ಚಿಕ್ಕಮಗಳೂರು: ಕಾಫಿನಾಡಲ್ಲಿ ಮತ್ತೊಂದು ರೈತ ಆತ್ಮಹತ್ಯೆ -– ಸಾಲದ ಸಂಕಷ್ಟಕ್ಕೆ ಯುವ ಕೃಷಿಕ ಬಲಿ - Mahanayaka

ಚಿಕ್ಕಮಗಳೂರು: ಕಾಫಿನಾಡಲ್ಲಿ ಮತ್ತೊಂದು ರೈತ ಆತ್ಮಹತ್ಯೆ -– ಸಾಲದ ಸಂಕಷ್ಟಕ್ಕೆ ಯುವ ಕೃಷಿಕ ಬಲಿ

stop suicide
02/06/2025

ಚಿಕ್ಕಮಗಳೂರು: ಜಿಲ್ಲೆಯಲ್ಲಿ ರೈತರ ಆತ್ಮಹತ್ಯೆ ಸರಣಿ ಮುಂದುವರೆದಿದ್ದು, ನಿನ್ನೆ ಮತ್ತೊಬ್ಬ ಕಾಫಿ ಬೆಳೆಗಾರನು ಸಾಲದ ಬಾಧೆಯಿಂದ  ಆತ್ಮಹತ್ಯೆಗೆ ಶರಣಾಗಿದ್ದಾರೆ.


Provided by

ತಾಲೂಕಿನ ಮಾಣಿಮಕ್ಕಿ ಗ್ರಾಮದ ನಿವಾಸಿ ಅರುಣ್ (35) ಎಂಬ ಯುವ ರೈತ ತನ್ನ ಮನೆಯಲ್ಲೇ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಕೈಸಾಲ ಸೇರಿ ವಿವಿಧ ರಾಷ್ಟ್ರೀಯ ಬ್ಯಾಂಕ್‌ ಗಳಿಂದ ಸಾವಿರಾರು ರೂಪಾಯಿ ಸಾಲ ಪಡೆದಿದ್ದ ಅರುಣ್, ಸಾಲ ತೀರಿಸಲಾಗದೆ ತೀವ್ರ ಮಾನಸಿಕ ದೌರ್ಬಲ್ಯಕ್ಕೆ ಒಳಗಾಗಿದ್ದರೂ ಸಹಾಯ ದೊರೆತಿಲ್ಲ.

ಘಟನೆಯ ಕುರಿತು ಆಲ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ. ಪ್ರತಿ ವರ್ಷಾ ಕಾಫಿ ಬೆಳೆಗಾರರು ಹವಾಮಾನ ವೈಪರೀತ್ಯ, ಬೆಲೆ ಇಳಿಕೆ ಹಾಗೂ ಸಾಲದ ಬಾಧೆಯಿಂದ ಸಂಕಷ್ಟ ಅನುಭವಿಸುತ್ತಿರುವುದು ಕರ್ನಾಟಕದ ಹಸಿರು ಬೆಲ್ಟ್‌ ಗೆ ಕತ್ತಲೆ ನೆರಳು ಬೀರುತ್ತಿರುವುದು ಸ್ಪಷ್ಟವಾಗಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ