ದಾರಿಯಲ್ಲಿ ಹಸುಗಳನ್ನು ಕರೆದುಕೊಂಡು ಹೋಗಿದ್ದೆ ತಪ್ಪಂತೆ: ದನಗಾಹಿ ಮೇಲೆ ಗುಂಡು ಹಾರಿಸಿ ದುಷ್ಕರ್ಮಿಗಳು ಎಸ್ಕೇಪ್ - Mahanayaka

ದಾರಿಯಲ್ಲಿ ಹಸುಗಳನ್ನು ಕರೆದುಕೊಂಡು ಹೋಗಿದ್ದೆ ತಪ್ಪಂತೆ: ದನಗಾಹಿ ಮೇಲೆ ಗುಂಡು ಹಾರಿಸಿ ದುಷ್ಕರ್ಮಿಗಳು ಎಸ್ಕೇಪ್

23/09/2023

ಬಿಹಾರದ ಪೂರ್ಣಿಯಾದಲ್ಲಿ ದನಗಾಹಿಯೊಬ್ಬನನ್ನು ಗುಂಡಿಕ್ಕಿ ಕೊಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ. ಹಸುವೊಂದು ಅವರ ವಾಹನಕ್ಕೆ ಡಿಕ್ಕಿ ಹೊಡೆದ ನಂತರ ಬೈಕಿನಲ್ಲಿ ಬಂದ ಮೂವರು ದುಷ್ಕರ್ಮಿಗಳು ದನಗಾಹಿಗಳ ಮೇಲೆ ಗುಂಡು ಹಾರಿಸಿದ್ದರಿಂದ ಈ ಘಟನೆ ನಡೆದಿದೆ.

ಬಂಧಿತರನ್ನು ವಾಸುದೇವ್ ಯಾದವ್ (55) ಮತ್ತು ಪಿಂಕಿ ದೇವಿ (28) ಎಂದು ಗುರುತಿಸಲಾಗಿದೆ. ಭಾರತೀಯ ದಂಡ ಸಂಹಿತೆ ಮತ್ತು ಶಸ್ತ್ರಾಸ್ತ್ರ ಕಾಯ್ದೆಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಗಾಯಗೊಂಡ ದನಗಾಹಿಯ ಹೆಸರು ಲಲಿತ್ ಯಾದವ್. ಇವರು ಮಧುರಾ ಪಶ್ಚಿಮ ಗ್ರಾಮದ ನಿವಾಸಿ. ಅವರು ಪ್ರಸ್ತುತ ಪೂರ್ಣಿಯಾದ ಮ್ಯಾಕ್ಸ್ 7 ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಲಲಿತ್ ಯಾದವ್ ಇವರ ಸಹೋದರ ಸುರೇಶ್ ಕುಮಾರ್ ಅವರ ಪ್ರಕಾರ, ಅವರ ಸಹೋದರ ಜಾನುವಾರುಗಳನ್ನು ಕರೆದುಕೊಂಡು ಮೇಯಿಸಲು ಹೋಗುತ್ತಿದ್ದರು. ಬೈಕಿನಲ್ಲಿದ್ದ ಮೂವರು ದಾರಿ ಬಿಡುವಂತೆ ಹಾರ್ನ್ ಹಾಕಿದ್ದಾರೆ. ಆಗ ಹೆದರಿದ ಹಸು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ನಂತರ ಮೂವರು ಬಬ್ಲುಗೆ ಹೊಡೆಯಲು ಪ್ರಾರಂಭಿಸಿದ್ದಾರೆ.

ಅಲ್ಲದೇ ಅವನ ತಲೆಗೆ ಬಂದೂಕನ್ನು ಹಿಡಿದಿದ್ದಾರೆ.
ಬೈಕ್ ಸವಾರಿ ಮಾಡುತ್ತಿದ್ದ ವ್ಯಕ್ತಿ ಅವನ ಮೇಲೆ ಎರಡು ಗುಂಡುಗಳನ್ನು ಹಾರಿಸಿದ್ದಾನೆ. ಗುಂಡು ಹಾರಿಸಿದ ಎರಡು ಗುಂಡುಗಳಲ್ಲಿ ಒಂದು ಲಲಿತ್ ಎದೆಗೆ ತಗುಲಿದೆ. ಲಲಿತ್ ಗೆ ಗುಂಡು ಹಾರಿಸಿದ ನಂತರ ಬೈಕ್ ನಲ್ಲಿ ಬಂದ ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಅಂತಿಮವಾಗಿ ಅವರನ್ನು ಮ್ಯಾಕ್ಸ್ 7 ಆಸ್ಪತ್ರೆಗೆ ದಾಖಲಿಸುವ ಮೊದಲು ಎರಡು ಆಸ್ಪತ್ರೆಗಳಿಗೆ ಕರೆದೊಯ್ಯಲಾಗಿತ್ತು. ಸದ್ಯ ಅವರು ಗಂಭೀರ ಸ್ಥಿತಿಯಲ್ಲಿದ್ದಾರೆ.

ಇತ್ತೀಚಿನ ಸುದ್ದಿ