ಗಾಝಾ ಕದನ ವಿರಾಮಕ್ಕೆ ಇಸ್ರೇಲ್ ಒಪ್ಪಿದರೆ ಹೋರಾಟ ನಿಲ್ಲಿಸಲು ಸಿದ್ಧ: ಹಮಾಸ್ ಹೇಳಿಕೆ

ತನ್ನ ಗೂಢಚಾರ ಮುಖ್ಯಸ್ಥರು ಗಾಝಾ ಕದನ ವಿರಾಮ ಮಾತುಕತೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಇಸ್ರೇಲ್ ಹೇಳಿದೆ. ಈ ಮಧ್ಯೆ ಯುದ್ಧವನ್ನು ಕೊನೆಗೊಳಿಸುವ ದೀರ್ಘಕಾಲದ ಪ್ರಯತ್ನಗಳು ವೇಗವನ್ನು ಪಡೆಯುತ್ತಿರುವಂತೆ ತೋರುತ್ತಿರುವುದರಿಂದ ಕದನ ವಿರಾಮವನ್ನು ತಲುಪಿದರೆ ಹೋರಾಟವನ್ನು ನಿಲ್ಲಿಸುವುದಾಗಿ ಹಮಾಸ್ ಪ್ರತಿಜ್ಞೆ ಮಾಡಿದೆ.
ಕಳೆದ ವಾರ ಹಮಾಸ್ ನಾಯಕ ಯಾಹ್ಯಾ ಸಿನ್ವರ್ ಅವರ ಹತ್ಯೆಯು ಒಪ್ಪಂದಕ್ಕೆ ತೆರೆಯಬಹುದು ಎಂದು ಯುನೈಟೆಡ್ ಸ್ಟೇಟ್ಸ್ ಭರವಸೆ ವ್ಯಕ್ತಪಡಿಸಿದ್ದರೂ, ವರ್ಷವಿಡೀ ಯುದ್ಧವನ್ನು ನಿಲ್ಲಿಸುವ ಈ ಹಿಂದಿನ ಪ್ರಯತ್ನಗಳು ವಿಫಲವಾಗಿತ್ತು.
ದೋಹಾ ಮೂಲದ ನಾಯಕತ್ವದ ನಿಯೋಗವು ಗುರುವಾರ ಕೈರೋದಲ್ಲಿ ಈಜಿಪ್ಟ್ ಅಧಿಕಾರಿಗಳೊಂದಿಗೆ ಗಾಝಾ ಒಪ್ಪಂದಕ್ಕೆ ಸಂಬಂಧಿಸಿ ಚಚೆ ನಡೆಸಿದೆ ಎಂದು ಹಿರಿಯ ಹಮಾಸ್ ಅಧಿಕಾರಿ ಎಎಫ್ಪಿಗೆ ತಿಳಿಸಿದ್ದಾರೆ.
“ಹೋರಾಟವನ್ನು ನಿಲ್ಲಿಸಲು ಹಮಾಸ್ ಸಮ್ಮತಿ ವ್ಯಕ್ತಪಡಿಸಿದೆ. ಆದರೆ ಇಸ್ರೇಲ್ ಕದನ ವಿರಾಮಕ್ಕೆ ಬದ್ಧವಾಗಿರಬೇಕು.
ಗಾಝಾ ಪಟ್ಟಿಯಿಂದ ಸೈನ್ಯವನ್ನು ಹಿಂತೆಗೆದುಕೊಳ್ಳಬೇಕು. ಸ್ಥಳಾಂತರಗೊಂಡ ಜನರನ್ನು ಹಿಂದಿರುಗಿಸಲು ಅವಕಾಶ ನೀಡಬೇಕು. ಪ್ರಮುಖ ಖೈದಿಗಳ ವಿನಿಮಯ ಒಪ್ಪಂದಕ್ಕೆ ಒಪ್ಪಿಕೊಳ್ಳಬೇಕು ಮತ್ತು ಗಾಝಾಗೆ ಮಾನವೀಯ ನೆರವಿನ ಪ್ರವೇಶಕ್ಕೆ ಅವಕಾಶ ನೀಡಬೇಕು” ಎಂದು ಅಧಿಕಾರಿ ಹೇಳಿದರು.
ಕೈರೋದಲ್ಲಿನ ಮಾತುಕತೆಗಳು ಕದನ ವಿರಾಮ ಮಾತುಕತೆಗಳನ್ನು ಪುನರಾರಂಭಿಸಲು ಈಜಿಪ್ಟ್ ನಲ್ಲಿ ನಡೆಯುತ್ತಿರುವ ಪ್ರಯತ್ನಗಳ ಭಾಗವಾಗಿದೆ ಎಂದು ಅವರು ಹೇಳಿದರು.
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಗಾಝಾದಲ್ಲಿ ಇನ್ನೂ ವಶದಲ್ಲಿರುವ ಒತ್ತೆಯಾಳುಗಳ ಬಿಡುಗಡೆಗಾಗಿ ಒಪ್ಪಂದಕ್ಕೆ ಬರಲು ಈಜಿಪ್ಟಿನ ಸಿದ್ಧತೆಯನ್ನು ಸ್ವಾಗತಿಸುವುದಾಗಿ ಹೇಳಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth