಜಭವನದ ಒಳಗೆ ಶಾಲಾ ವಿದ್ಯಾರ್ಥಿಗಳಿಗಾಗಿ ಚಿತ್ರಕಲಾ ಪ್ರದರ್ಶನ ಮತ್ತು ಚಿತ್ರಕಲಾ ಸ್ಪರ್ಧೆಯ ಉದ್ಘಾಟನೆಗೆ ಮುಂಚಿತವಾಗಿ ಪ್ರತಿಮೆಯನ್ನು ಔಪಚಾರಿಕವಾಗಿ ಅನಾವರಣಗೊಳಿಸಲಾಯಿತು.

ರಾಜ್ಯಪಾಲರು ಅಧಿಕಾರದಲ್ಲಿದ್ದಾಗ ತಮ್ಮ ಪ್ರತಿಮೆಯನ್ನು ಸ್ಥಾಪಿಸಿದ ಬಗ್ಗೆ ಟೀಕೆಗಳು ಭುಗಿಲೆದ್ದಿವೆ. ಅನಾವರಣದ ವೀಡಿಯೊಗಳು ಮತ್ತು ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ.
ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ರಾಜ್ಯಪಾಲರ ವಿರುದ್ಧ ವಾಗ್ದಾಳಿ ನಡೆಸಿದ್ದು, ಇದನ್ನು ಪ್ರಚಾರದ ಸ್ಟಂಟ್ ಎಂದು ಕರೆದಿದೆ.

“ನಮ್ಮ ರಾಜ್ಯಪಾಲ ಸಿ.ವಿ.ಆನಂದ್ ಬೋಸ್ ಅವರು ತಮ್ಮದೇ ಪ್ರತಿಮೆಯನ್ನು ಉದ್ಘಾಟಿಸಿದ್ದಾರೆ. ಯಾಕೆಂದರೆ ಅವ್ರು ಒಂದು ರೀತಿಯ ಪ್ರಚಾರವನ್ನು ಬಯಸಿದ್ದರು. ಆದರೆ ವಿಷಯವೆಂದರೆ, ಮುಂದಿನ ಹೆಜ್ಜೆ ಏನು? ಅವರು ತಮ್ಮ ಸ್ವಂತ ಪ್ರತಿಮೆಗೆ ಮಾಲಾರ್ಪಣೆ ಮಾಡುತ್ತಾರೆಯೇ?” ಎಂದು ತೃಣಮೂಲ ವಕ್ತಾರ ಜಯಪ್ರಕಾಶ್ ಮಜುಂದಾರ್ ಹೇಳಿದ್ದಾರೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ