ಚಿಕ್ಕಮಗಳೂರು: ಆದಿಶಕ್ಯಾತ್ಮಕ ಶ್ರೀ ದೇವಿರಮ್ಮನವರ ದೀಪೋತ್ಸವ, ಜಾತ್ರಾ ಮಹೋತ್ಸವಕ್ಕೆ ಸಕಲ ಸಿದ್ಧತೆ ಪೂರ್ಣ

ಚಿಕ್ಕಮಗಳೂರು: ತಾಲ್ಲೂಕಿನ ಮಲ್ಲೇನಹಳ್ಳಿ ಗ್ರಾಮ ಹಾಗೂ ಬೆಟ್ಟದಲ್ಲಿ ಅಂಡಿಗ ಆದಿಶಕ್ಯಾತ್ಮಕ ಶ್ರೀ ದೇವಿರಮ್ಮನವರ ದೀಪೋತ್ಸವ ಮತ್ತು ಜಾತ್ರಾ ಮಹೋತ್ಸವ ನಡೆಯಲಿದ್ದು, ಈ ದೀಪೋತ್ಸವ ಮತ್ತು ಜಾತ್ರಾ ಮಹೋತ್ಸವ ಕಾರ್ಯಕ್ರಮಕ್ಕೆ ಸುಮಾರು ಒಂದು ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಭಕ್ತಾಧಿಗಳು ಮತ್ತು ಸಾರ್ವಜನಿಕರು ಮಲ್ಲೇನಹಳ್ಳಿ ಗ್ರಾಮಕ್ಕೆಆಗಮಿಸಿ ಅಲ್ಲಿಂದ ಕಾಲ್ನಡಿಗೆಯಲ್ಲಿ ದೇವಿರಮ್ಮನವರ ಬೆಟ್ಟವನ್ನು ಹತ್ತಿ ದರ್ಶನ ಪಡೆಯಲಿರುತ್ತಾರೆ. ಪೊಲೀಸ್ ಇಲಾಖೆಯಿಂದ ಮುಂಜಾಗೃತವಾಗಿ ಸೂಕ್ತವಾದ ಬಂದೋಬಸ್ತು ವ್ಯವಸ್ಥೆ ಕಲ್ಪಿಸಲಾಗಿದೆ.
ದಿನಾಂಕ:30—10–2024,ರಂದು ಸಂಜೆ 4 ಗಂಟೆಯಿಂದ ಭಕ್ತರು/ಸಾರ್ವಜನಿಕರು, ಮಹಿಳೆಯರು ಮತ್ತು ಮಕ್ಕಳು ಬೆಟ್ಟವನ್ನು ಹತ್ತಲು ಪ್ರಾರಂಭಿಸಿ ದಿನಾಂಕ: 31—10–2024, ರ ಸಾಯಂಕಾಲದವರೆಗೆ ಬೆಟ್ಟದಲ್ಲಿ “ಬಿಂಡಿಗ ಆದಿಶಕ್ಯಾತ್ಮಕ ಶ್ರೀ ದೇವಿರಮ್ಮನವರ “ದರ್ಶನದ ಕಾಯಕ್ರಮ ನಡೆಯುತ್ತಿರುತ್ತದೆ. ಕಳೆದ ವರ್ಷಕ್ಕಿಂತ ಈ ವರ್ಷ ಅತೀ ಹೆಚ್ಚಿನ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳನ್ನು ಬಂದೋಬಸ್ತ್ ಕರ್ತವ್ಯಕ್ಕೆ ನಿಯೋಜಿಸಿರುತ್ತದೆ.
ಸಾರ್ವಜನಿಕರ ಅನುಕೂಲಕ್ಕಾಗಿ 05ಕಡೆಗಳಲ್ಲಿ ಮೆಗಾಫೋನ್ ಮೂಡಿಸಲಾಗುತ್ತದೆ. ಬಿಂಡಿಗಾದಲ್ಲಿ ಒಂದು ತಾತ್ಕಾಲಿಕ ಪೊಲೀಸ್ ಔಟ್ ಪೋಸ್ಟ್ ಮತ್ತು ನಿಸ್ತಂತು ಕೊಠಡಿ ತೆರೆಯಲಾಗಿರುತ್ತದೆ.
ಸಾರ್ವಜನಿಕರಿಗೆ ಅನುಕೂಲವಾಗುವಂತೆ, ಕೆ.ಎಸ್.ಆರ್.ಟಿ.ಸಿ. ವತಿಯಿಂದ ಪ್ರತಿನಿತ್ಯ ಸಂಚರಿಸುವ ಬಸ್ ಗಳಲ್ಲದೆ ಹೆಚ್ಚುವರಿಯಾಗಿ 50 ಕ್ಕೂ ಹೆಚ್ಚು ಬಸ್ ಗಳನ್ನು ನಿಯೋಜಿಸಿರುತ್ತಾರೆ. ಮತ್ತು ತುರ್ತು ಸೇವೆಗಾಗಿ ಕೆಎಸ್ ಆರ್ ಟಿಸಿ ವತಿಯಿಂದ ಒಂದು ಟ್ರಿಕ್ ಮತ್ತು ಒಂದು ಕ್ರೇನ್ ಗಳನ್ನು ಬಳಸಲಾಗುತ್ತದೆ.
ಪಾರ್ಕಿಂಗ್ ವ್ಯವಸ್ಥೆ:
ಬೆಟ್ಟಕ್ಕೆ ಬರುವಂತಹ ಸಾರ್ವಜನಿಕರಿಗೆ ಕೆ.ಎಸ್.ಆರ್.ಟಿ.ಸಿ. ಬಸ್ಸಿನಲ್ಲಿ ಬರಲು ಸೂಚಿಸಿದೆ ಹಾಗೂ ಖಾಸಗಿ ವಾಹನಗಳಲ್ಲಿ ಬಂದಲ್ಲಿ ಪಾರ್ಕಿಂಗ್ ಸಮಸ್ಯೆ ಆಗುವ ಸಾಧ್ಯತೆ ಇರುತ್ತದೆ.
* ಚಿಕ್ಕಮಗಳೂರು ಕಡೆಯಿಂದ ಬೆಟ್ಟಕ್ಕೆ ಹೋಗುವ ಸಾರ್ವಜನಿಕರ ವಾಹನಗಳನ್ನು ಮಲ್ಲೇನಹಳ್ಳಿ ಹೈಸ್ಕೂಲ್ ಮೈದಾನದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿರುತ್ತದೆ.
* ತರೀಕೆರೆ ಕಡೆಯಿಂದ ಬರುವ ಸಾರ್ವಜನಿಕರ ವಾಹನಗಳಿಗೆ ಕುಮಾರಗಿರಿಯ ಹತ್ತಿರ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿರುತ್ತದೆ.
* ತರೀಕೆರೆ ಕಡೆಯಿಂದ ಚಿಕ್ಕಮಗಳೂರಿಗೆ ಬರುವ ( ಶ್ರೀ ದೇವಿರಮ್ಮ ಬೆಟ್ಟಕ್ಕೆ ಬರುವ ವಾಹನಗಳನ್ನು ಹೊರತುಪಡಿಸಿ) ವಾಹನಗಳು ದಿನಾಂಕ 30—10–2024 ರಂದು ಸಂಜೆ 4 ಗಂಟೆಯಿಂದ ದಿನಾಂಕ 31—10–2024 ರ ಮಧ್ಯಾಹ್ನ 12 ಗಂಟೆಯವರೆಗೆ ಕಡೂರು ಮಾರ್ಗವಾಗಿ ಬರುವಂತೆ ಮಾನ್ಯ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿರುತ್ತಾರೆ.
ಶ್ರೀ ದೇವಿರಮ್ಮ ದೇವಿಯ ಜಾತ್ರಾಮಹೊತ್ಸವ ಮತ್ತು ದೀಪೊತ್ಸವದ ಅಂಗವಾಗಿ ಮಲ್ಲೇನಹಳ್ಳಿ ಗ್ರಾಮದ ಸುತ್ತಾಮುತ್ತಾ 10 ಕಿ.ಮಿ. ರವರೆಗೆ ದಿನಾಂಕ 30–10–2024 ರಂದು ಬೆಳಿಗ್ಗೆ 6 ಗಂಟೆಯಿಂದ ದಿನಾಂಕ 31–10–2024 ರ ಬೆಳಿಗ್ಗೆ 6 ಗಂಟೆಯವರೆಗೆ ಮದ್ಯ ಮಾರಾಟವನ್ನು ನಿಷೇಧಿಸಿ ಮಾನ್ಯ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿರುತ್ತಾರೆ.
* ಬಿಂಡಿಗ ಮಲ್ಲೇನಹಳ್ಳಿಯಲ್ಲಿ ತಜ್ಞ ವೈದ್ಯರೊಂದಿಗೆ ಒಂದು ತಾತ್ಕಾಲಿಕ ಆಸ್ಪತ್ರೆ ತೆರೆದಿರುತ್ತದೆ.
ತುರ್ತು ಸೇವೆಗಾಗಿ ಒಟ್ಟು 04 ಆಂಬುಲೆನ್ಸ್ಗಳನ್ನು ನಿಯೋಜನೆ ಮಾಡಿರುತ್ತದೆ. ಇವುಗಳ ಪೈಕಿ ಒಂದು ಆಂಬ್ಯುಲೆನ್ಸ್ ಅನ್ನು ಸಂಚಾರ (ಮೊಬೈಲ್ ಅಂಬ್ಯುಲೆನ್ಸ್ ಆಗಿರುತ್ತದೆ), ಒಂದು ಬೆಟ್ಟದ ಸಮೀಪ, ಇನ್ನೊಂದು ಮಲ್ಲೇನಹಳ್ಳಿಯ ಹೈಸ್ಕೂಲ್ ಬಳಿ ಇನ್ನೊಂದು ಮಾಣಿಕ್ಯಧಾರದಲ್ಲಿ ನಿಯೋಜನೆ ಮಾಡಿರುತ್ತದೆ.
ಚಿಕ್ಕಮಗಳೂರು ಎಂ.ಜಿ. ಆಸ್ಪತ್ರೆಯಲ್ಲಿ ಒಂದು ಎಮರ್ಜೆನ್ಸಿ ವಾರ್ಡ್:
ಈ ಬೆಟ್ಟ ಹತ್ತುವ ಮಾರ್ಗ ಮಧ್ಯದಲ್ಲಿ ಆಸ್ಪತ್ರೆ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಬೆಟ್ಟದಲ್ಲಿ ಆಕಸ್ಮಿಕವಾಗಿ ಅಪಘಾತ ಸಂಭವಿಸಿದಲ್ಲಿ ಬೆಟ್ಟದಲ್ಲಿ ಸೈಕರ್ ವ್ಯವಸ್ಥೆಯನ್ನು ಸಹ ಮಾಡಲಾಗಿದೆ.
” ಅಗ್ನಿಶಾಮಕ 4 ಒಟ್ಟು 2 ಅಗ್ನಿಶಾಮಕ ವಾಹನಗಳನ್ನು ನಿಯೋಜಿಸಿರುತ್ತದೆ. ಮಲ್ಲೇನಹಳ್ಳಿ, ಇನ್ನೊಂದು ಮಾಣಿಕ್ಯಧಾರದಲ್ಲಿ ನಿಯೋಜಿಸಿರುತ್ತದೆ.
ಸಾರ್ವಜನಿಕರಿಗೆ ಅನುಕೂಲವಾಗುವಂತೆ, ಅಗ್ನಿ ಶಾಮಕ ದಳದ ವತಿಯಿಂದ 04 ವಿವಿಧ ರೋಪ್ ತಂಡಗಳನ್ನು ವಿಭಜಿಸಿ ನಿಯೋಜಿಸಿರುತ್ತದೆ.
ಕಾಡು ಪ್ರಾಣಿಗಳಿಂದ ಸಾರ್ವಜನಿಕರಿಗೆ ತೊಂದರೆ ಆಗದಂತೆ ಹಾಗೂ ಶ್ರೀ ದೇವಿರಮ್ಮ ಬೆಟ್ಟ ಹತ್ತುವ ಮಾರ್ಗದಲ್ಲಿ ಅಪಾಯಕಾರಿ ಮರಗಿಡಗಳ ರೆಂಬೆಕೊಂಬೆಗಳನ್ನು ಕಡಿದು ತೆರವುಗೊಳಿಸುವಂತೆ ಸದರಿ ಮಾರ್ಗದಲ್ಲಿ ಇರುವ ಒಣಗಿದ ಮರಗಿಡಗಳನ್ನು ತೆರವುಗೊಳಿಸುವಂತೆ ಅರಣ್ಯ ಇಲಾಖೆಯವರು ಮುಂಜಾಗ್ರತ ಕ್ರಮ ಕೈಗೊಳ್ಳುವಂತೆ ಕೋರಲಾಗಿರುತ್ತದೆ.
ಮೆಸ್ಕಾಂ ಇಲಾಖೆಯಿಂದ ವಿದ್ಯುತ್ ಸರಬರಾಜು ಅಡಚಣೆ ಆಗದಂತೆ ಕ್ರಮ:
ಶ್ರೀ ದೇವಿರಮ್ಮ ಜಾತ್ರೆಯ ಸಂಬಂದ ಚಿಕ್ಕಮಗಳೂರು ನಗರದಿಂದ ಬಿಂಡಗಾ ಮಲ್ಲೇನಹಳ್ಳಿ ಹಾಗೂ ತರೀಕೆರೆಯಿಂದ ಮಲ್ಲೇನಹಳ್ಳಿಗೆ ಪರ್ಮಿಟ್ ಇಲ್ಲದ ಯಾವುದೇ ಖಾಸಗಿ ಬಸ್ಗಳ ಸಂಚಾರವನ್ನು ನಿಷೇಧಿಸುವಂತೆ ಮಾನ್ಯ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿರುತ್ತದೆ.
ಈ ಬಾರಿ ಹೆಚ್ಚಿನ ಮಳೆಯಾಗಿದ್ದರಿಂದ ಬೆಟ್ಟದಲ್ಲಿ ಸಾರ್ವಜನಿಕರಿಗೆ ಯಾವಯಾವ ಸಮಸ್ಯೆ ಎದುರಿಸಬಹುದು ಎಂದು ನೋಡಲು ಕಂದಾಯ ಇಲಾಖೆ, ಪೊಲೀಸ್ ಇಲಾಖೆ ಅಧಿಕಾರಿಗಳು, ಅರಣ್ಯ ಇಲಾಖೆ, ಅಡೈಂಚರ್ ಕ್ಲಬ್ ಸದಸ್ಯರು, ಭೂ ಮತ್ತು ಗಣಿ ಇಲಾಖಾ ಸಿಬ್ಬಂದಿಗಳು, ಅರಣ್ಯ ಇಲಾಖಾ ಅಧಿಕಾರಿ ಸಿಬ್ಬಂದಿಗಳು, ಅಗ್ನಿ ಶಾಮಕ ದಳದ ಅಧಿಕಾರಿ ಸಿಬ್ಬಂದಿಗಳು. ಹಾಗೂ ಶ್ರೀ ದೇವಿರಮ್ಮ ದೇವಸ್ಥಾನದ ಕಮಿಟಿಯವರು ಪೂರ್ವ ಭಾವಿ ಸಿದ್ಧತೆಗಾಗಿ ಬೆಟ್ಟವನ್ನು ಪರೀಶಿಲಿಸಿರುತ್ತದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: