ದುರಂತ: ಸಾಕು ನಾಯಿ ಕಚ್ಚಿ ತಂದೆ, ಮಗ ಸಾವು - Mahanayaka

ದುರಂತ: ಸಾಕು ನಾಯಿ ಕಚ್ಚಿ ತಂದೆ, ಮಗ ಸಾವು

27/06/2024

ನಾಯಿ ಕಡಿತದಿಂದ ತಂದೆ ಮತ್ತು ಮಗ ಮೃತಪಟ್ಟಿರುವ ಘಟನೆ ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ನಡೆದಿದೆ. ವರದಿಗಳ ಪ್ರಕಾರ, ವಿಶಾಖಪಟ್ಟಣಂನ ಭೀಮ್ಲಿ ನಿವಾಸಿಗಳಾದ 59 ವರ್ಷದ ನರಸಿಂಗರಾವ್ ಮತ್ತು ಅವರ 27 ವರ್ಷದ ಮಗ ಭಾರ್ಗವ್ ಒಂದು ವಾರದ ಹಿಂದೆ ತಮ್ಮ ಸಾಕು ನಾಯಿಯಿಂದ ಕಚ್ಚಲ್ಪಟ್ಟರು, ಆದರೆ ಅವರು ತಕ್ಷಣದ ವೈದ್ಯಕೀಯ ಚಿಕಿತ್ಸೆಯನ್ನು ಪಡೆದಿರಲಿಲ್ಲ.

ಈ ಘಟನೆ ನಡೆದ ಎರಡು ದಿನಗಳ ನಂತರ ನಾಯಿ ಸತ್ತಾಗ, ತಂದೆ-ಮಗ ಇಬ್ಬರೂ ರೇಬಿಸ್ ವಿರೋಧಿ ಚುಚ್ಚುಮದ್ದನ್ನು ತೆಗೆದುಕೊಳ್ಳಲು ಹೋಗಿದ್ದಾರೆ. ಆದರೆ ಅದು ಅವರಿಗೆ ತುಂಬಾ ತಡವಾಗಿತ್ತು.

ದುರದೃಷ್ಟವಶಾತ್, ರೇಬಿಸ್ ವೈರಸ್ ಈಗಾಗಲೇ ಅವರ ಮೆದುಳು ಮತ್ತು ಯಕೃತ್ತಿಗೆ ಸೋಂಕು ತಗುಲಿತ್ತು. ಇಬ್ಬರೂ ಮಾರಣಾಂತಿಕ ಸೋಂಕಿಗೆ ಬಲಿಯಾಗಿದ್ದಾರೆ.
ಹೈದರಾಬಾದ್ ನ ಮಣಿಕೊಂಡದ ಚಿತ್ರಪುರಿ ಬೆಟ್ಟದಲ್ಲಿ ಬೆಳಿಗ್ಗೆ ವಾಕಿಂಗ್ ಮಾಡುತ್ತಿದ್ದ ಮಹಿಳೆಯ ಮೇಲೆ 15 ಬೀದಿ ನಾಯಿಗಳು ದಾಳಿ ಮಾಡಿದ ಕೆಲವೇ ದಿನಗಳಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ಮುಂಜಾನೆ ಈ ದಾಳಿ ನಡೆದಿದ್ದು, ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.


Provided by
Provided by

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ