ಪ್ರಧಾನಿ ಮೋದಿ ಆಕ್ಷೇಪಾರ್ಹ ಭಾಷಣದ ವಿರುದ್ಧ ಕಾನೂನು ಕ್ರಮಕ್ಕೆ ಕಾಂಗ್ರೆಸ್ ಆಗ್ರಹ - Mahanayaka

ಪ್ರಧಾನಿ ಮೋದಿ ಆಕ್ಷೇಪಾರ್ಹ ಭಾಷಣದ ವಿರುದ್ಧ ಕಾನೂನು ಕ್ರಮಕ್ಕೆ ಕಾಂಗ್ರೆಸ್ ಆಗ್ರಹ

23/04/2024


Provided by

ಕಾಂಗ್ರೆಸ್ ಮುಖಂಡ ಮತ್ತು ವಕೀಲ ಅಭಿಷೇಕ್ ಮನು ಸಿಂಘ್ವಿ ಅವರು ರಾಜಸ್ಥಾನ ರ್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಇತ್ತೀಚಿನ ಹೇಳಿಕೆಯನ್ನು ‘ಗಂಭೀರ ಆಕ್ಷೇಪಾರ್ಹ’ ಎಂದು ಆರೋಪಿಸಿದ್ದಾರೆ. ಕಾಂಗ್ರೆಸ್ ಪಕ್ಷವು ಭಾರತದ ಚುನಾವಣಾ ಆಯೋಗಕ್ಕೆ (ಇಸಿಐ) ಸಲ್ಲಿಸಿದ ಅರ್ಜಿಯಲ್ಲಿ ‘ವ್ಯಕ್ತಿಯ ಸ್ಥಾನಮಾನವನ್ನು ಲೆಕ್ಕಿಸದೆ’ ಪ್ರಧಾನಿ ವಿರುದ್ಧ ‘ಸೂಕ್ತ ಕ್ರಮ’ ತೆಗೆದುಕೊಳ್ಳುವಂತೆ ಒತ್ತಾಯಿಸಿದೆ ಎಂದು ಹೇಳಿದ್ದಾರೆ.

ಚುನಾವಣಾ ಆಯೋಗಕ್ಕೆ ಸುಮಾರು ೧೭ ದೂರುಗಳನ್ನು ಕಾಂಗ್ರೆಸ್ ನಿಯೋಗವು ನೀಡಿದೆ ಎಂದು ಸಿಂಘ್ವಿ ಮಾಹಿತಿ ನೀಡಿದರು. ಚುನಾವಣಾ ಆಯೋಗದೊಂದಿಗಿನ ಸಭೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಆ ದೂರುಗಳಲ್ಲಿ, ಅತ್ಯಂತ ನಿರ್ಣಾಯಕವಾದದ್ದು ಪ್ರಧಾನಿ ಮೋದಿ ಮಾಡಿದ ಕಾಮೆಂಟ್ ಗೆ ಸಂಬಂಧಿಸಿದೆ ಎಂದು ಅವರು ಹೇಳಿದ್ದಾರೆ.

“ಅವರು ಹೊಂದಿರುವ ಹುದ್ದೆಯನ್ನು ನಾವು ಗೌರವಿಸುತ್ತೇವೆ. ಅವರು ನಿಮ್ಮಂತೆಯೇ ನಮ್ಮ ಪ್ರಧಾನಿ. ಅವರು ಬಿಜೆಪಿಯವರು. ದುರದೃಷ್ಟವಶಾತ್, ನಾವು ಉಲ್ಲೇಖಿಸಿದ ಅವರ ಹೇಳಿಕೆ ಗಂಭೀರವಾಗಿ, ಹಾಸ್ಯಾಸ್ಪದವಾಗಿ ಆಕ್ಷೇಪಾರ್ಹವಾಗಿದೆ” ಎಂದು ಸಿಂಘ್ವಿ ಹೇಳಿದ್ದಾರೆ. ಈ ಹೇಳಿಕೆಯನ್ನು ಹಿಂತೆಗೆದುಕೊಳ್ಳುವಂತೆ ಮತ್ತು ಸ್ಪಷ್ಟೀಕರಣವನ್ನು ನೀಡುವಂತೆ ಪ್ರಧಾನಿ ಮೋದಿಯವರನ್ನು ವಿನಂತಿಸಿದ್ದಾರೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ