ಕಂಟೈನರ್ ನಡಿಗೆ ಬಿದ್ದು ಬೈಕ್ ಸವಾರನ ದಾರುಣ ಸಾವು: ಇಂದು ಮಧ್ಯಾಹ್ನ ನಡೆದ ಘಟನೆ - Mahanayaka

ಕಂಟೈನರ್ ನಡಿಗೆ ಬಿದ್ದು ಬೈಕ್ ಸವಾರನ ದಾರುಣ ಸಾವು: ಇಂದು ಮಧ್ಯಾಹ್ನ ನಡೆದ ಘಟನೆ

06/12/2020

ಮಂಗಳೂರು: ಕಂಟೈನಡಿಗೆ ಬಿದ್ದ ಪರಿಣಾಮ ಬೈಕ್ ಸವಾರ ಮೃತಪಟ್ಟ ಘಟನೆ ನಗರದ ಪಡೀಲ್ ನಲ್ಲಿ ನಡೆದಿದ್ದು, ನಂತೂರಿನ ಕಡೆಯಿಂದ ಪಡೀಲ್  ಕಡೆಗೆ ಬರುತ್ತಿದ್ದ ಕಂಟೈನರ್ ಗೆ ಬೈಕ್ ಡಿಕ್ಕಿ ಹೊಡೆದಿದೆ.

ನೀರುಮಾರ್ಗದ ಮನ್ವಿತ್(22) ಮೃತಪಟ್ಟ ಬೈಕ್ ಸವಾರ.  ರವಿವಾರ 11:45ರ ಸುಮಾರಿಗೆ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.

ಮೃತ ಮನ್ವಿತ್ ಪ್ರಯಾಣಿಸುತ್ತಿದ್ದ ಬೈಕ್  ಡಿವೈಡರ್ ಗೆ ಡಿಕ್ಕಿ ಹೊಡೆದು ಹಾರಿದ್ದು, ಈ ವೇಳೆ ಬೈಕ್ ನಿಂದ ಎಸೆಯಲ್ಪಟ್ಟ ಮನ್ವಿತ್ ಎದುರಿನಿಂದ ಬರುತ್ತಿದ್ದ ಕಂಟೈನರ್ ನ ಅಡಿಗೆ ಬಿದ್ದಿದ್ದಾರೆ.  ಈ ಸಂದರ್ಭದ ಅವರ ಮೇಲೆ ಕಂಟೈನರ್ ಹರಿದು ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಇತ್ತೀಚಿನ ಸುದ್ದಿ